Movie News: ನಿನ್ನೆಯ ಬಿಗ್ಬಾಸ್ ಸಂಚಿಕೆಯಲ್ಲಿ, ಬಿಗ್ಬಾಸ್ ಒಂದು ಟಾಸ್ಕ್ ಕೊಟ್ಟಿತ್ತು. ಅದರಲ್ಲಿ ಇಷ್ಟು ದಿನ ಯಾರ ಮೇಲೆ ಸಿಟ್ಟಿತ್ತೋ, ಅವರ ಫೋಟೋ ಇರುವ ಬ್ಯಾಗ್ಗೆ ಹೊಡೆದು, ತಮ್ಮ ಸಿಟ್ಟು ತೀರಿಸಿಕೊಳ್ಳಬಹುದು. ಆದರೆ ಆ ಸಿಟ್ಟಿಗೆ ಸರಿಯಾದ ಕಾರಣವೂ ಕೊಡಬೇಕು ಎಂದು ಬಿಗ್ಬಾಸ್ ಹೇಳಿದ್ದರು.
ಈ ವೇಳೆ ಸಿಕ್ಕಿದ್ದೆ ಚಾನ್ಸ್ ಎಂದು ತಿಳಿದ ಸಂಗೀತಾ, ಕಾರ್ತಿಕ್ ಮುಖವಿರುವ ಬ್ಯಾಗ್ಗೆ ಪಂಚ್ ಕೊಟ್ಟು, ಕಾರ್ತಿಕ್ ಎಲ್ಲರನ್ನೂ ಬಳಸಿಕೊಳ್ಳುತ್ತಾರೆ ಎಂದು ಹೇಳಿದ್ದರು. ಅಲ್ಲದೇ ಸಂಗೀತಾಗೆ ಕಾರ್ತಿಕ್ ಶನಿ ಎಂದು ಹೇಳಿದ್ದರು. ಈ ಕಾರಣಕ್ಕೆ ಹೌದು, ನಾನು ನಿಮ್ಮ ಜೀವನದಲ್ಲಿ ಶನಿ ಆಗಿದ್ದೆ, ಆಗಿರ್ತೀನಿ, ಆಗಿರ್ಬೇಕು ಎಂದು ಸಂಗೀತಾ ಹೇಳಿದ್ದಾರೆ. ಬಳಿಕ ವಿನಯ್ ಮತ್ತು ತುಕಾಲಿ ಸಂತೋಷ್ ಮುಖವಿರುವ ಬ್ಯಾಗ್ಗೂ ಸಂಗೀತಾ ಪಂಚ್ ಕೊಟ್ಟು, ಕಾರಣ ಹೇಳಿದ್ದಾರೆ.
ಇನ್ನು ಕಾರ್ತಿಕ್ ಕೂಡ ಸಂಗೀತಾ ಮುಖವಿರುವ ಬ್ಯಾಗ್ಗೆ ಪಂಚ್ ಕೊಟ್ಟು ಕಾರಣ ಹೇಳಿದ್ದಾರೆ. ಅಲ್ಲದೇ ಕೊನೆಗೆ ಸಂಗೀತಾ ಫೋಟೋವನ್ನು ಸಹ ಕಿತ್ತು ಬಿಸಾಕಿದ್ದಾರೆ.
ಎಮರ್ಜೆನ್ಸಿ ಚಿತ್ರ ರಿಲೀಸ್ ಬಗ್ಗೆ ಮಾಹಿತಿ ನೀಡಿದ ನಟಿ ಕಂಗನಾ ರಾಣಾವತ್
ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ದಿನವೇ ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಕಾವ್ಯಾಗೌಡ
ರಾಮಲಲ್ಲಾ ಪ್ರಾಣಪ್ರತಿಷ್ಠೆ ಅಂಗವಾಗಿ ತನ್ನ ಮನೆಯಲ್ಲಿ ಹೋಮ ನಡೆಸಿದ ನಟಿ ಊರ್ಫಿ ಜಾವೇದ್