Saturday, July 27, 2024

Latest Posts

ಮೋದಿಯವರು ಹೇಳಿರುವ ಅಭಿವೃದ್ಧಿ ಯೋಜನೆಗಳು ಬರೀ ಟ್ರೈಲರ್ ಅಷ್ಟೇ, ಸಾಧಿಸುವುದು ಬಹಳಷ್ಟಿದೆ: ಸುಮಲತಾ

- Advertisement -

Political News: ಇಂದು ಪ್ರಧಾನಿ ಮೋದಿ ಮೈಸೂರಿಗೆ ಭೇಟಿ ನೀಡಿದ್ದು, ಈ ವೇಳೆ ಸಂಸದೆ ಸುಮಲತಾ ಅಂಬರೀಷ್ ಕೂಡ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ ಸುಮಲತಾ ಅಂಬರೀಷ್, 5 ವರ್ಷಗಳ ಹಿಂದೆ ಪ್ರಧಾನಿ ಮೋದಿಯವರು ಪ್ರಚಾರಕ್ಕೆಂದು ಬಂದಾಗ, ನಾನು ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೆ. ಆದರೂ ಕೂಡ ನನ್ನ ಪರವಾಗಿ ಪ್ರಧಾನಿ ಮೋದಿ ಮತಯಾಚನೆ ಮಾಡಿ, ಆಶೀರ್ವಾದ ಮಾಡಿದ್ದು ನಮ್ಮ ಹೆಮ್ಮೆಯ ಪ್ರದಾನಿ ನರೇಂದ್ರ ಮೋದಿ. ಅಲ್ಲದೇ ಅಂಬರೀಷ್ ಕಾಂಗ್ರೆಸ್‌ನಲ್ಲಿದ್ದರೂ ಕೂಡ, ಅವರ ಬಗ್ಗೆಯೂ ಮೋದಿ ಗೌರವದಿಂದ ಮಾತನಾಡಿದ್ದರು ಎಂದು ಸುಮಲತಾ ಹೇಳಿದರು.

ಅಲ್ಲದೇ, ಈ ಕ್ಷಣವನ್ನು ನಾನು ನೆನಪು ಮಾಡಿಕೊಳ್ಳಲೇಬೇಕು. ಈಗ ನನಗೊಂದು ಸುವರ್ಣಾವಕಾಶ ಸಿಕ್ಕಿದೆ. ನಾನು ಮೋದಿಜಿ ಪರವಾಗಿ, ಪಕ್ಷದ ಪರವಾಗಿ, ಎನ್‌ಡಿಎ ಪರವಾಗಿ ನಾನು ನಿಮ್ಮನ್ನು ಮತಯಾಚಿಸಲು ನಾನು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದು ಸುಲಮತಾ ಬಿಜೆಪಿ ಪರ ಮತಯಾಚಿಸಿದ್ದಾರೆ.

ಇನ್ನು ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಅಪ್ಲೋಡ್ ಮಾಡಿರುವ ಸುಮಲತಾ, ಇಂದು ಪ್ರಧಾನಿ ಶ್ರೀ Narendra Modi ಅವರ ನೇತೃತ್ವದಲ್ಲಿ ಮೈಸೂರಿನಲ್ಲಿ ನಡೆದ ವಿಜಯ ಸಂಕಲ್ಪ ಸಮಾವೇಶದಲ್ಲಿ ಭಾಗವಹಿಸಿದ ಕ್ಷಣ. ಈ 10 ವರ್ಷಗಳಲ್ಲಿ ನಮ್ಮ ದೇಶ ಸಾಧಿಸಿದ ಅಭಿವೃದ್ಧಿ ಯೋಜನೆಗಳು ನಮ್ಮ ಕಣ್ಣ ಮುಂದಿವೆ. ಪ್ರಧಾನಿಯವರು ಹೇಳಿರುವಂತೆ ಅವೆಲ್ಲಾ ಟ್ರೇಲರ್ ಅಷ್ಟೆ. ನಾವಿನ್ನೂ ಸಾಧಿಸುವುದು ಬಹಳಷ್ಟಿದೆ. ಆ ಹಾದಿಯಲ್ಲಿ ಸಾಗಲು ಪುನಃ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಸರ್ಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ಬಾರಿ 400ಕ್ಕೂ ಹೆಚ್ಚಿನ ಸೀಟ್ ಗಳನ್ನು ಎನ್ .ಡಿ.ಎ. ಗೆ ತರೋಣ. ಕರ್ನಾಟಕದಲ್ಲಿ 28ಕ್ಕೆ 28 ಸೀಟ್ ಗಳನ್ನು ಗೆಲ್ಲಿಸೋಣ. ವಿಕಸಿತ ಭಾರತವನ್ನು ರೂಪಿಸಲು ನಾವೆಲ್ಲಾ ಒಂದಾಗಿ ಹೆಜ್ಜೆ ಹಾಕೋಣ ಎಂದು ಸುಮಲತಾ ಅಂಬರೀಷ್ ಬರೆದುಕೊಂಡಿದ್ದಾರೆ.

ಸುಮಲತಾ ಅವರ ಭಾಷಣ ಕೇಳಬೇಕೆಂದಲ್ಲಿ ಈ ಲಿಂಕ್ ಒತ್ತಿ..

ಮೋದಿ ಗ್ಯಾರಂಟಿ ಶಾಶ್ವತ ಗ್ಯಾರಂಟಿ. ದೇಶ ಮತ್ತು ಬದುಕು ಕಟ್ಟುವ ಗ್ಯಾರಂಟಿ: ಬಸವರಾಜ ಬೊಮ್ಮಾಯಿ

ವಿಕಸಿತ ಭಾರತ ಸಂಕಲ್ಪದ‌ ಮಾರ್ಗದರ್ಶಿ ಪ್ರಣಾಳಿಕೆಯಾಗಿದೆ: ಬಿಜೆಪಿ ಪ್ರಣಾಳಿಕೆಯನ್ನು ಹಾಡಿ ಹೊಗಳಿದ ಜೋಶಿ

- Advertisement -

Latest Posts

Don't Miss