Sunday, June 1, 2025

Latest Posts

ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ರಾಮನವಮಿ ಆಚರಣೆ

- Advertisement -

Spiritual: ನಾಡಿನೆಲ್ಲೆಡೆ ಶ್ರೀ ರಾಮನವಮಿ ಹಬ್ಬದ ಸಡಗರ ಸಂಭ್ರಮ ಮನೆ ಮಾಡಿದೆ.ಕಳೆದ 42ವರ್ಷಗಳಿಂದ ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ ರಾಮನವಮಿ ಅದ್ದೂರಿಯಾಗಿ ನಡೆಯುತ್ತಿದ್ದು, ರಾಮನವಮಿ ಪ್ರಯುಕ್ತ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆದಿದೆ.

ಹೌದು ದೇಶದೆಲ್ಲಡೆ ಶ್ರೀ ರಾಮನವಮಿಯ ಸಂಭ್ರಮ ಕಳೆಗಟ್ಟಿದೆ.ಬೆಂಗಳೂರಿನ ಕೊಡಿಗೆಹಳ್ಲಿ ಗೇಟ್ ಸಮೀಪದ ತಿಂಡ್ಲು ಗ್ರಾಮದ ಪುರಾತನ ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ರಾಮನವವಿ ಪ್ರಯುಕ್ತ 42ನೇ ವರ್ಷದ ರಾಮೋತ್ಸ ಹಾಗೂ ಸೀತಾರಾಮ ಕಲ್ಯಾಣೋತ್ಸವ ವಿಜೃಂಭಣೆ, ಶ್ರದ್ಧೆ ಭಕ್ತಿಯಿಂದ ಆಚರಿಸಲಾಯಿತು.ಶ್ರೀ ರಾಮನವಮಿ ಪ್ರಯುಕ್ತ ಶ್ರೀರಾಮತಾರಕಹೋಮ, ಸೀತಾರಾಮ ಕಲ್ಯಾಣೋತ್ಸವ ಹೀಗೆ ಅನೇಯ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.ಇನ್ನೂ ರಾಮನವಮಿ ಪ್ರಯುಕ್ತ ಪ್ರಸನ್ನ ಆಂಜನೇಯಸ್ವಾಮಿ ದೇವರಿಗೆ ಅಭಿಷೇಕ ಪೂಜೆ ವಿವಿಧ ಬಗೆಯ ಹೂವಿನ ಅಲಂಕಾರವನ್ನು ಮಾಡಲಾಗಿತ್ತು. ಉತ್ಸವ ಮೆರವಣಿಗೆ ನಂತರ ಪ್ರಸನ್ನ ಆಂಜನೇಯಸ್ವಾಮಿ ದೇವರಿಗೆ ಮಹಾ ಮಂಗಳಾರತಿ ಸೇವೆ ಸಲ್ಲಿಸಿ ದೇವಾಲಯಕ್ಕೆ ಬಂದ ಭಕ್ತರಿಗೆ ಅನ್ನ ಪ್ರಸಾದ ವಿನಿಯೋಗ ಮಾಡಲಾಗಿದೆ. ಇನ್ನೂ ಶ್ರೀ ರಾಮನವಮಿ ವಿಶೇಷವಾಗಿ ಪಾನಕ ಮುದ್ದೆ,ಕಾಳು ಸಾಂಬಾರ್ ಅನ್ನ ,ಪಾಯಸ ಮಜ್ಜಿಗೆ ಪ್ರಸಾದವನ್ನು ನೀಡಲಾಗಿದೆ.

ಇನ್ನೂ ಕಳೆದ 42ವರ್ಷಗಳಿಂದ ರುದ್ರಪ್ಪ ಅವರ ಕುಟುಂಬವು ಪ್ರಸನ್ನ ಆಂಜನೇಯಸ್ವಾಮಿ ದೇವಾಲಯದಲ್ಲಿ ಶ್ರೀ ರಾಮನವಮಿಯನ್ನು ಆಚರಣೆ ಮಾಡುತ್ತಿದ್ದು ಗ್ರಾಮಸ್ಥರ ಸಹಕಾರದಿಂದ ತಿಂಡ್ಲು ಗ್ರಾಮದಲ್ಲಿ ಒಗ್ಗಟ್ಟಿನಿಂದ ದೇವಾಲಯದಲ್ಲಿ ಸೇವೆ 42ವರ್ಷಗಳಿಂದ ಮುಂದುವರಿಯುತ್ತಿದೆ.

ಒಟ್ಟಾರೆಯಾಗಿ ತಿಂಡ್ಲು ಗ್ರಾಮದಲ್ಲಿ ಶ್ರೀ ರಾಮನವಮಿಯನ್ನು ಊರಿನ ಹಬ್ಬದ ರೀತಿಯಲ್ಲಿ ಆಚರಣೆ ಮಾಡಿದ್ದು ರಾಮನವಮಿಯಲ್ಲಿ ಗ್ರಾಮಸ್ಥರು ಭಕ್ತರು ಭಾಗಿಯಾಗಿ ಪ್ರಸನ್ನ ಆಂಜನೇಯಸ್ವಾಮಿ ದೇವರ ಕೃಪೆಗೆ ಪಾತ್ರರಾಗಿದ್ದಾರೆ.

- Advertisement -

Latest Posts

Don't Miss