Friday, June 20, 2025

Latest Posts

‘ದೇವೇಗೌಡರು ಈ ರಾಜ್ಯದಲ್ಲಿ ಏನು ಮಾಡಿದ್ರು ಅನ್ನೋದನ್ನ ಮರೆಮಾಚುವ ಕೆಲಸ ಇಷ್ಟು ದಿನ ಮಾಡಿದ್ರು’

- Advertisement -

Hassan Political News: ಹಾಸನ: ಹಾಸನದಲ್ಲಿ ಮಾಜಿಪ್ರಧಾನಿ ಎಚ್.ಡಿ.ದೇವೇಗೌಡರು ಮಾತನಾಡಿದ್ದು, ರಾಜ್ಯ ಸರ್ಕಾರ ಸಾಮಾಜಿಕ ‌ನ್ಯಾಯ ಒದಗಿಸಲು ಒಳಮೀಸಲಾತಿ ಕೊಡಬೇಕೆಂದು ಸಚಿವ ಸಂಪುಟ ಸಭೆ ತುರ್ತು ನಿರ್ಣಯ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ ಎಂದಿದ್ದಾರೆ.

ಅಲ್ಲದೇ, ಈಗಿರುವ ಮುಖ್ಯಮಂತ್ರಿಗಳು ಅವರ ಸಚಿವ ಸಂಪುಟದಲ್ಲೇ ಬಹಳ ಜನ ಇದ್ದಾರೆ. ನಾನು ಸಿಎಂ ಆಗಿದ್ದಾಗ ಎಂ.ಪಿ.ಪ್ರಕಾಶ್ ಅವರ ನೇತೃತ್ವದಲ್ಲಿ ಕಮಿಟಿ ರಚಿಸಿದೆ. ಅದರಲ್ಲಿ ಸಿದ್ದರಾಮಯ್ಯ, ಪಿ.ಜಿ.ಆರ್.ಸಿಂಧ್ಯಾ, ಜಾಲಪ್ಪ, ಮಂಜುನಾಥ್ ಇದ್ದರು. ಅದಕ್ಕೆ ಮುಂಚೆ ವೀರಪ್ಪ ಮೊಯ್ಲಿಯವರು ಗುಂಡುರಾವ್ ಕಾಲದಲ್ಲಿ ಸುಪ್ರೀಂಕೋರ್ಟ್‌ನಲ್ಲಿದ್ದರು ಎಜುಕೇಶನ್ ಗೋಸ್ಕರ ಒಂದು ನಿರ್ಣಯ ಮಾಡಿದ್ರು. ಮುಸ್ಲಿಂರಿಗೆ ಮೀಸಲಾತಿ ಕೊಟ್ಟಿದ್ದು ದೇವೇಗೌಡ. ಒಕ್ಕಲಿಗರಿಗೆ ಕೊಟ್ಟಿದ್ದನ್ನು ಕಡಿಮೆ ಮಾಡಿ ಮುಸ್ಲಿಂರಿಗೆ ಕೊಟ್ಟೆ. ಇದನ್ನು ನಿರ್ಣಯ ಮಾಡಿದ್ದು ದೇವೇಗೌಡರು ಎಂದಿದ್ದಾರೆ.

ಖರ್ಗೆಯವರು ಗುಂಡೂರಾವ್ ಸರ್ಕಾರದಲ್ಲಿ ಅಂಬೇಡ್ಕರ್ ಕೊಟ್ಟಂತಹ ಹದಿನೆಂಟು ಪರ್ಸೆಂಟ್‌ನಲ್ಲಿ ಎಸ್ಸಿಗೆ 15%, ಎಸ್ಟಿಗೆ 3% ನೀಡಿದ್ರು ಆ ಕೋಟಾ ಭರ್ತಿ ಮಾಡಲಿಲ್ಲ. 1983 ಲೋಕೋಪಯೋಗಿ ಸಚಿವನಾದಾಗ ಅಂಬೇಡ್ಕರ್ ಕೊಟ್ಟಂತಹ ಕೋಟಾ ಭರ್ತಿಯಾಗಲು 15 ಪರ್ಸೆಂಟ್‌ನ್ನು 18 ಮಾಡ್ದೆ ಎಸ್ಟಿಗೆ ಮೂರರಿಂದ ಐದಕ್ಕೆ ಹೆಚ್ಚಿಸಿದೆ. ಅಂಬೇಡ್ಕರ್ ಹೇಳಿರುವ ಪ್ರಕಾರ ಆ ಕೋಟಾ ರೀಚ್ ಆಗುವವರೆಗೂ ಮಾಡಿದ್ದೇನೆ ಅದು ಪರ್ಮನೆಂಟ್ ಆಗಿ ಇರಬೇಕು ಅಂತ ಮಾಡಿದ್ದೆ. ಎಲ್ಲಾ ಇಲಾಖೆಗಳ ಮೇಲೆ ಇದು ಪರಿಣಾಮ ಆಗುತ್ತೆ ಅಂದ್ರು ಆದರೂ ನಾನು ಮಾಡಿದೆ. ಯಾರು ಬೇಕಾದರೂ ಏನನ್ನಾದರು ಹೇಳಲಿ. ಅಂದು ನಾನು 23 ಪರ್ಸೆಂಟ್ ಕೊಟ್ಟಿದ್ದು 18 ಪರ್ಸೆಂಟ್‌ಗೆ ರೀಚ್ ಆಗಿದೆ. ರಾಜ್ಯ ಸರ್ಕಾರ ಒಳಮೀಸಲಾತಿ ಬಗ್ಗೆ ಇವತ್ತು ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದಾರೆ. ಅಹಿಂದಾ ಅಹಿಂದಾ ಅಂತ ಹೇಳಿದ್ದೇ, ಹೇಳಿದ್ದು. ದೇವೇಗೌಡರು ಈ ರಾಜ್ಯದಲ್ಲಿ ಏನು ಮಾಡಿದ್ರು ಅನ್ನೋದನ್ನ ಮರೆಮಾಚುವ ಕೆಲಸ ಇಷ್ಟು ದಿನ ಮಾಡಿದ್ರು. ಏಕೆಂದರೆ ನಾನೊಬ್ಬ ಒಕ್ಕಲಿಗ ಅದಕ್ಕೆ ಮಾಡಿದ್ರು ಎಂದು ದೇವೇಗೌಡರು ಹೇಳಿದ್ದಾರೆ.

