Sandalwood News: ರಾಕಿಂಗ್ ಸ್ಟಾರ್ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ಇಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸದಾಶಿವ ರುದ್ರ, ಸೂರ್ಯ ನಾರಾಯಣ ದೇವಸ್ಥಾನಕ್ಕೆ ಭೇಟಿ ನೀಡಿ, ಮಣ್ಣಿನ ಹರಕೆ ನೆರವೇರಿಸಿದರು.
ಟಾಕ್ಸಿಕ್ ಸಿನಿಮಾ ಡೈರೆಕ್ಟರ್ ವೆಂಕಟ್ ಅವರ ಫ್ಯಾಮಿಲಿ ಜೊತೆಯಲ್ಲಿ ಈ ದೇವಸ್ಥಾನಕ್ಕೆ ಬಂದಿದ್ದ ಯಶ್ ದಂಪತಿ, ಮಣ್ಣಿನ ರೀಲ್ಸ್ ಮತ್ತು ಆರೋಗ್ಯ ಸಂಬಂಧಿಸಿದ ಮಣ್ಣಿನ ಮೂರ್ತಿಯ ಹರಕೆ ಸಲ್ಲಿಸಿ, ವಿಶೇಷ ಪೂಜೆ ಮಾಡಿಸಿದ್ದಾರೆ. ಬಳಿಕ ಧರ್ಮಸ್ಥಳಕ್ಕೆ ಭೇಟಿ ನೀಡಿ, ಶ್ರೀ ಮಂಜುನಾಥನ ಆಶೀರ್ವಾದ ಪಡೆದಿದ್ದಾರೆ.
ಈ ಮುಂಚೆ ಕೆಜಿಎಫ್ ಚಿತ್ರ ರಿಲೀಸ್ಗೂ ಮುನ್ನ ಹರಕೆ ಹೊತ್ತು, ಬಳಿಕ ಮಣ್ಣಿನ ಹರಕೆ ತೀರಿಸಲು, ಯಶ್ ಸದಾಶಿವ ರುದ್ರ ದೇವಸ್ಥಾನಕ್ಕೆ ಬಂದಿದ್ದರು. ಈ ದೇವಸ್ಥಾನಕ್ಕೆ ಹಲವು ಭಕ್ತಾದಿಗಳು ಬಂದು, ಮದುವೆಯಾಗಲಿ, ಮಕ್ಕಳಾಗಲಿ, ಮನೆ ಕಟ್ಟುವಂಂತಾಗಲಿ ಎಂದು ಹರಕೆ ಹೊತ್ತು, ಬಳಿಕ ಆ ಆಸೆ ಈಡೇರಿದ ಬಳಿಕ, ಇಲ್ಲಿ ಬಂದು ಮಣ್ಣಿನ ಹರಕೆ ಸಲ್ಲಿಸುತ್ತಾರೆ.