Friday, June 20, 2025

Latest Posts

ಸರ್ಕಾರಿ ಜಾಗ ಒತ್ತುವರಿದಾರರಿಗೆ ಖಡಕ್​ ವಾರ್ನಿಂಗ್

- Advertisement -

ಹುಳದೇನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಜಮೀನು ಒತ್ತುವರಿ ಮಾಡಿದ್ದವರಿಗೆ ಪಿಡಿಓ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಊರಿನ ಸರ್ಕಾರಿ ಶಾಲೆಯ ಮುಂಭಾಗದಲ್ಲಿರುವ ವೆಂಕಟರಮಣಪ್ಪ ಹಾಗೂ ಮಕ್ಕಳು, ಪ್ರಕಾಶ್ ಮನೆಯವರು, ನಾರಾಯಣಪ್ಪ ಹಾಗೂ ರಾಮಚಂದ್ರಪ್ಪ ಎಂಬುವವರು, ಸರ್ಕಾರಿ ಜಮೀನನ್ನು ಅತಿಕ್ರಮಣವನ್ನು ಮಾಡಿದ್ದು ಊರಿನ ಚರಂಡಿ ಮೇಲೆ ಮನೆಗಳನ್ನು ನಿರ್ಮಾಣ ಮಾಡಿದ್ದರು. ದಾರಿ ವಿಚಾರವಾಗಿ ಅಕ್ಕ ಪಕ್ಕದ ಮನೆಯವರು ಸುಮಾರು ಎರಡು ತಿಂಗಳಿಂದ ಜಗಳವಾಡಿದ್ದಾರೆ. ಈ ವಿಚಾರವಾಗಿ ಗ್ರಾಮ ಪಂಚಾಯ್ತಿಗೆ ದೂರು ಬಂದಿದೆ. ಪ್ರಕರಣ ಸಂಬಂಧ ಪರಿಶೀಲನೆ ನಡೆಸಿದ ಗ್ರಾ. ಪಂ. ಪಿಡಿಓ ಅರ್ಚನ, ಸ್ಥಳ ಪರಿಶೀಲನೆ ನಡೆಸಿ ಮೂರು ಮನೆಯವರಿಗೆ ಬುದ್ದಿ ಹೇಳಿದ್ರು.

Karnataka TV Contact


ಆದ್ರೆ ವೆಂಕಟರಮಣಪ್ಪ ದಾರಿಗೆ ಅಡ್ಡಲಾಗಿ ಕಂಪೌಂಡ್​ ನಿರ್ಮಿಸೋದಾಗಿ ಪಟ್ಟು ಹಿಡಿದಿದ್ದರು. ಯಾರು ಎಷ್ಟೆ ಹೇಳಿದ್ರು ಯಾರಿಗೂ ಕ್ಯಾರೆ ಮಾಡಲಿಲ್ಲ. ಇದನ್ನು ಅರಿತ ಪಿಡಿಓ ಮೂರು ಮನೆಯವರ ಮೂಲ ಪತ್ರಗಳನ್ನು ಪರಿಶೀಲನೆ ನಡೆಸಿ ಸರ್ಕಾರಿ ಜಾಗವನ್ನು ಮಾರ್ಕ್ ಮಾಡಿ ಎಚ್ಚರಿಕೆ ನೀಡಿದ್ರು. ಹಾಗೂ ನೋಟೀಸ್ ಸಹ ನೀಡಿದ್ರು. ಇದಕ್ಕು ವೆಂಕಟರಮಣಪ್ಪನವರು ಕ್ಯಾರೆ ಅನ್ನಲಿಲ್ಲ. ಪಿಡಿಓ ಸರ್ಕಾರಿ ಒತ್ತುವರಿ ಜಾಗವನ್ನು ತೆರವು ಮಾಡಲು ಆದೇಶ ನೀಡಿದ್ರು. ಇಂದು ಜೆಸಿಬಿಯೊಂದಿಗೆ ಸ್ಥಳಕ್ಕೆ ಬೇಟಿ ನೀಡಿದ ಪಿಡಿಓ ಅರ್ಚನಾರವರು
ಮತ್ತೆ ಮೂರು ಮನೆಯವರೊಂದಿಗೆ ಮಾತುಕತೆ ನಡೆಸಿದ್ರು. ಜೆಸಿಬಿ ನೋಡಿದ ವೆಂಕಟರಮಣಪ್ಪ ದಾರಿ ಬಿಡುವುದಾಗಿ ರಾಜಿಯಾದ್ರು. ಗ್ರಾಮಸ್ಥರ ಸಮ್ಮುಖದಲ್ಲಿ ದಾರಿ ಬಿಡುವುದಾಗಿ ಒಪ್ಪಿಗೆ ನೀಡಿದರು.


ಇನ್ನು ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದರ ಪರಿಣಾಮ ಪಿಡಿಓರವರು ದಾರಿಗೆ ಅಡ್ಡಲಾಗಿ ಮನೆ ನಿರ್ಮಾಣ ಮಾಡಿದ್ದವರಿಗೆ ದಂಡ ಹಾಕಿ ಕ್ಷಮಾಪಣ ಪತ್ರ ಬರೆಸಿಕೊಂಡರು. ಕಾರ್ಯಾಚರಣೆಗೆ ಕಾರ್ಯದರ್ಶಿಗಳಾದ ಅಶ್ವತ್, ಮಾಸ್ತಿ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಹುಳದೇನಹಳ್ಳಿ ಗ್ರಾಮ ಪಂಚಾಯ್ತುಯ ಸಿಬ್ಬಂದಿ ಹಾಗೂ ಗ್ರಾಮಸ್ಥರು ಸಾಥ್​ ನೀಡಿದ್ರು.
ನಾಗೇಶ್ ಹೆಚ್.ವಿ ಕರ್ನಾಟಕ ಟಿವಿ ಕೋಲಾರ.

ಶ್ರೀ ಸಾಯಿ ಭಗವತಿ ಜ್ಯೋತಿಷ್ಯ ಶಾಸ್ತ್ರ, ಪ್ರಧಾನ್ ತಾಂತ್ರಿಕ:-ವಾಸುದೇವನ್
ಇವರು ನಿಮ್ಮ ಸಮಸ್ಯೆಗಳಾದ:-ಮದುವೆ ವಿಳಂಬ, ದಾಂಪತ್ಯ ಸಮಸ್ಯೆ, ಸ್ತ್ರೀ-ಪುರುಷ ಪ್ರೇಮ ವಿಚಾರ, ದಾಂಪತ್ಯ ಕಲಹ, ಡಿವೋರ್ಸ್ ಪ್ರಾಬ್ಲಮ್, ಕೋರ್ಟ್ ಕೇಸ್,ಮಾಟ-ಮಂತ್ರ ತಡೆ, ಇನ್ನೂ ಅನೇಕ ನಿಮ್ಮ ಜೀವನದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಸ್ತ್ರೋಕ್ತ 2 ದಿನಗಳಲ್ಲಿ ಪರಿಹಾರ ಮಾಡುತ್ತಾರೆ.
ಮೊಬೈಲ್ ನಂಬರ್:-9663502278
- Advertisement -

Latest Posts

Don't Miss