ಅಲ್ಲದೇ, ಈ ಕೆಲಸ ಮಾಡಿದ್ದು ಯಾರು, ಈ ಜಿಲ್ಲೆಯ ಉಸ್ತುವಾರಿ ಮಂತ್ರಿ ಕೆ.ಎನ್.ರಾಜಣ್ಣ. ನಾನು ಅವರ ಬಗ್ಗೆ ಗೌರವದಿಂದ ಮಾತನಾಡುತ್ತೇನೆ ಅವರು ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು. ನಾನು ಯಾವ್ಯಾವ್ಯದನ್ನು ಕೊಟ್ಟಿದ್ದಾರೆ ಅದನ್ನು ಒಂದ ಕಡೆ ಎಳೆದು ಮಾಡುತ್ತಿದ್ದಾರೆ. ಇದರ ಬಗ್ಗೆ ಡಿಬೇಟ್ ಆಗಲಿ. ಇದನ್ನು ಲಾಜಿಕಲ್ ಎಂಡ್ ಮಾಡುತ್ತೇನೆ. ನಾನು ಪ್ರಧಾನಿಯಾಗಿದ್ದಾಗ ಯಾರು ನಮ್ಮ ಸರ್ಕಾರನಾ ಯಾರು ತೆಗೆದಿದ್ದು ಕಾಂಗ್ರೆಸ್, ಬಿಜೆಪಿನಾ. ಕುಮಾರಸ್ವಾಮಿ ಸರ್ಕಾರ ತೆಗೆದಿದ್ದು ಯಾರು..? ನನ್ನ ಪ್ರಧಾನಮಂತ್ರಿ ಸ್ಥಾನದಿಂದ ತೆಗೆದಿದ್ದು ಯಾರು..?

ಅರವತ್ತು ವರ್ಷ ರಾಜಕೀಯ ಹೋರಾಟ ಮಾಡಿದ್ದೇನೆ. ಈ ವಿಷಯ ರಾಜ್ಯಾದ್ಯಂತ ಚರ್ಚೆ ಆಗಬೇಕು. 1995 ರಲ್ಲಿ ನಾನು ನಿರ್ಣಯ ಮಾಡಿದ್ದೆ. ಇವತ್ತು ಒಳಮೀಸಲಾತಿ ಜಾರಿ ಮಾಡಲು ಹೊರಟಿದ್ದಾರೆ. ಇದನ್ನೇ ಈ ಚುನಾವಣೆಯಲ್ಲಿ ಇಟ್ಟುಕೊಂಡು ಹೋರಾಟ ಮಾಡುತ್ತೇನೆ. ನಾನು ಚುನಾವಣೆಗೆ ಸ್ಪರ್ಧೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ದೇವೇಗೌಡರು ಸ್ಪಷ್ಟನೆ ನೀಡಿದ್ದಾರೆ.

ಅಯೋಧ್ಯೆ ರಾಮಮಂದಿರ ನೋಡಬೇಕೆಂಬ ಹಂಬಲ ವ್ಯಕ್ತಪಡಿಸಿದ ತಾಂಜೇನಿಯಾದ ಕಿಲಿ ಪೌಲ್

ಭಾರತಕ್ಕೆ ಮೋದಿ ಅತ್ಯುತ್ತಮ ನಾಯಕನೆಂದು ಮತ್ತೊಮ್ಮೆ ಹೊಗಳಿದ ಅಮೆರಿಕದ ಗಾಯಕಿ ಮೇರಿ ಮಿಲ್ಬೆನ್

ರಾಹುಲ್ ಗಾಂಧಿ ನೇತೃತ್ವದ ನ್ಯಾಯ ಯಾತ್ರೆ ವಿರುದ್ಧ ಎಫ್‌ಐಆರ್ ದಾಖಲು

- Advertisement -

Latest Posts

Don't Miss