- Advertisement -
Political News: ನಿಯಮ ಉಲ್ಲಂಘಿಸಿ SSVM ಕಂಪನಿಗೆ ಗಣಿ ಗುತ್ತಿಗೆ ಮಂಜೂರು ಮಾಡಿದ್ದ ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಸಲು ಲೋಕಾಯುಕ್ತ ಪೊಲೀಸರು ರಾಜ್ಯಪಾಲರ ಬಳಿ ಅನುಮತಿ ಕೇಳಿದ ವಿಚಾರಕ್ಕೆ ಸಂಬಂಧಿಸಿದಂತೆ ದಿನೇಶ್ ಗುಂಡೂರಾವ್ ಆಕ್ರೋಶ ಹೊರಹಾಕಿದ್ದಾರೆ. ರಾಾಜ್ಯಪಾಲರೂ ಇನ್ನೂವರೆಗೂ ಈ ಬಗ್ಗೆ ಅನುಮತಿ ನೀಡಿಲ್ಲವೆಂದು ಅಸಮಾಧಾನ ಹೊರಹಾಕಿದ್ದಾರೆ.
ನಿಯಮ ಉಲ್ಲಂಘಿಸಿ SSVM ಕಂಪನಿಗೆ ಗಣಿ ಗುತ್ತಿಗೆ ಮಂಜೂರು ಮಾಡಿದ್ದ ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಸಲು ಲೋಕಾಯುಕ್ತ ಪೊಲೀಸರು ರಾಜ್ಯಪಾಲರ ಬಳಿ ಅನುಮತಿ ಕೇಳಿದ್ದಾರೆ. ರಾಜ್ಯಪಾಲರು ತಾವು ನಿಷ್ಪಕ್ಷಪಾತರು ಹಾಗೂ ಸಂವಿಧಾನಬದ್ದವಾಗಿ ನಡೆಯುವವರು ಎಂದಾದರೆ ಈ ಕೂಡಲೇ ಆರೋಪ ಪಟ್ಟಿ ಸಲ್ಲಿಸಲು ಅನುಮತಿ ನೀಡಬೇಕು ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸಿದ್ದರಾಮಯ್ಯರ ವಿರುದ್ದ ಮುಡಾ ಪ್ರಕರಣದಲ್ಲಿ ತರಾತುರಿಯಲ್ಲಿ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದ ರಾಜ್ಯಪಾಲರು, ಹೆಚ್.ಡಿ.ಕುಮಾಾರಸ್ವಾಮಿ ವಿರುದ್ಧದ ಪ್ರಕರಣದಲ್ಲಿ ವಿಭಿನ್ನವಾಗಿ ವರ್ತಿಸುತ್ತಿದ್ದಾರೆ. ಹಲವು ಕುಂಟು ನೆಪ ಹೇಳುತ್ತಾ ಆರೋಪ ಪಟ್ಟಿ ಸಲ್ಲಿಸಲು ಅನುಮತಿ ನೀಡಲು ಮೀನಾ ಮೇಷ ಎಣಿಸುತ್ತಿದ್ದಾರೆ. ಸಿದ್ದರಾಮಯ್ಯರಿಗೊಂದು ನ್ಯಾಯ.. ಕುಮಾರಸ್ವಾಮಿಯವರಿಗೊಂದು ನ್ಯಾಯವೇ.? ಎಂದು ದಿನೇಶ್ ಗುಂಂಡೂರಾವ್ ಪ್ರಶ್ನಿಸಿದ್ದಾರೆ.
ರಾಜ್ಯಪಾಲರು HDK ವಿಚಾರದಲ್ಲಿ ಸಹಜ ನ್ಯಾಯ ಪರಿಪಾಲನೆ ಮಾಡಲಿ. ಸಿದ್ದರಾಮಯ್ಯರ ವಿರುದ್ಧ ತೋರಿದ್ದ ಆಸಕ್ತಿಯನ್ನು ಕುಮಾರಸ್ವಾಮಿ ಪ್ರಕರಣದಲ್ಲೂ ತೋರಿಸಲಿ. ಆಗ ಆ ಹುದ್ದೆಗೆ ಒಂದು ಘನತೆ ಲಭಿಸಲಿದೆ. ಇಲ್ಲದೆ ಹೋದರೆ ರಾಜ್ಯಪಾಲರು ಬಿಜೆಪಿಯ ಏಜೆಂಟ್ ಎಂಬುದು ಸಾಬೀತಾಗುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಕ್ರೋಶ ಹೊರಹಾಕಿದ್ದಾರೆ.
- Advertisement -