Sunday, September 8, 2024

Latest Posts

ರಾಹುಲ್ ಗಾಂಧಿ ಕೆಟ್ಟು ನಿಂತ ಗ್ರಾಮಾಫೋನ್ ಇದ್ದಂತೆ. ಹೇಳಿದ್ದನ್ನೇ ಹೇಳುತ್ತಾರೆ: ಪ್ರಹ್ಲಾದ್ ಜೋಶಿ ವ್ಯಂಗ್ಯ..

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ನವರು ಅಧಿಕಾರಕ್ಕೆ ಬರಲ್ಲ ಹೀಗಾಗಿ ಸುಳ್ಳು ಆಶ್ವಾಸನೆ ಕೊಡುತ್ತಿದ್ದಾರೆ. ನಾನು ಭವಿಷ್ಯ ಹೇಳುತ್ತಿದ್ದೇನೆ ಕಳೆದ ಬಾರಿಗಿಂತ ಕಾಂಗ್ರೆಸ್ ಗೆ ಕಡಿಮೆ ಸೀಟ್ ಗಳು ಬರುತ್ತೆ. ವಿರೋಧ ಪಕ್ಷದಲ್ಲೂ ಸಹ ಕುಳಿತುಕೊಳ್ಳಲು ಅವರಿಗೆ ಅರ್ಹತೆ ಬರಲ್ಲ. ಸುಳ್ಳು ಅಂದರೆ ಕಾಂಗ್ರೆಸ್, ಕಾಂಗ್ರೆಸ್ ಅಂದ್ರೇನೇ ಸುಳ್ಳು. ಕಳೆದ ಬಾರಿ 52 ಸೀಟು ಗೆದ್ದಿದ್ದರು. ಈ ಬಾರಿ ಅವರಿಗೆ ಅಷ್ಟು ಸೀಟು ಗೆಲ್ಲಲು ಸಾಧ್ಯವಾಗಲ್ಲ ಎಂದು ಜೋಶಿ ಕಾಂಗ್ರೆಸ್ ಬಗ್ಗೆ ಭವಿಷ್ಯ ನುಡಿದಿದ್ದಾರೆ.

ದೇಶದಲ್ಲಿ ಇವರದ್ದು ಎರಡೂವರೆ ಸರ್ಕಾರವಿದೆ. ಅಲ್ಲಿಯು ಕೂಡ ಕಾಂಗ್ರೆಸ್ ನವರಿಗೆ ಹೆಚ್ಚಿನ ಸ್ಥಾನ ಬರಲ್ಲ. ರಾಜ್ಯದಲ್ಲಿ ಒಂದೇ ಒಂದು ಸ್ಥಾನವನ್ನು ಕಾಂಗ್ರೆಸ್ ನವರಿಗೆ ಗೆಲ್ಲಲು ಸಾಧ್ಯವಿಲ್ಲ. ಈ ಬಾರಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ 28ಕ್ಕೆ 28 ಕ್ಷೇತ್ರಗಳಲ್ಲೂ ಗೆಲ್ಲಲಿದೆ. ಸುಳ್ಳು ಹೇಳುವ ಕಾರ್ಖಾನೆಯನ್ನು ಕಾಂಗ್ರೆಸ್ ಪಕ್ಷ ತೆರೆದು ಇಟ್ಟಿದೆ. ಇವರ ನ್ಯಾಯದಿಂದ ಜನರಿಗೆ ಅನ್ಯಾಯವಾಗುತ್ತಿದೆ. ರಾಹುಲ್ ಗಾಂಧಿ ಗ್ರಾಮಾಫೋನ್ ಇದ್ದಂತೆ. ಕೆಟ್ಟು ನಿಂತ ಗ್ರಾಮಾ ಫೋನ್ ನಂತೆ ರಾಹುಲ್ ಗಾಂಧಿ ಹೇಳಿದ್ದನ್ನೇ ಹೇಳುತ್ತಾರೆ ಎಂದು ಹೇಳಿದ ಜೋಶಿ, ಎಲ್ಲೆಲ್ಲಿ ನೋಡಲಿ ಎಂಬ ಹಾಡು ಹೇಳಿ, ರಾಹುಲ್ ಗಾಂಧಿ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಜಾತಿಗಣತಿಯನ್ನು ನೆಹರು, ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿ ವಿರೋಧಿಸಿದ್ದರು. ಮಂಡಲ ಆಯೋಗದ ವರದಿಯನ್ನು ವಿರೋಧಿಸಿದರು. ಜಾತಿಗಣತಿ ಹೆಸರಿನಲ್ಲಿ ಬಿಹಾರದಲ್ಲಿನ ಇಬ್ಬರು ಮಂತ್ರಿಗಳನ್ನು ಕಳೆದುಕೊಂಡಿದ್ದಾರೆ. ಮನೆಯಬೆಕ್ಕು ಮನಸ್ಸು ಮಾಡಿದರೆ ಹುಲಿಯಾಗುತ್ತೆ. ಮನೆ ಬೆಕ್ಕು ಮನಸೇ ಮಾಡಲ್ಲ ಹೀಗಾಗಿ ಹುಲಿಯಾಗೋದು ಯಾವಾಗ ? ಇದು ಕಾಂಗ್ರೆಸ್ ನ ಅಧಿಕಾರಕ್ಕೆ ಬರುವ ಕಥೆಯಾಗಿದೆ ಎಂದು ಎಂದು ಜೋಶಿ ತಮಾಷೆ ಮಾಡಿದ್ದಾರೆ.

