Saturday, July 27, 2024

Latest Posts

ದಿಂಗಾಲೇಶ್ವರ ಸ್ವಾಮೀಜಿಯ ರಾಜಕೀಯ ನಡೆ ಬಗ್ಗೆ ಸಿಎಮ್ ಇಬ್ರಾಹಿಂ ಸ್ಪೋಟಕ ಮಾಹಿತಿ

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಮಾತನಾಡಿದ ಸಿಎಂ ಇಬ್ರಾಹಿಂ, ನಾನು ಕೇಶವಕೃಪದಲ್ಲಿ ಗೌರವ ಸಿಗಲ್ಲ ಎಂದು ದೇವೆಗೌಡರಿಗೆ ಹೇಳಿದ್ದೆ. ಬಸವಕೃಪದಲ್ಲಿರೋದು ಒಳ್ಳೆದು ಎಂದಿದ್ದೆ. ಇದನ್ನು ದೇವೆಗೌಡರು ಚುನಾವಣೆಯಾದ ಕೆಲವೇ ದಿನಗಳಲ್ಲಿ ಬಿಜೆಪಿಯವರು ಸಹಾಯ ಮಾಡಲಿಲ್ಲ ಎಂದು ಹೇಳಿದ್ದಾರೆ ಎಂದು ಪರೋಕ್ಷವಾಗಿ ಮೈತ್ರಿ ಬೇಡ ಅಂತಾ ಹೇಳಿದ್ದೆ ಎಂದು ಹೇಳಿದ್ದಾರೆ.

ನಾನು ಅವತ್ತೆ ದೇವೆಗೌಡರಿಗೆ ಹೇಳಿದ್ದೆ, ಇವತ್ತು ಅವನು ಜರ್ಮನ್ ಗೆ ಹೋಗಿದಾನೆ. ಯಾವ ವಿಡಿಯೋ ಬರತ್ತೋ ,ಇನ್ನೆಲ್ಲಿ ಹೋಗ್ತಾನೋ ಗೊತ್ತಿಲ್ಲ. ಲೋಕಸಭೆ ಚುನಾವಣೆ ಬಳಿಕ  ಮೂರನೇ ಶಕ್ತಿ ಒಂದುಗೂಡಿಸುತ್ತೇನೆ. ನಾನು ದಿಂಗಾಲೇಶ್ವರ ಸ್ವಾಮೀಜಿ ಜೊತೆ ಮೂರು ಗಂಟೆ ಮಾತಾಡಿದ್ದೇನೆ. ಅವರೊಟ್ಟಿಗೆ ಮೂರನೇ ಶಕ್ತಿ ಹುಟ್ಟು ಹಾಕೋ ಬಗ್ಗೆ ಚರ್ಚೆ ನಡೆದಿದೆ ಎಂದು ಇಬ್ರಾಹಿಂ ಹೇಳಿದ್ದಾರೆ.

