Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬೆಂಗಳೂರಿನ ಮೂಲಭೂತ ಸೌಲಭ್ಯಗಳ ಬಗ್ಗೆ ಪ್ರಶ್ನೆ ಮಾಡಲು ಸಾಧ್ಯವೇ ಇಲ್ಲ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ.
ಕೆಲವು ಉದ್ಯಮಿಗಳು ಟ್ವೀಟ್ ಮಾಡಿದ್ದಾರೆ. ಅವರನ್ನ ಅಪಮಾನ ಮಾಡುವ ಕೆಲಸವನ್ನ ಕಾಂಗ್ರೆಸ್ ಮಾಡಿದೆ. ಇನ್ವೆಸ್ಟರ್ ಮೀಟ್ ಗೆ ಕರೆಯುತ್ತಿದ್ದಾರೆ. ಅವರು ಟ್ವೀಟ್ ಮಾಡಿದ್ರೆ, ಅದಕ್ಕೆ ಅವರನ್ನು ಮಾನಸಿಕವಾಗಿ ಕುಗ್ಗಿಸೋ ಪ್ರಯತ್ನ ಕಾಂಗ್ರೆಸ್ ಮಾಡುತ್ತಿದೆ. ಅಭಿವೃದ್ದಿ ಮಾಡ್ತೀವಿ ಅಂದವರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ವಿದ್ಯುತ್ ಸಂಪರ್ಕದ ಸಮಸ್ಯೆ ಇದೆ. 24 ಗಂಟೆಯಿಂದ ವಿದ್ಯುತ್ ಇಲ್ಲ. ಸಬ್ ರಿಜಿಸ್ಟರ್ ಅಫೀಸ್ ನಲ್ಲೂ ಕರೆಂಟ್ ಇರಲಿಲ್ಲ. ಫ್ರೀ ಅಂತಾ ಹೇಳಿ ಎಲ್ಲ ದರ ಜಾಸ್ತಿ ಮಾಡಿದಾರೆ.
ರಾಜ್ಯದ ಜನ ಸಾಯಬೇಕು ಅಂದರೂ ಸರ್ಕಾರಕ್ಕೆ ದುಡ್ಡು ಕೊಟ್ಟು ಸಾಯುವಂತಹ ಪರಿಸ್ಥಿತಿ ಇದೆ. ಸೂಸುತ್ರವಾಗಿ ಸಾಯಲೂ ಕಾಂಗ್ರೆಸ್ ಸರ್ಕಾರ ಬಿಡುತ್ತಿಲ್ಲ. ಸಾಯೋರಿಗೂ ರೊಕ್ಕ ಕೊಟ್ಟು ಸಾಯೋ ಸ್ಥಿತಿ ಬಂದಿದೆ. ಪ್ರಿಯಾಂಕ್ ಖರ್ಗೆ ಅವರಿಗೆ ಹಿಂದೂಗಳಿಗೆ ಅಪಮಾನ ಮಾಡೋದೇ ಕೆಲಸ. ಹಿಂದೆ ದೊಡ್ಡಖರ್ಗೆ ಮಾತಾಡಿದ್ರು. ಇದೀಗ ಪ್ರಿಯಾಂಕ್ ಖರ್ಗೆ ಮಾತನಾಡುತ್ತಿದ್ದಾರೆ. ಯಾವ ನೀರು, ಯಾರು ಮಾರಾಟ ಮಾಡಿದಾರೆ..? ಎಂದು ಜೋಶಿ ಪ್ರಶ್ನಿಸಿದ್ದಾರೆ.
ಜನರ ಶ್ರದ್ಧೆಗೆ ಅಪಮಾನ ಮಾಡೋದು ಅವರ ಹವ್ಯಾಸ. ಮೆಕ್ಕಾ ಮದೀನಾದಲ್ಲಿ ಏನೂ ಆಗಿಲ್ವಾ…? ಅಲ್ಲಿಯ ಬಗ್ಗೆ ಕಾಂಗ್ರೆಸ್ ಮಾತನಾಡಲಿ. ಶಾಂತವಾದ ಸಮಾಜದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಗೆ ಅಡ್ರೆಸ್ ಇಲ್ಲ ಇದೊಂದು ವೋಟ್ ಬ್ಯಾಂಕ್ ಪಾಲಿಟಿಕ್ಸ್ ಎಂದು ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ.
