Thursday, February 13, 2025

Latest Posts

ಕೇಂದ್ರ ಸಚಿವ ಅಜಯ್ ಮಿಶ್ರಾ ವಜಾಕ್ಕೆ ಆಗ್ರಹ- ದೇಶಾದ್ಯಂತ ರೈಲು ತಡೆ

- Advertisement -

ಉತ್ತರಪ್ರದೇಶ: ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಪ್ರಮುಖ ಆರೋಪಿ ಆಶೀಶ್ ಮಿಶ್ರಾ ರ ತಂದೆ  ಕೇಂದ್ರ ಸಚಿವ ಅಜಯ್​ ಮಿಶ್ರಾರನ್ನು ಹುದ್ದೆಯಿಂದ ವಜಾಗೊಳಿಸಬೇಕು ಅಂತ ಆಗ್ರಹಿಸಿ ಇಂದು ಸಂಯುಕ್ತ ಕಿಸಾನ್​ ಮೋರ್ಚಾ ರೈತ ಸಂಘಟನೆ ರಾಷ್ಟ್ರಾದ್ಯಂತ ರೈಲು ತಡೆ ಆಂದೋಲನಕ್ಕೆ ಕರೆ ನೀಡಿದೆ. 

ಇನ್ನು ದೇಶಾದ್ಯಂತ ರೈತ ಸಂಘಟನೆಗಳು ಬೆಳಗ್ಗೆ 10ಗಂಟೆಯಿಂದ ಸಂಜೆ ನಾಲ್ಕು ಗಂಟೆವರೆಗೆ ಅಂದರೆ ಸುಮಾರು 6ತಾಸು ರೈಲು ತಡೆ ನಡೆಲಿವೆ.

ಇನ್ನು ಕೇಂದ್ರ ಗೃಹ ಇಲಾಖೆಯ ಸಚಿವ ಅಜಯ್​  ವಜಾಗೊಳಿಸಿದಂತೂ ನಮಗೆ ನ್ಯಾಯ ಸಿಗುವುದಿಲ್ಲ. ಅಲ್ಲದೆ ಅವರು ಹುದ್ದೆಯಲ್ಲಿರುವವರೆಗೂ ಪ್ರಕರಣದ ನ್ಯಾಯಸಮ್ಮತ ತನಿಖೆಗೆ ಅವಕಾಶವೇ ಇರೋದಿಲ್ಲ. ಹೀಗಾಗಿ ಅವರನ್ನು ವಜಾಗೊಳಿಸಬೇಕು  ಅಂತ ಸಂಯುಕ್ತ ಕಿಸಾನ್ ಸೇನೆ ಒತ್ತಾಯಿಸಿದೆ.

- Advertisement -

Latest Posts

Don't Miss