Saturday, July 27, 2024

Latest Posts

ಅಭಿವೃದ್ಧಿ ಮಾಡಿದ್ದರೆ ಮನೆಯಲ್ಲೇ ಇದ್ದು ಓಟ್ ಕೇಳಲಿ, ಜಾಹೀರಾತು ಯಾಕೆ ಬೇಕು..?: ಸಂತೋಷ್ ಲಾಡ್

- Advertisement -

Dharwad News: ಧಾರವಾಡ: ಧಾರವಾಡದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿದ್ದು,  ಲೋಕಸಭೆ ಚುನಾವಣೆ ಹಿನ್ನೆಲೆ ಎಲ್ಲ ಸಮಾಜದವರ ಸಭ ಮಾಡ್ತಾ ಇದ್ದೇವೆ. ಇವತ್ತು ಅದೇ ರೀತಿ ಲಿಂಗಾಯತ ಸಮಾಜದ ಸಭೆ ಮಾಡಿದ್ದೇವೆ. ನಮ್ಮ ಪಕ್ಷದ ಎಲ್ಲ ಸಮಾಜ ಮುಖಂಡರ ಕರೆಸಿ ಸಭೆ ಮಾಡುತ್ತಿದ್ದೇವೆ. ಸಲಹೆಗಳನ್ನು ಪಡೆಯುತ್ತಿದ್ದೇವೆ. ಸಲಹೆ ಪಡೆದು ಚುನಾವಣ ಎದರಿಸಲಿದ್ದೇವೆ ಎಂದಿದ್ದಾರೆ.

ಮೋದಿ ತುಂಬಾ ಕೆಲಸ ಮಾಡಿದ್ದಾರೆಂದು ಪ್ರಹ್ಲಾದ ಜೋಶಿ ಹೇಳುತ್ತಾರೆ. ಕೆಲಸ ಮಾಡಿದ್ದರೇ ಅವರು ಪ್ರಚಾರ ಇಷ್ಟು ಯಾಕೆ ತಗೋತ ಇದಾರೆ..? ಅಷ್ಟು ಯಾಕೆ ಟಿವಿ ಜಾಹೀರಾತು ಕೊಡುತ್ತಿದ್ದಾರೆ..? ದಿನ ಬೆಳಗ್ಗೆ ಯಾಕೆ ಟಿವಿಯಲ್ಲಿ ಪ್ರಚಾರ ತಗೊತಿರಿ..? ಜೋಶಿ ನಾನು ಕೇಳಿದ ಪ್ರಶ್ನೆಗಳಿ ಉತ್ತರ ಕೊಟ್ಟಿಲ್ಲ. ನಮ್ಮ ಜೊತೆ ಚರ್ಚೆಗೂ ಬರುತ್ತಿಲ್ಲ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.

ಕೆಲಸ ಮಾಡಿದ್ದರೇ ಮನೆಯಲ್ಲಿ ಉಳಿದು ವೋಟ್ ಕೇಳಬೇಕಲ್ವಾ..? 4 ಲಕ್ಷ ಲೀಡ್‌ನಿಂದ ಗೆಲ್ಲುತ್ತೇವೆ ಅಂತಾರೆ. ಎಲ್ಲಾ ಟಿವಿ, ಪೇಪರ್‌ನಲ್ಲಿ ಸುಳ್ಳು ಜಾಹೀರಾತು ಕೊಡುತ್ತಿದ್ದಾರೆ. ಸುಳ್ಳು ಅಂಕಿ ಅಂಶದ ಜಾಹೀರಾತು ಕೊಡ್ತಾರೆ. ಮೂಲಭೂತ ಸೌಕರ್ಯ ದೇಶದ ಜನಕ್ಕೆ ಏನು ಮಾಡಿದಿರಿ..? ನಿರ್ಮಲ ಸೀತಾರಾಮನ್ ಮೂರು ಕೋಟಿ ಜನರಿಗೆ ಮನೆ ಅಂತಾರೆ. ಮೋದಿ ನಾಲ್ಕು ಕೋಟಿ ಮನೆ ಕೊಟ್ಟಿದೇವಿ ಅಂತಾರೆ. ಪ್ರಧಾನ ಮಂತ್ರಿ ಮನೆಗಳು ಎಲ್ಲೆಲ್ಲಿ ಬಂದಿವೆ ತೋರಿಸಿ..? ಪಿಎಂ ರಿಲೀಫ್ ಪಂಢ ಬಗ್ಗೆ ಮಾಹಿತಿ ಕೊಡಬೇಕು. ಕೋವಿಡ್ ಸ್ಕ್ಯಾನ್ ಬಗ್ಗೆ ಮಾತನಾಡಲಿ ಅವರು.

