National Political News: ರಾಷ್ಟ್ರಪತಿ ದ್ರೌಪದಿ ಮುರ್ಮು ಮೊದಲ ಬಾರಿ ಅಯೋಧ್ಯೆಗೆ ಭೇಟಿ ನೀಡಿ, ಬಾಲರಾಮನ ದರ್ಶನ ಮಾಡಿದ್ದಾರೆ.
ರಾಮಮಂದಿರ ಉದ್ಘಾಟನೆ ಬಳಿಕ ಮೊದಲ ಬಾರಿ ಮುರ್ಮು ಅಯೋಧ್ಯೆಗೆ ಭೇಟಿ ನೀಡಿದ್ದು, ಹನುಮಾನ್ ಘಡಿಗೆ ಭೇಟಿ ನೀಡಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ರಾಮಮಂದಿರಕ್ಕೆ ಭೇಟಿ ನೀಡಿ, ರಾಮನ ದರ್ಶನ ಪಡೆದರು. ಇಲ್ಲಿನ ಅರ್ಚಕ ರಾಾಜು ದಾಸ್ ರಾಷ್ಟ್ರಪತಿಗೆ ಬೆಳ್ಳಿಯ ಗಧೆ, ಬೆಳ್ಳಿ ರಾಮ್ ದರ್ಬಾರ್, ಹಸುವಿನ ಪ್ರತಿಕೃತಿ ನೀಡಿದರು.
ಬಳಿಕ ಸರಯೂ ನದಿಗೆ ತಲುಪಿ, ಅಲ್ಲಿ ನಡೆಯುವ ಆರತಿ ಪೂಜೆಯಲ್ಲಿ ಪಾಲ್ಗೊಂಡು, ಸರಯೂಗೆ ಆರತಿ ಸಲ್ಲಿಸಿದರು. ಇನ್ನು ರಾಷ್ಟ್ರಪತಿಗಳಿಗೆ ರಾಜ್ಯಪಾಲರಾದ ಆನಂದಿಬೇನ್ ಪಟೇಲ್ ಮತ್ತು ಉತ್ತರಪರ್ದೇಶ ಸಚಿವ ಸೂರ್ಯಪ್ರಕಾಶ್ ಸಾಥ್ ನೀಡಿದರು.
ಪ್ರಜ್ವಲ್ ರೇವಣ್ಣ ಪಾಸ್ಪೋರ್ಟ್ ಕ್ಯಾನ್ಸಲ್ ಮಾಡಿಸಲು ಪ್ರಧಾನಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ
ದಿಂಗಾಲೇಶ್ವರ ಸ್ವಾಮೀಜಿಯ ರಾಜಕೀಯ ನಡೆ ಬಗ್ಗೆ ಸಿಎಮ್ ಇಬ್ರಾಹಿಂ ಸ್ಪೋಟಕ ಮಾಹಿತಿ