Saturday, July 27, 2024

Latest Posts

ಸಂವಿಧಾನವನ್ನ ಮುಟ್ಟಿದರೆ ಸುಟ್ಟು‌ಭಸ್ಮವಾಗುತ್ತಾರೆ: ಶಾಸಕ ಪ್ರಸಾದ್ ಅಬ್ಬಯ್ಯ

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನಡೆದ ವಿಶ್ವಮಾನವರ ದಿನಾಚರಣೆ ಕಾರ್ಯಕ್ರಮದಲ್ಲಿ‌ ಶಾಸಕ‌ ಪ್ರಸಾದ್ ಅಬ್ಬಯ್ಯ ಭಾಷಣ ಮಾಡಿದ್ದು, ಮಹಾನುಭಾವರು ಸಂವಿಧಾನ‌ ಬದಲಾವಣೆ ಮಾಡಲು‌ ಹೊರಟಿದ್ದಾರೆ. ಸಂವಿಧಾನವನ್ನ ಮುಟ್ಟಿದರೆ ಸುಟ್ಟು‌ಭಸ್ಮವಾಗುತ್ತಾರೆ ಎಂದು ಪ್ರಸಾದ್ ಅಬ್ಬಯ್ಯ ಹೇಳಿದ್ದಾರೆ.

ಕೆಲವು ಮಹಾನುಭಾವರು ಸಂವಿಧಾನ‌ ಬದಲಾವಣೆ ಮಾಡುತ್ತೇವೆ ಅಂತಾ ಹೇಳುತ್ತಿದ್ದಾರೆ. ಮಾತೆತ್ತಿದರೆ ಸಂವಿಧಾನ ಬದಲಾಯಿಸೋ ಮಾತಾಡ್ತಿದ್ದಾರೆ. ಆದರೆ ಸಂವಿಧಾನ ಬದಲಾವಣೆ ಸಾಧ್ಯವೇ ಇಲ್ಲ. ಅಂಬೇಡ್ಕರ್ ಶೋಷಿತ ಜನಾಂಗಕ್ಕೆ ಜೀವನ ಮುಡುಪಿಟ್ಟವರು. ಸಂವಿಧಾನ ತಗೆದು ಹಾಕೋದಾಗಿ ಹೇಳೋ ಭೂಪರಿಗೆ ನಾವು ತಕ್ಕ ಉತ್ತರ ಕೊಡಬೇಕು. ಯಾರು ಯಾರು ಸಂವಿಧಾನ ವಿರೋಧಿ ಹೇಳಿಕೆ ಕೊಡ್ತಾರೋ ಅವರನ್ನು ಲಾಡ್ ನಾಶ ಮಾಡ್ತಾರೆ. ಸಂತೋಷ್ ಲಾಡ್ ಗುಡುಗು ಮಿಂಚಿನ ರೀತಿಯಲ್ಲಿ ಓಡಾಡ್ತಾ ಇದಾರೆ. ಸಂವಿಧಾನ ಬದಲಾವಣೆ ಮಾಡಲು ಹೋದ್ರೆ ಖಡ್ಗದಿಂದ ಸರ್ವನಾಶ ಮಾಡುತ್ತಾರೆ. ಸಚಿವ ಸಂತೋಷ ಲಾಡ್ ಖಡ್ಗದಿಂದ ಅವರನ್ನ‌ ಸರ್ವನಾಶ ಮಾಡುತ್ತಾರೆ ಎಂದು ಪರೋಕ್ಷವಾಗಿ ಬಿಜೆಪಿಯನ್ನು ಖಡ್ಗದಿಂದ ಸರ್ವನಾಶ ಮಾಡುತ್ತಾರೆಂದು ಪ್ರಸಾದ್ ಅಬ್ಬಯ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬಿಜೆಪಿ ಮತ್ತು ಆರ್.ಎಸ್.ಎಸ್ ಮನಸ್ಥಿತಿ ಏನು ಅನ್ನೋದು ಇದರಿಂದ ಗೊತ್ತಾಗುತ್ತೆ. ಸಂವಿಧಾನ ಉಳಿಯಬೇಕಾದ್ರೆ ವಿನೋದ್ ಅಸೂಟಿಯಂಥವರು ಗೆಲ್ಲಬೇಕು ಎಂದು ಪ್ರಸಾಾದ್ ಅಬ್ಬಯ್ಯ ಹೇಳಿದ್ದಾರೆ.

ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದಲ್ಲಿ ರಾಷ್ಟ್ರಮಟ್ಟದಲ್ಲೂ ಗ್ಯಾರಂಟಿ ಕೊಡುತ್ತೆ: ವಿನೋದ್ ಅಸೂಟಿ

ದಲಿತ ಆದಿವಾಸಿ ಯೋಜನೆಗಳನ್ನು ಬಿಜೆಪಿ ವಿರೋಧಿಸುತ್ತಿದೆ: ಜಿಗ್ನೇಶ್ ಮೇವಾನಿ

ಪ್ರಧಾನಿ ಮೋದಿಯವರೇ ನೀವು ದಕ್ಷಿಣ ಕನ್ನಡಕ್ಕೆ ಕೊಟ್ಟದ್ದೆಷ್ಟು..? ಕಿತ್ತುಕೊಂಡಿದ್ದೆಷ್ಟು..?: ಸಿಎಂ ಸಿದ್ದರಾಮಯ್ಯ

- Advertisement -

Latest Posts

Don't Miss