ಕೊಳ್ಳೇಗಾಲ(Kollegala) ವಿಧಾಸಭಾ ವ್ಯಾಪ್ತಿಯ ಲೋಕೋಪಯೋಗಿಯ ಎಸ್. ಇ.ಪಿ. (SEP) ಮತ್ತು ಟಿ.ಎಸ್. ಪಿ.(TSP) ಯೋಜನೆ ಮತ್ತು ಜಿಲ್ಲಾ ಪಂಚಾಯತ್ ಯೋಜನೆ (District Panchayat Scheme) ಅನುದಾನ, ಸಿದ್ದಯ್ಯನಪುರ 35 ಲಕ್ಷ , ಹೊಸ ಆಣಗಳ್ಳಿ 25, ಲಕ್ಷ ಶಂಕಣಪುರ 1ಕೋಟಿ 10 ಲಕ್ಷ, ಮುಡಿಗುಂಡ 50, ಕುಣಗಳ್ಳಿ 60 ಲಕ್ಷ, ಸೂರಪುರ 4.50 ಲಕ್ಷ ಹಾಗು ಒಟ್ಟು 7.50 ಕೋಟಿ ವೆಚ್ಚ ಅನುದಾನದಲ್ಲಿ ಗ್ರಾಮದ ಬೀದಿಗಳಲ್ಲಿ ಸಿಸಿರಸ್ತೆ, ಚರಂಡಿಗೆ ನಿರ್ಮಾಣಕ್ಕೆ ಕೊಳ್ಳೇಗಾಲ ಶಾಸಕ ಎನ್. ಮಹೇಶ್(MLA N. Mahesh) ಗುದ್ದಲಿ ಪೂಜೆಯನ್ನು ನೆರವೇರಿಸಿ ಕಾಮಗಾರಿಗೆ ಚಾಲನೆಯನ್ನು ನೀಡಿದರು. ಶಾಸಕ ಎನ್ ಮಹೇಶ್ ಮಾತನಾಡಿ ಕ್ಷೇತ್ರದ ಗ್ರಾಮೀಣ ಭಾಗದ ರಸ್ತೆಗಳು ಸಂಪೂರ್ಣ ಲೋಕೋಪಯೋಗಿ ಇಲಾಖೆ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಸಿಸಿ ರಸ್ತೆ ಚರಂಡಿ ನಿರ್ಮಾಣಕ್ಕೆ ಗುದ್ದಲಿ ಪೂಜೆಯನ್ನು ನಡೆಸಲಾಗಿದೆ. ಕಾಮಗಾರಿಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವಂತೆ ಗುತ್ತಿಗೆದಾರರಿಗೆ ತಿಳಿಸಲಾಗಿದೆ. ಗ್ರಾಮಸ್ಥರು ನಿಂತು ಕಾಮಗಾರಿ ಉತ್ತಮ ರೀತಿಯಲ್ಲಿ ನಡೆಸುವಂತೆ ನೋಡುಕೊಳ್ಳಬೇಕು ಕ್ಷೆತ್ರದ ಅಭಿವೃದ್ಧಿಗೆ ಇನ್ನು ಸಾಕಷ್ಟು ಹಣ ಬೇಕಾಗಿರುವುದರಿಂದ ನಾನು ಸರ್ಕಾರದ ಜೊತೆ ಮಾತನಾಡಿ ಹಣ ಬಿಡುಗಡೆ ಮಾಡಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಶೀಲ, ಮಾಜಿ ಉಪಾಧ್ಯಕ್ಷೆ ಕವಿತಾ, ಲೋಕೋಪಯೋಗಿ ಎಇಇ ರಾಮಸ್ವಾಮಿ, ಇಂಜಿನಿಯರ್ ಸತೀಶ್, ಗುತ್ತಿಗೆದಾರರಾದ ವಾಲೆ ಮಹಾದೇವ, ಪುಟ್ಟಸ್ವಾಮಿ, ಸಿದ್ದಿಕ್, ಮುಜಿದ್ ಹಾಗೂ ಇನ್ನಿತರರು ಇದ್ದರು.