ಮುಂಬೈ : ರಾಜೀನಾಮೆ ನೀಡಿರುವ ಶಾಸಕರನ್ನ ಕರೆತರಲು ಮುಂಬೈಗೆ ಬಂದಿರುವ ಡಿಕೆಶಿಗೆ ಹೋಟೆಲ್ ಎಂಟ್ರಿ ಸಿಕ್ಕಿಲ್ಲ. ನಮ್ಮ ಸ್ನೇಹಿತರನ್ನ ಭೇಟಿ ಮಾಡಲು ಬಂದಿದ್ದೇನೆ ನಾನು ರೂಂ ಬುಕ್ ಮಾಡಿದ್ದೇನೆ ಅಂತ ಹೇಳಿದ್ರು ಡಿಕೆ ಶಿವಕುಮಾರ್ ರನ್ನ ಪೊಲೀರು ಹೋಟೆಲ್ ಒಳಗೆ ಬಿಡಲಿಲ್ಲ.. ಡಿ ಕೆ ಶಿ ಜೊತೆ ಜೆಡಿಎಸ್ ಶಾಸಕರಾದ ಶಿವಲಿಂಗೇಗೌಡ, ಜಿ.ಟಿ ದೇವೇಗೌಡ, ಚನ್ನರಾಯಪಟ್ಟಣ ಶಾಸಕ ಬಾಲಕೃಷ್ಣ ಗಮಿಸಿದ್ರು.. ಆದ್ರೆ, ಡಿಕೆಶಿ ಮುಂಬೈಗೆ ಆಗಮಿಸುತ್ತಿರುವ ವಿಷಯ ತಿಳಿದ ಶಾಸಕರು ಯಾವುದೇ ಕಾರಣಕ್ಕೂ ಡಿಕೆಶೀಯನ್ನ ಹೋಟೆಲ್ ಗೆ ಬಿಡದಂತೆ ಪೊಲೀಸರಿಗೆ ದೂರು ನೀಡಿದ್ರು.
ಮಹಾರಾಷ್ಟ್ರ ಸರ್ಕಾರದ ವಿರುದ್ಧ ಆಕ್ರೋಶ..!
ನ್ನು ಹೋಟೆಲ್ ಎಂಟ್ರಿಗೆ ಅವಕಾಶ ನೀಡದ ಹಿನ್ನೆಲೆ ಶಾಸಕರಾದ ಶಿವಲಿಂಗೇಗೌಡ ಆಕ್ರೋಶ ವ್ಯಕ್ತಪಡಿಸಿದ್ರು,. ಡಿಕೆ ಶಿವಕುಮಾರ್ ನಾನು ಇಲ್ಲೇ ಕಾಯ್ತೀನಿ ಅಂತ ಹೇಳಿದ್ರೆ, ಶಿವಲಿಂಗೇಗೌಡ ದು ಪ್ರಜಾಪ್ರಭುತ್ವ ವ್ಯವಸ್ಥೆ ಈ ರೀತಿ ನಮ್ಮನ್ನ ತಡೆಯೋದು ಸರಿ ಇಲ್ಲ ಅಂತ ಮಹಾರಾಷ್ಟ್ರ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.