ನನ್ನ ವಿರುದ್ಧ ಎಲ್ಲಾ ಚುನಾವಣೆಗಳಲ್ಲಿಯೂ ಷಡ್ಯಂತರ ಆಗಿದೆ. ಈ ಬಾರಿಯೂ ಷಡ್ಯಂತರ ಆಗಿದೆ ಆದರೂ ಗೆದ್ದು ಬರುತ್ತೇನೆ. ಜನ ಮತ್ತು ಪಕ್ಷದ ಕಾರ್ಯಕರ್ತರು ನನ್ನ ಕೈ ಹಿಡಿಯೋದು ಗ್ಯಾರಂಟಿ ಎಂದು ಪ್ರಹ್ಲಾದ್ ಜೋಶಿ ಹೇಳಿದರು..

ತನ್ವೀರ್ ಸೇಠ್ ಪುಲ್ವಾಮಾ ದಾಳಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಜೋಶಿ,  ಈ ರೀತಿ ಬೇಜವಾಬ್ದಾರಿ ಹೇಳಿಕೆ ನೀಡುವುದು ಪ್ರಾಣ ಕಳೆದುಕೊಂಡ ಯೋಧರಿಗೆ ಮಾಡುವ ಅಪಮಾನ. ಟೆರರಿಸಂ ಆರಂಭವಾಗಿದ್ದೇ ಕಾಂಗ್ರೆಸ್ ನವರ ಕಾಲದಲ್ಲಿ. ದೇಶದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಇಸ್ಲಾಮಿಕ್ ಟೆರರಿಸಂ ಕಡಿಮೆಯಾಗಿದೆ. ಟೆರರಿಸ್ಟ್ ಗಳನ್ನು ಬ್ರದರ್ ಎಂದು ಕರೆಯುವರ ಬಳಿ ನಾವು ಬುದ್ಧಿ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ ನವರಿಗೆ ನಾಚಿಕೆ ಮಾನ ಮರ್ಯಾದೆ ಅನ್ನೋದು ಇದಿಯಾ ? ಎಂದು ಜೋಶಿ ಪ್ರಶ್ನಿಸಿದ್ದಾರೆ.

ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಬಿಜೆಪಿ ಕಾರ್ಯಕರ್ತನ ವಿಚಾರಣೆ ಹಿನ್ನೆಲೆ, ಬಿಜೆಪಿ ಕಾರ್ಯಕರ್ತ ತನ್ನ ಮೊಬೈಲ್ ಮಾರಾಟ ಮಾಡಿದ್ದ ಅದನ್ನು ಬೇರೆ ಯಾರೋ ಬಳಕೆ ಮಾಡಿದ್ದಾರೆ ಅನ್ನೋ ಮಾಹಿತಿ ಇದೆ. ಕಾಂಗ್ರೆಸ್ ನವರು ಕಸಬ್ ನನ್ನ ಜೈಲಿನಲ್ಲಿ ಇಟ್ಟು ಬಿರಿಯಾನಿ ಕೊಟ್ಟವರು. ಪುಲ್ವಾಮಾ ಉರಿ ದಾಳಿಯಾದಾಗ ತಕ್ಕ ಉತ್ತರ ಕೊಟ್ಟಿದ್ದೇವೆ.ಅಭಿನಂದನೆಗೆ ಏನಾದರೂ ಆದರೆ ತಕ್ಕ ಉತ್ತರ ಕೊಡಬೇಕಾಗುತ್ತೆ ಅಂತ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದಾಗ ಅಭಿನಂದನ್ ಬಿಡುಗಡೆ ಮಾಡಿದ್ರು. ವೋಟ್ ಬ್ಯಾಂಕ್ ಗಾಗಿ ಮೂಲಭೂತವಾದಿಗಳು ಟೆರರಿಸ್ಟ್ ಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಪಕ್ಷ ಕಾಂಗ್ರೆಸ್. ಇದೆಲ್ಲದರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ಪಕ್ಷದವರಿಗಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಸಾಕ್ಷಿಯ ವಿಚಾರಣೆಗೂ, ಆರೋಪಿಯ ವಿಚಾರಣೆಗೂ ವ್ಯತ್ಯಾಸ ತಿಳಿದಿಲ್ಲವೇ?: ಕಾಂಗ್ರೆಸ್ಸಿಗರಿಗೆ ಪ್ರೀತಂಗೌಡ ಪ್ರಶ್ನೆ..

ವಿಷ್ಣುವಿನ ಅವತಾರವೇ ಪ್ರಧಾನಿ ಮೋದಿ: ನಟಿ ಕಂಗನಾ ರಾಣಾವತ್

ಕಾಂಗ್ರೆಸ್‌ನವರು ಉದರಿ ಭಾಗ್ಯಗಳ ಬಗ್ಗೆ ಪ್ರಚಾರ ಮಾಡಿದ್ರೆ ನಡೆಯುತ್ತಾ..?: ಲಾಡ್‌ಗೆ ಜೋಶಿ ತಿರುಗೇಟು..

- Advertisement -

Latest Posts

Don't Miss