ಅದಾನಿ ಪೋರ್ಟ್ನಲ್ಲಿ 34 ಸಾವಿರ ಕೋಟಿಈ ದೇಶದ ಡ್ರಗ್ಸ್ ಸಿಕ್ಕಿದೆ. ಅದರ ಬಗ್ಗೆ ಜೋಶಿ ಮಾತನಾಡಲಿ. ರಾಹುಲ್,ಸೋನಿಯಾ ಗಾಂಧಿ ಬಗ್ಗೆ ಆರೋಪ ಮಾಡ್ತಾರೆ. ಹತ್ತು ವರ್ಷ ಅಧಿಕಾರದಲ್ಲಿ ನಾವು ಇರಲಿಲ್ಲ. ಅವರೇ ಇದ್ರಲ್ವಾ..? ತನಿಖೆ ಮಾಡಿಸಬಹುದಿತ್ತಲ್ಲ..? 23 ಜನ ಇಡಿ, ಸಿಬಿಐ ಕೇಸ್ ಇದ್ದವರನ್ನು ಪಕ್ಷಕ್ಕೆ ತೆಗೆದುಕೊಂಡಿದಾರೆ. ರಾಹುಲ್ ಗಾಂಧಿ,ಸೋನಿಯಾ ಗಾಂಧಿ ವಿರುದ್ದ ಮಾತನಾಡುವುದು ನಿಲ್ಲಿಸಿಲ್ಲ. ತಾವು ಏನು ಕೆಲಸ ಮಾಡಿದ್ದೇವೆ ಅದನ್ನು ಹೇಳಿಕೊಳ್ಳಲಿ ಎಂದು ಸಂತೋಷ್ ಲಾಡ್ ಆಕ್ರೋಶ ಹೊರಹಾಕಿದ್ದಾರೆ.

ಬಿಜೆಪಿ ಕಾರ್ಯಕರ್ತರಿಗೆ ಕಾಂಗ್ರೆಸ್ ನಿಂದ ಕಿರುಕುಳ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸಂತೋಷ್ ಲಾಡ್,  ಇವರು ಸಿಬಿಐ, ಇಡಿಯಿಂದ ಅದೇ ಕೆಲಸ ಮಾಡಿಸುತ್ತಿಲ್ವಾ? ಹತ್ತು ವರ್ಷದಿಂದ ಇಡಿ,ಸಿಬಿಐ ಅದನ್ನೇ ಅಲ್ವಾ ಮಾಡಿಲ್ಲ. ಸುಳ್ಳು ಹೇಳುವುದೇ ಬಿಜೆಪಿ, ಪ್ರಹ್ಲಾದ ಜೋಶಿಗೆ ಬಾಯಿಪಾಠ ಆಗಿದೆ. ಹತ್ತು ಸಲ ಸುಳ್ಳು ಹೇಳಿ ಅದನ್ನೇ ನಿಜ ಮಾಡಿಸುತ್ತಾರೆ. ಕೋವಿಡ್ ನಲ್ಲಿ 45 ಲಕ್ಷ ಜನ ಜೀವ ಕಳೆದುಕೊಂಡಿದ್ದಾರೆ. ನರೇಂದ್ರ ಮೋದಿಯವರ ಭಾರತದಲ್ಲಿ 45 ಲಕ್ಷ ಜನ ತೀರಿಕೊಂಡರು. ವ್ಯಾಕ್ಸಿನ್ ಕೋಟ್ಟ ಪೂಣಾವಾಲ್ ಇವರಿಗೆ ದುಡ್ಡು ಕೊಟ್ಟು ಹೋಗಿದ್ದಾನೆ ಎಂದು ಸಂತೋಷ್ ಲಾಡ್ ಆರೋಪಿಸಿದ್ದಾರೆ.

H. D. Kumaraswamy : ಮಂಡ್ಯ : ನಾಮಪತ್ರ ಸಲ್ಲಿಸಿದ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ

ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ: ವಿಜಯೇಂದ್ರ ಆಹ್ವಾನದ ಬಳಿಕವೂ ಗೈರಾದ ಪ್ರೀತಂಗೌಡ

ನಾಮಪತ್ರ ಸಲ್ಲಿಕೆ ಬಳಿಕ ಡಿ.ಕೆ.ಸುರೇಶ್ ಕಾರಿಗೆ ಮೈತ್ರಿ ಕಾರ್ಯಕರ್ತರಿಂದ ಮುತ್ತಿಗೆ..

- Advertisement -

Latest Posts

Don't Miss