Sunday, September 8, 2024

Latest Posts

ಸಿಎಂ ಕುರ್ಚಿಗಾಗಿ ಡಿಕೆಶಿ ಸಾಕಷ್ಟು ಇನ್ವೆಷ್ಟ್ ಮಾಡಿದ್ರು, ಆದ್ರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆದರು; ಮಹೇಶ್ ಟೆಂಗಿನಕಾಯಿ..!

- Advertisement -

ಹುಬ್ಬಳ್ಳಿ: ಇನ್ನು ಕಾಂಗ್ರೆಸ್ ಮನೆಯೊಂದು ನಾಲ್ಕು ಬಾಗಿಲು ಆಗಿದೆ, ಜನವರಿ ಫೆಬ್ರವರಿ ವೇಳೆಗೆ ಸರ್ಕಾರ ಪತನವಾದರೂ ಅಚ್ಚರಿ ಇಲ್ಲ ಅಂತ ಶಾಸಕ ಮಹೇಶ್ ಟೆಂಗಿನಕಾಯಿ ಹೊಸ ಬಾಂಬ್ ಸಿಡಿಸಿದ್ರು. ಕಾಂಗ್ರೆಸ್‌ನಲ್ಲಿ ದೊಡ್ಡ ಪ್ರಮಾಣದ ಅಲ್ಲೋಲ‌‌ ಕಲ್ಲೋಲ ಆಗ್ತಿದೆ, ಇದನ್ನು ಸ್ವತಃ ಕಾಂಗ್ರೆಸ್ ಶಾಸಕರು ನೀರಿಕ್ಷೆ ಮಾಡಿರಲಿಲ್ಲ. 135 ಜನ ಇದ್ರೂ ನಿಮ್ಮ ತಳ ಅಲುಗಾಡ್ತಿದೆ, ಇದಕ್ಕೆ ಕಾಂಗ್ರೆಸ್ ವಕ್ತಾರರು ಮಾತಾಡಬೇಕು ಅಂತ ಹೇಳಿದ್ರು.

ಸಿದ್ದು ಇಳಿಸಿ, ಡಿಕೆಶಿ ಕುರ್ಚಿ ಮೇಲೆ ಕೂರಬೇಕು ಅಂತಿದ್ದಾರೆ

ಡಿಕೆ ಶಿವಕುಮಾರ್ ಸಿಎಂ ಆಗಬೇಕು‌ ಅನ್ನೋ ಕಲ್ಪನೆಯಲ್ಲಿ ಸಾಕಷ್ಟು ಇನ್ವೆಸ್ಟ್ ಮಾಡಿದ್ರು, ಡಿಕೆ ಶಿವಕುಮಾರ್ ಬಹಳ ದೊಡ್ಡ ಕನಸು ಕಂಡಿದ್ರು. ಆದ್ರೆ ಸಿದ್ದರಾಮಯ್ಯ ಬಂದು ಮುಖ್ಯಮಂತ್ರಿ ಆದ್ರು, ಡಿಕೆ ಶಿವಕುಮಾರ್ ಸಿದ್ದರಾಮಯ್ಯರನ್ನ‌‌ ಇಳಿಸಿ‌ ಕುರ್ಚಿಯಲ್ಲಿ ಕೂರಬೇಕು ಅಂತಿದಾರೆ ಅಂತ ಶಾಸಕರು ಆರೋಪಿಸಿದ್ರು.

ಡಿಕೆಶಿ ಸ್ವಾಗತಕ್ಕೆ ಶಾಸಕರೇ ಇರಲಿಲ್ಲ!

ಜಾರಕಿಹೊಳಿ‌ ಯಾಕೆ ವಿದೇಶ ಪ್ರವಾಸಕ್ಕೆ ಹೋಗ್ತಿದಾರೆ, ಬೆಳಗಾವಿಯಲ್ಲಿ ಡಿಕೆ ಶಿವಕುಮಾರ್ ಸ್ವಾಗತಕ್ಕೆ ಶಾಸಕರೇ ಇರಲಿಲ್ಲ. ಇದು ಕಾಂಗ್ರೆಸ್ ಪಕ್ಷದ ಸ್ಥಿತಿ. ಇದನ್ನು ಮರೆಮಾಚಲು ಹೊಸ ಕಲ್ಪನೆಯನ್ನು ಜನರ ಮದ್ಯೆ ತೂರಿ ಬಿಡ್ತಿದೆ ಅಂತ ವ್ಯಂಗ್ಯವಾಡಿದ್ರು.

ಜಗದೀಶ್ ಶೆಟ್ಟರ್ ಗೆ ಸನ್ಮಾನ ಮಾಡ್ತಾರಂತೆ ಮಹೇಶ್ ಟೆಂಗಿನಕಾಯಿ; ಯಾಕೆ ?

ಕನ್ನಡ ಅಧ್ಯಯನದಲ್ಲಿ 9 ಚಿನ್ನದ ಪದಕ: ಚಿನ್ನದ ನಗೆ ಬೀರಿದ ವಿದ್ಯಾರ್ಥಿಗಳು.!

ಸಿಡಿ ಮಾಸ್ಟರ್ ಡಿಕೆಶಿ ಪುಕ್ಕಲ, ಮೋಸಗಾರ; ಈ ಕಾರಣಕ್ಕೆ ಸರ್ಕಾರ ಪತನ ಆಗುತ್ತೆ ಎಂದ ಸಾಹುಕಾರ್

- Advertisement -

Latest Posts

Don't Miss