Thursday, June 19, 2025

Latest Posts

ಶಾಲಾ-ಕಾಲೇಜುಗಳು ವಾರದ ಮಟ್ಟಿಗೆ ಬಂದ್..!

- Advertisement -

ದೆಹಲಿ : ದೆಹಲಿಯಲ್ಲಿ ವಾಯು ಗುಣಮಟ್ಟ ಅಪಾಯದ ಹಂತಕ್ಕೆ ತಲುಪಿದೆ. ದೆಹಲಿ ಸುತ್ತಮುತ್ತಲಿರುವ ಶಾಲಾ-ಕಾಲೇಜುಗಳು ಹಾಗೂ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಬೇಕು ಎಂದು ವಾಯು ಗುಣಮಟ್ಟ ನಿರ್ವಹಣಾ ಆಯೋಗ ಪ್ರಕಟಣೆ ಬಿಡುಗಡೆ ಮಾಡಿದೆ. ದೆಹಲಿ- ಎನ್ ಸಿ ಆರ್ ಪ್ರದೇಶಗಳಲ್ಲಿ ಸದ್ಯ ವಾಯುಮಾಲಿನ್ಯ ಅತ್ಯಂತ ಕಳಪೆ ಮಟ್ಟಕ್ಕೆ ಇಳಿದಿದೆ. ಇದರ ಪರಿಣಾಮವಾಗಿ ದೆಹಲಿ ಮತ್ತು ಎನ್ ಸಿ ಆರ್ ವ್ಯಾಪ್ತಿಯ ರಾಜ್ಯಗಳಾದಂತಹ ಹರಿಯಾಣ, ರಾಜಸ್ಥಾನ,ಉತ್ತರ ಪ್ರದೇಶ ,ಪಂಜಾಬ್ ಸರ್ಕಾರಗಳಿಗೆ ನವಂಬರ್ 21ರವರೆಗೆ ಕಟ್ಟಡ ಕಾಮಗಾರಿ, ನಡೆಸದಂತೆ ಸಮಿತಿ ಸೂಚಿಸಿದೆ. ಬಸ್,ಮೆಟ್ರೊ, ರೈಲು, ಮತ್ತು ಮಿಲಿಟರಿ ಸಂಬಂಧಿತ ಸಂಚಾರಗಳನ್ನು ಕಠಿಣ ನಿಯಮಾವಳಿಗಳ ಅನ್ವಯ ನಡೆಸುವಂತೆ ತಿಳಿಸಲಾಗಿದೆ. ಅನುಮತಿ ಇಲ್ಲದೆ ತೈಲ ಬಳಕೆ ಮಾಡುತ್ತಿರುವ ಎನ್ ಸಿ ಆರ್ ಮತ್ತು 10-15 ವರ್ಷದ ಹಳೆಯ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳು ರಸ್ತೆಗಿಳಿಯದಂತೆ ನಿರ್ದೇಶಿಸಲಾಗಿದೆ. ದೆಹಲಿಯಲ್ಲಿ ಶಾಲಾ-ಕಾಲೇಜು ಮತ್ತು ಇತರೆ ಶೈಕ್ಷಣಿಕ ಸಂಸ್ಥೆಗಳ ಭೌತಿಕ ತರಗತಿಗಳನ್ನು ವಾರದ ಮಟ್ಟಿಗೆ ಬಂದ್ ಮಾಡಬೇಕೆಂದು ದೆಹಲಿ ಸರಕಾರ ಆದೇಶಿಸಿದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ದೆಹಲಿಯ ಎಲ್ಲಾ ಸರ್ಕಾರಿ ಕಚೇರಿಗಳ ನೌಕರರಿಗೆ ವರ್ಕ್ ಫ್ರಮ್ ಹೋಮ್ ನೀಡಲಾಗಿದೆ.

- Advertisement -

Latest Posts

Don't Miss