Movie News: ಖ್ಯಾತ ಪಂಜಾಬಿ ಗಾಯಕ ಬಂಟಿ ಮೇಲೆ ಗುಂಡಿನ ದಾಳಿ ನಡೆದಿದ್ದು, ಅದೃಷ್ಟವಶಾತ್ ಬಂಟಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೊಹಾಲಿಯ ರೆಸ್ಟೋರೆಂಟ್ನಲ್ಲಿದ್ದಾಗ, ಬಂಟಿ ಮೇಲೆ ಗುಂಡಿನ ದಾಳಿ ನಡೆದಿದ್ದು, ತಕ್ಷಣ ಬಂಟಿ ಆ ಸ್ಥಳದಿಂದ ಕಾಲ್ಕಿತ್ತು ಪ್ರಾಣ ಉಳಿಸಿಕೊಂಡಿದ್ದಾರೆ. ಇನ್ನು ಈ ದಾಳಿ ಏಕೆ ಆಯಿತು ಎಂದರೆ, ಬಂಟಿ ಬಳಿ ಓರ್ವ ವ್ಯಕ್ತಿ ತನಗೆ ಒಂದು ಕೋಟಿ ರೂಪಾಯಿ ಕೊಡಬೇಕು. ಇಲ್ಲದಿದ್ದಲ್ಲಿ, ನಾನು ನಿನ್ನನ್ನು ಕೊಲ್ಲುತ್ತೇನೆ ಎಂದು ಹೇಳಿದ್ದನಂತೆ. ಆದರೆ ಬಂಟಿ ಆ ಬೆದರಿಕೆಗೆ ಹೆದರದೆ ನಿರ್ಲಕ್ಷ್ಯ ಮಾಡಿದ್ದರು.
ಅದೇ ವ್ಯಕ್ತಿ ಇಂದು, ಬಂಟಿ ರೆಸ್ಟೋರೆಂಟ್ನಲ್ಲಿ ಇರುವುದನ್ನು ತಿಳಿದು ಅಲ್ಲೇ ಬಂದು ಅಟ್ಯಾಕ್ ಮಾಡಿದ್ದಾನೆ. ಇನ್ನು ಸಿಧು ಮೂಸೆವಾಲಾನನ್ನು ಕೊಂದ ಗ್ಯಾಂಗ್ನಲ್ಲಿ ಈ ವ್ಯಕ್ತಿ ಇದ್ದಾನೆ, ಇವರಿಗೆಲ್ಲ ಹೀಗೆ ಮಾಡಬೇಕೆಂದು ಎಂದು ಕೆಲಸ ಹೇಳುವ ವ್ಯಕ್ತಿ ಕೆನಡಾದಲ್ಲಿ ಇದ್ದಾನೆಂಬ ಮಾಹಿತಿ ಇದೆ. ಅಲ್ಲದೇ, ಇವರೆಲ್ಲ ಗ್ಯಾಂಗಸ್ಟರ್ ಲಾರೆನ್ಸ್ ಬಿಷ್ಣೋಯ್ ಕಡೆಯವರು ಎನ್ನಲಾಗಿದೆ.
ಶಕ್ತಿಕೇಂದ್ರ ವಿಧಾನಸೌಧದಲ್ಲಿ ಇಂಥ ಘಟನೆ ನಡೆದಿದ್ದು ಖಂಡನೀಯ: ಜಗದೀಶ್ ಶೆಟ್ಟರ್
ರಾಂಗ್ ರೂಟ್ನಲ್ಲಿ ಕಾರು ಚಲಾಯಿಸಿ ಪೊಲೀಸರೊಂದಿಗೆ ಕಿರಿಕ್ ಮಾಡಿಕೊಂಡ ನಟಿ..