ವಿಧಾನಸೌಧ ನಿಧಾನಸೌಧ ಆಗಿದೆ. ನಮ್ಮ ತಾಯ್ನಾಡು ಚೆನ್ನಾಗಿದ್ರು ದೇಶ ಚೆನ್ನಾಗಿರತ್ತೆ. ಒಬ್ಬ ರಾಷ್ಟ್ರದ ಪ್ರಧಾನಿ ಹಿಂದೂ ಮುಸ್ಲಿಂ ಬಗ್ಗೆ ಮಾತಾಡ್ತಾರೆ. ಭಾರತ ಕೂಡಸೋ ಬಗ್ಗೆ ಹಿಂದಿನ ಪ್ರಧಾನಿಗಳು ಮಾತಾಡಿದ್ರು. ಇವರು ಭಾರತ ಒಡೆಯೋ ಮಾತಾಡ್ತೀದಾರೆ. ಲೋಕಸಭೆಯಲ್ಲಿ ಜನ ತಕ್ಕ ಪಾಠ ಕಲಿಸುತ್ತಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ತಪ್ಪಿನಿಂದ ಬಿಜೆಪಿ ಬೆಳೆಯುತ್ತಿದೆ. ಇವತ್ತು ಬಸವತತ್ವದ ಆಧಾರದ ಮೇಲೆ ಸಂಘಟನೆ ಮಾಡಬೇಕಿದೆ. ನಾವು ಇದನ್ನು ತೀರ್ಮಾನ ಮಾಡಿದ್ದೇವೆ. ದಿಂಗಾಲೇಶ್ವರ ಸ್ವಾಮೀಜಿ ಕೆಲವೇ ದಿನಗಳಲ್ಲಿ ಸ್ಟೇಟಮೆಂಟ್ ಮಾಡ್ತಾರೆ. ಜೋಶಿ ಸೋಲಿಸಲು, ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ವೋಟ್ ಮಾಡಿ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳ್ತಾರೆ ಎಂದು ದಿಂಗಾಲೇಶ್ವ ಸ್ವಾಮೀಜಿ ರಾಜಕೀಯ ನಡೆ ಬಗ್ಗೆ ಸಿಎಂ ಇಬ್ರಾಹಿ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಇವತ್ತು ರಾತ್ರಿ‌ ಕೂಡಾ ನಾನು ಕೆಲವರ ಜೊತೆ ಚರ್ಚೆ ಮಾಡ್ತೀನಿ. ಮೋದಿ ಮೇಲೆ ವ್ಯಾಮೋಹ ಹೋಯ್ತು, ಮೋದಿ ವೋಟಿಂಗ್ ಪರ್ಸೆಂಟೆಜ್ ನೋಡಿ ರಾಜೀನಾಮೆ ಕೊಡಬೇಕಿತ್ತು. ನೀವು ಸರಿ ಇಲ್ಲ, ಅವರು ಸರಿ ಇಲ್ಲ‌. ಇಂಡಿಯಾ ಘಟಬಂಧನ ಹಸ್ತದ ಗುರುತಿಗೆ ವೋಟ್ ಕೊಡಿ. ಜನತಾದಳದ ಕೇಸ್ ಕೋರ್ಟ್ ನಲ್ಲಿ ನಡೀತಿದೆ. ರಾಷ್ಟ್ರಾಧ್ಯಕ್ಷರಿಗೆ ನನ್ನ ತಗೆಯೋ ಹಕ್ಕಿಲ್ಲ. ನಾನ ಸರಿನೋ ಅಪ್ಪ ಮಗನೇ ಅಧ್ಯಕ್ಷ ಮಾಡಿದ್ದು ಸರಿನೇ‌‌. ನ್ಯಾಯಾಲಯಕ್ಕೆ ನನ್ನ ಮನವಿ ಇದೆ, ತೀರ್ಪು ಕೊಡಿ. ಬಾಗಲಕೋಟೆಯಲ್ಲಿ ಸಂಯುಕ್ತಾ ಪಾಟೀಲ್ ಗೆಲ್ತಾರೆ.. ದೇಶದ ಸಂವಿಧಾನ ಉಳಿಯಬೇಕು.

ಕಾಂಗ್ರೆಸ್ ನವರು ನನ್ನ ಕರದಿಲ್ಲ. ಪಾಪ ಆ ಹೆಣ್ಮಗು ಸತ್ತಿದೆ, ಈ ಹುಚ್ಚ ಮುಂಡೆ ಮಕ್ಕಳು ಆ ಮಗು ಫೋಟೋ ಹಿಡಿದು ಓಡಾಡ್ತಿವೆ. ಸತ್ತವರ ಹೆಸರ ಮೇಲೆ ವೋಟ್ ಕೇಳತಿವೆ. ಜೋಶಿ ಏನ್ ಬಂತು ನಿನಗೆ..? ನೇಹಾ ಕೊಲೆ ಮಾಡಿದ ಫಯಾಜ್ ನನ್ನ ಅವತ್ತೆ ಗಲ್ಲಗೇರಿಸಬೇಕಿತ್ತು. ಪ್ರಜ್ವಲ್ 600 ಜನ ಹುಡಗೀರಿಗೆ ಸೀರೆ ಎಳೆದಾನೆ, ಪಿನ್ ಚುಚ್ಚಿದಾನೆ. ಯಡಿಯೂರಪ್ಪ, ಜೋಶಿ ಯಾಕೆ ಮಾತಾಡಿಲ್ಲ..? ಮೋದಿ ಇದೇನಾ ಅಚ್ಚೇದಿನ್ ನಾ..? ಪ್ರಜ್ವಲ್ ರನ್ನ ಪಕ್ಷದಿಂದ ಹೊರಗಡೆ ಹಾಕೀವಿ ಅಂತಾರೆ. ಬಸರಿ ಆದ ಮೇಲೆ ಹೊರಗಡೆ ಹಾಕಿದ್ರೇನೂ, ಅವರ ಮಕ್ಕಳಿಗೆ ಪರಿಹಾರ ಕೊಡೋದು ಯಾರು ಎಂದು ಇಬ್ರಾಹಿಂ ಪ್ರಶ್ನಿಸಿದ್ದಾರೆ.

