Political news: ಮೊದಲಿನಿಂದಲೂ ಬಿಜೆಪಿಗೆ ಸಪೋರ್ಟ್ ಮಾಡುತ್ತ, ಪ್ರಧಾನಿ ಮೋದಿ ಮಾಡಿದ ಅಭಿವೃದ್ಧಿಯನ್ನು ಹೊಗಳುತ್ತ ಬಂದಿರುವುದು ನಟಿ ಕಂಗನಾ ರಾಣಾವತ್.
ಬಿಜೆಪಿ ಸೇರ್ಪಡೆಯಾಗಿ, ಈ ಬಾರಿ ಲೋಕಸಭೆ ಚುನಾವಣೆಗೆ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಕಂಗನಾ ಸ್ಪರ್ಧಿಸುತ್ತಿದ್ದಾರೆ. ಮಂಡಿ ಕಂಗನಾಳ ಹುಟ್ಟೂರು ಅಂತಾ ಹೇಳಲಾಗಿದ್ದು, ಟಿಕೇಟ್ ಘೋಷಣೆಯಾದ ದಿನದಿಂದಲೇ, ಕಂಗನಾ ಈ ಕ್ಷೇತ್ರದಲ್ಲಿ ಪ್ರಚಾರ ಶುರು ಮಾಡಿದ್ದಾರೆ. ಇದೀಗ ಕಂಗನಾ ಪ್ರಧಾನಿ ಮೋದಿಯನ್ನು ವಿಷ್ಣುವಿನ ಅವತಾರವೆಂದು ಹೇಳಿದ್ದಾರೆ.
ಮಂಡಿ ಕ್ಷೇತ್ರದಲ್ಲಿ ಪ್ರಚಾರ ಮಾಡುವಾಗ ಈ ಮಾತನ್ನು ಹೇಳಿರುವ ಕಂಗನಾ, ಮೂರನೇ ಬಾರಿಯೂ ಮೋದಿ ಪ್ರಧಾನಿಯಾಗುವುದು ನಿಶ್ಚಿತವಾಗಿದೆ. ಏಕೆಂದರೆ ಅವರು ವಿಷ್ಣುವಿನ ಅವತಾರವಾಗಿದ್ದು, ನಮ್ಮನ್ನೆಲ್ಲ ಕಾಯುತ್ತಿದ್ದಾರೆ ಎಂದು ಕಂಗನಾ ಮೋದಿಯವರನ್ನು ಹೊಗಳಿದ್ದಾರೆ. ಮತ್ತು ಕಾಂಗ್ರೆಸ್ನ್ನು ಹಗರಣಗಳ ರೂವಾರಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ನವರು ಉದರಿ ಭಾಗ್ಯಗಳ ಬಗ್ಗೆ ಪ್ರಚಾರ ಮಾಡಿದ್ರೆ ನಡೆಯುತ್ತಾ..?: ಲಾಡ್ಗೆ ಜೋಶಿ ತಿರುಗೇಟು..
ನಿಮ್ದು ಲಿಂಗಾಯತರನ್ನು ಒಡೆದು ಆಳೋ ನೀತಿ- ದಿಂಗಾಲೇಶ್ವರ ಸ್ವಾಮೀಜಿ ಆರೋಪ..
Sumalatha : ಸುಮಲತಾಗೆ ದರ್ಶನ್ ,ಯಶ್ ಬೆಂಬಲ ಸಿಗುತ್ತಾ..?! : ಸುಮಲತಾ ನೀಡಿದ ಉತ್ತರವೇನು?