ಹಾಸನ: ಸಕಲೇಶಪುರ: ಇಲ್ಲಿನ ದೋನಹಳ್ಳಿ ಮತ್ತು ಬಾಚನಹಳ್ಳಿ ಗ್ರಾಮಸ್ಥರು, ತಮ್ಮ ಗ್ರಾಮಕ್ಕೆ ಮೂಲಭೂತ ಸೌಕರ್ಯ ಒದಗಿಸದ ಕಾರಣ, ಚುನಾವಣೆಯನ್ನ ಬಹಿಷ್ಕಾರ ಮಾಡಲು ಮುಂದಾಗಿದ್ದಾರೆ. ಸಕಲೇಶಪುರ ತಾಲೂಕಿನ ಹಾನುಬಾಳು ಹೋಬಳಿಯ ಬಾಚನಹಳ್ಳಿ ಹಾಗೂ ದೇವಾಲದಕೆರೆಯ ದೋನಹಳ್ಳಿ ಗ್ರಾಮಸ್ಥರು ಗ್ರಾಮಕ್ಕೆ ರಸ್ತೆ, ಸೇತುವೆ ಸೇರಿದಂತೆ ಯಾವುದೇ ಮೂಲಭೂತ ಸೌಲಭ್ಯ ಒದಗಿಸುವುದಕ್ಕೆ ಸರ್ಕಾರ, ಜನಪ್ರತಿನಿಧಿಗಳು ಮುಂದಾಗದ ಕಾರಣ ಮತದಾನ ಬಹಿಷ್ಕಾರ ಮಾಡಲು ಗ್ರಾಮಸ್ಥರು ಮುಂದಾಗಿದ್ದಾರೆ.
ಹಾನುಬಾಳ್ ಹೋಬಳಿ ಕೇಂದ್ರದಿಂದ ಬಾಚನಹಳ್ಳಿ ಗ್ರಾಮ ಕೇವಲ 5 ಕಿ.ಮೀ ದೂರದಲ್ಲಿದ್ದರು ಸಹ ಗ್ರಾಮಕ್ಕೆ ರಸ್ತೆ ಇಲ್ಲದ ಕಾರಣ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮದಲ್ಲಿ ಸರಿಯಾದ ರಸ್ತೆಯಿಲ್ಲದ ಕಾರಣ ಗ್ರಾಮದಲ್ಲಿ ನಡೆಯುವ ಶುಭ ಅಶುಭ ಕಾರ್ಯಗಳಿಗೆ ಯಾರು ಸಂಬಂಧಿಗಳು ಬರುವುದಿಲ್ಲ. ವಿದ್ಯಾರ್ಥಿಗಳು ಶಾಲೆಗಳಿಗೆ ಹೋಗಲು ಜೀಪುಗಳನ್ನು ಆಶ್ರಯಿಸಬೇಕಾಗಿದೆ. ಜೀಪುಗಳಿಲ್ಲದ್ದರೆ ವಿದ್ಯಾರ್ಥಿಗಳು ನಡೆದುಕೊಂಡೆ ಹೋಗಬೇಕಾಗಿದೆ.
ದೋನಹಳ್ಳಿ ಮಳೆಗಾಲದಲ್ಲಂತು ಗ್ರಾಮಸ್ಥರ ಪಾಡು ಯಾರಿಗೂ ಹೇಳಲು ಅಸಾಧ್ಯವಾಗಿದೆ. ಸೇತುವೆ ನಿರ್ಮಾಣಕ್ಕೆ ಹಲವು ಬಾರಿ ಮನವಿ ಮಾಡಿದರು ಸಹ ಪ್ರಯೋಜನವಾಗಿಲ್ಲ. ಸುಮಾರು 500 ಕ್ಕೂ ಹೆಚ್ಚು ಮಂದಿ ಈ ಎರಡು ಗ್ರಾಮಗಳಲ್ಲಿ ನೆಲೆಸಿದ್ದು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ದಿನನಿತ್ಯ ವ್ಯವಸ್ಥೆಗೆ ಹಿಡಿಶಾಪ ಹಾಕಿಕೊಂಡೆ ತಿರುಗಾಡುತ್ತಿದ್ದಾರೆ.
ಶಾಸಕರಿಗೆ ರಸ್ತೆ ಸೇತುವೆ ನಿರ್ಮಾಣ ಮಾಡುವಂತೆ ಆಗ್ರಹಿಸಿ ಹಲವು ಬಾರಿ ಗ್ರಾಮಸ್ಥರು ಮನವಿ ಮಾಡಿದರು ಯಾವುದೆ ಪ್ರಯೋಜನವಾಗಿಲ್ಲ.ಗ್ರಾಮದಲ್ಲಿ ತಮಿಳುನಾಡು ಮೂಲದ ವ್ಯಕ್ತಿಯೋರ್ವರು ಸುಮಾರು 1000 ಎಕರೆ ಕಾಫಿ ತೋಟ ಹೊಂದಿದ್ದು ಆದರೆ ಇವರು ಯಾವುದೆ ರೀತಿಯಲ್ಲಿ ಅಭಿವೃದ್ಧಿ ಗೆ ಕೈಜೋಡಿಸುತ್ತಿಲ್ಲ.
ಈ ಎರಡು ಗ್ರಾಮಗಳ ಯುವಕರಿಗೆ ರಸ್ತೆ ಅವ್ಯವಸ್ಥೆ ಹಿನ್ನೆಲೆಯಲ್ಲಿ ಹೆಣ್ಣು ಮಕ್ಕಳನ್ನು ಕೊಡಲು ಪೋಷಕರು ಮುಂದಾಗದ ಕಾರಣ ಹಲವರು ಯುವಕರು ಇನ್ನು ಅವಿವಾಹಿತರಾಗಿ ಬದುಕು ಸಾಗಿಸುತ್ತಿದ್ದಾರೆ. ಒಟ್ಟಾರೆಯಾಗಿ ರಸ್ತೆ ಸೇತುವೆ ಸೌಲಭ್ಯಗಳನ್ನು ಒದಗಿಸದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.
ಹೊಸ ಪಕ್ಷ ಅಧಿಕಾರಕ್ಕೆ ಬರಲಿದೆ ರಾಜ್ಯದಲ್ಲಿ . ಇನ್ನು ಒಂದುವರೆ ತಿಂಗಳಲ್ಲಿ ಹೊಸ ಸರ್ಕಾರ
ಮೇ 10 ನೇ ತಾರೀಕು ವಿಧಾನಸಭಾ ಚುನಾವಣೆ , ಮೇ 13 ಕ್ಕೆ ಫಲಿತಾಂಶ ಘೋಷಣೆ ಮಾಡಿದ ಆಯುಕ್ತ ರಾಜಿವ್ ಕುಮಾರ್