ಎರಡು ತಿಂಗಳ ಬಳಿಕ ಮಠಾಧೀಶರು, ದಲಿತರು, ಮುಸ್ಲಿಂ ರ ಮೂರನೇ ಶಕ್ತಿ ಹುಟ್ಟು ಹಾಕ್ತಿವಿ. ಒಬ್ಬರು ಬ್ರಹ್ಮಾಚಾರಿಗೆ ಶಕ್ತಿ ಕೊಡ್ತೀವಿ. ಮುಂದೆ ಕರ್ನಾಟಕ ದಲ್ಲಿ ಮೂರನೇ ಶಕ್ತಿ ಅಧಿಕಾರಕ್ಕೆ ಬರತ್ತೆ.. ಹೊಸ ಪ್ರಾದೇಶಿಕ ಪಕ್ಷ ಬರತ್ತೆ. ಕುಮಾರಸ್ವಾಮಿ ಮುಸ್ಲಿಂ ರ ವೋಟ್ ತಗೆದುಕೊಂಡರು. 17 ಸೀಟ್ ಗೆದ್ದಿದ್ದು ನನ್ನಿಂದ. ಬಿಜೆಪಿಗೆ ಗತಿ ಇಲ್ಲ, ಅವರಿಗೆ ಮತಿ ಇಲ್ಲ.. ಮೇಕಪ್ ನೋಡಿ ಹೋಗಿಬಿಟ್ರು, ಹಾಸನದಲ್ಲಿ ಏನೂ ಸಿಗಲಿಲ್ಲ, ಮಂಡ್ಯದಲ್ಲಿ ಏನೂ ಸಿಗಲಿಲ್ಲ.

ಬಿಜೆಪಿಯವರು ಮಂಚ ಮುರದವರೆ. ಜೆಡಿಎಸ್ ಬಿಜೆಪಿ ಇಬ್ಬರು ಚಿಕ್ಕದೊಡ್ಡಪ್ಪನ‌ ಮಕ್ಕಳು. ಜೋಶಿ‌ ಕಳೆದ ಇಪ್ಪತ್ತು ವರ್ಷ ಏನ್ ಮಾಡಿದ್ದಾರೆ. ಜೋಶಿ ಹಳೆಯ ಟೈರ್, ಅದಕ್ಕೆ ರಿಮೋಡ್ ಹಾಕಿಸೋದು, ಬದಲಾವಣೆ ಮಾಡಿ. ಹೊಸ ಮುಖಕ್ಕೆ ಅವಕಾಶ ಮಾಡಿಕೊಡಿ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಹೇಳಿದ್ದಾರೆ.

ಇವರ ಚಟಕ್ಕೆ ವಿಡಿಯೋ ಮಾಡಿಕೊಳ್ಳುತ್ತಾರೆ. ಇಂಥವರನ್ನ ಭಗವಂತನೂ ಕ್ಷಮಿಸಲ್ಲ: ಡಿ.ಕೆ.ಶಿವಕುಮಾರ್

ಕೆಲಸ ಮಾಡಿದ್ದೇನೆ ಓಟು ಕೊಡಿ ಎನ್ನುವ ಬದಲು ಕಾಂಗ್ರೆಸ್ ಬಗ್ಗೆ ಅಪಪ್ರಚಾರ ಮಾಡಿ ಓಟು ಕೇಳುತ್ತಾರೆ: ಸಿಎಂ

ರಾಮಮಂದಿರಕ್ಕೆ ನಾವೂ ಇಟ್ಟಿಗೆ ಕೊಟ್ಟಿದ್ದೀವಿ, ಆದ್ರೆ ಬಿಜೆಪಿಯವರು ಧರ್ಮಗಳ ಮಧ್ಯೆ ತಂದಿಡುತ್ತಿದ್ದಾರೆ: ನಟ ವಿಜಿ

- Advertisement -

Latest Posts

Don't Miss