ಪ್ರಿಯಾಂಕ್ ಖರ್ಗೆ ಅವರ ತಂದೆಯನ್ನು ನೋಡಿ ಕಲಿಬೇಕು. ಬಹಳ ದುರಹಂಕಾರದ ವರ್ತನೆ ಸರಿ ಅಲ್ಲ. ಬೆಳಗಾವಿಯಲ್ಲಿ ಕಂಡಕ್ಟರ್ ಮೇಲೆ ಹಲ್ಲೆ ಪ್ರಕರಣ ಅಕ್ಷಮ್ಯ ಅಪರಾಧ. ಅವರ ಮೇಲೆ ಕಟ್ಟು ನಿಟ್ಟಿನ ಕ್ರಮ ಆಗಬೇಕು. ನಮ್ಮ ಸರ್ಕಾರದ ಬೆಂಬಲ ಇದೆ. ಆದ್ರೆ ಬಸ್ ನಿಲ್ಲಸೋದು ಸರಿ ಅಲ್ಲ. ಬಸ್ ನಲ್ಲಿದ್ದ ಜನ ಭಯಭೀತರಾಗಿದ್ದಾರೆ. ಎರಡೂ ಕಡೆ ಬಸ್ ನಿಲ್ಲಸೋದು ಒಳ್ಳೆಯದಲ್ಲ. ಪ್ರಕರಣದಲ್ಲಿ ಜನ ಸಾಮಾನ್ಯರಿಗೆ ಎರಡೂ ಸರ್ಕಾರ ಕ್ರಮ ಕೈಗೊಳ್ಳಬೇಕು.
ಕಂಡಕ್ಟರ್ ಮೇಲೆ ಪೊಕ್ಸೋ ಕೇಸ್ ಹಾಕಿರೋದು ತಪ್ಪು. ಕಮಿಷನರ್ ,ಮಂತ್ರಿ ನಮಗೆ ಗೊತ್ತಿಲ್ಲ ಅಂತಾರೆ. ಹಾಗಾದ್ರೆ ಕೇಸ್ ಹೇಗೆ ಹಾಕಿದರು..? ಇದರ ಅರ್ಥ ಸರ್ಕಾರದ ಮೇಲೆ ನಿಯಂತ್ರಣ ಇಲ್ಲ ಅಂತಾ ಅರ್ಥ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ. ಗೃಹ ಲಕ್ಷ್ಮೀ ಹಣ ಹಾಕ್ತೀವಿ ಅಂದವರು,ಇದೀಗ ಮತ್ತೆ ಒಂದು ತಿಂಗಳ ಮುಂದೆ ಹಾಕಿದ್ದಾರೆ. ಪರಿಶಿಷ್ಟರ ಹಣ ಗ್ಯಾರಂಟಿಗೆ ಉಪಯೋಗ ಮಾಡ್ತೀವಿ ಅಂತಾ ಸಿಎಂ ಡಿಕೆ ಹೇಳಿಲ್ಲ. ಕಾಂಗ್ರೆಸ್ ನವರೆಲ್ಲ ದಪ್ಪ ಚರ್ಮದವರು. ಕಾಂಗ್ರೆಸ್ನಲ್ಲಿ ಬಹಳ ಭ್ರಷ್ಟಾಚಾರ ನಡೀತಿದೆ. ಪೊಲೀಸ್ ಇಲಾಖೆಯಲ್ಲಂತೂ ಅತೀ ಹೆಚ್ಚು ಭ್ರಷ್ಟಾಚಾರ ಇದೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ.
ಸಂಡೂರು ಅಕ್ರಮ ಜಮೀನು ಒತ್ತುವರಿ ವಿಚಾರವಾಗಿ ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಶನ್ ಅನುಮತಿ ಕೇಳಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಜೋಶಿ, ರಾಜ್ಯ ಸರ್ಕಾರ ಈ ಹಿಂದಿನಿಂದಲೂ ದ್ವೇಷದ ರಾಜಕಾರಣ ಮಾಡುತ್ತಿದೆ. ಹಳೇ ಪ್ರಕರಣಗಳನ್ನ ತೆಗೆಸಿ ತನಿಖೆ ನಡೆಸುತ್ತಿದೆ. ಇದೇ ರೀತಿ ಬಿಎಸ್ ವೈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದೆ. ಆದ್ರೆ ಅದರ ಕುರಿತು ಯಾವುದೇ ಸಾಕ್ಷಾಧಾರಗಳು ದೊರೆಯಲಿಲ್ಲ. ನ್ಯಾಯಾಲಯದಲ್ಲಿ ಪ್ರಕರಣ ನಿಲ್ಲಲಿಲ್ಲ. ಅದೇ ರೀತಿ ಕುಮಾರಸ್ವಾಮಿ ವಿರುದ್ಧವೂ ತನಿಖೆಗೆ ಮುಂದಾಗಿದ್ದಾರೆ ಇದು ದ್ವೇಷದ ರಾಜಕಾರಣ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.