Saturday, July 27, 2024

Latest Posts

ಸಿದ್ದರಾಮಯ್ಯ ಇನ್ನೂ ವಿಧಾನಸಭಾ ಚುನಾವಣೆ ಮೂಡ್‌ನಿಂದ ಹೊರಬಂದಿಲ್ಲ: ಪ್ರಹ್ಲಾದ್ ಜೋಶಿ

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿದ್ದು, ಸಿದ್ಧರಾಮಯ್ಯ ಅವರು ವಿಧಾನಸಭೆಯ ಮೂಡ್ ನಿಂದ ಇನ್ನೂ ಹೊರ ಬಂದಿಲ್ಲ. ಇನ್ನೂ‌ ಅವರು ವಿಧಾನಸಭೆ ಚುನಾವಣೆ ಅಂತಾ ತಿಳಿದುಕೊಂಡಿದ್ದಾರೆ. ರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ಸಿದ್ದರಾಮಯ್ಯ ಮಾತನಾಡುತ್ತಿಲ್ಲ. ಪ್ರಧಾನಿಗಳು ವಿಕಸಿತ ಭಾರತದ ಬಗ್ಗೆ ಮಾತನಾಡುತ್ತಾರೆ. ಆದ್ರೆಕೇವಲ ಯಾವುದೋ ಒಂದು ರಾಜಕಾರಣದ ವಿಷಯದ ಬಗ್ಗೆ ಸಿದ್ಧರಾಮಯ್ಯ ಮಾತನಾಡುತ್ತಾರೆ. ಯಾವುದೇ ಚರ್ಚೆಗಳನ್ನ‌ ಅವರು ಮಾಡಲ್ಲ ಎಂದಿದ್ದಾರೆ.

ಅಲ್ಲದೇ, 75 ವರ್ಷದ ಇತಿಹಾಸದಲ್ಲಿ 50 ಬಹುಮತ‌ದೊಂದಿಗೆ 8 ವರ್ಷ ಬಹುಮತ ಇಲ್ಲದ‌ ಸರ್ಕಾರ ನಡೆಸಿದ್ದಾರೆ. ಆದ್ರೆ ಸಧ್ಯದ ಸ್ಥಿತಿಯಲ್ಲಿ‌ಅರ್ಧಕ್ಕಿಂತ ಕಡಿಮೆ ಸ್ಪರ್ಧೆ ಮಾಡುತ್ತಿದ್ದಾರೆ. ಯಾಕೆ ಈ ಸ್ಥಿತಿ ಬಂದಿದೆ ಅನ್ನೋದನ್ನ ಕಾಂಗ್ರೆಸ್ಸಿಗರು‌ ಮನವರಿಕೆ ಮಾಡಿಕೊಳ್ಳಬೇಕು. ಕೇವಲ‌ ಸನಾತನ ಧರ್ಮದ ವಿರುದ್ಧ ಹಿಂದುತ್ವದ ವಿರುದ್ಧ ಮಾತನಾಡುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಮೋದಿಯವರಿಗೆ ಎರಡು ನಾಲಿಗೆ ಇದೆ ಎಂಬ ಪ್ರಕಾಶ ರಾಜ್ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಜೋಶಿ,  ಪ್ರಕಾಶ ರಾಜ್ ಅವರಂತವರಿಗೆ ಉತ್ತರ ಕೊಡುವ ಅಗತ್ಯ‌ಇಲ್ಲ. ಅವರೊಬ್ಬ ಅಸಂತುಷ್ಟ ಜೀವಿ ಅವರ‌ ಹೇಳಿಕೆಗೆ ಉತ್ತರ ನೀಡುವ ಅಗತ್ಯವಿಲ್ಲ ಎಂದಿದ್ದಾರೆ.

ಬರ ಹಾಗೂ ಅನುದಾನ ವಿಚಾರವಾಗಿ ರಾಜ್ಯ ಸರ್ಕಾರ ಕೋರ್ಟ್ ಮೊರೆ ವಿಚಾರದ ಬಗ್ಗೆ ಮಾತನಾಡಿದ ಜೋಶಿ,  ಈ ಬಗ್ಗೆ ಕೇಂದ್ರ ಸರ್ಕಾರದ ಬಗ್ಗೆ ಯಾವುದೇ ಟೀಕೆ ಟಿಪ್ಪಣಿ ಮಾಡಿಲ್ಲ. ಸೌಹಾರ್ಧಯುವಾಗಿ ಕೆಲಸ ಮಾಡುವಂತೆ ಕೋರ್ಟ್ ಹೇಳಿದೆ. ನಾವು ಯಾವಾಗಲೂ ಸೌಹಾರ್ದಯುತವಾಗಿ ವರ್ತನೆ ಮಾಡಿದ್ದೇವೆ. ಆದ್ರೆ ರಾಜ್ಯ ಸರ್ಕಾರ ವಿಷಯಾಂತರ ಮಾಡಲು ಈ‌‌ ರೀತಿ‌‌ ನ್ಯಾಯಾಲಯ ಮೊರೆ ಹೋಗಿದೆ ಎಂದಿದ್ದಾರೆ.

ದಿಂಗಾಲೇಶ್ವರ ಶ್ರೀಗಳ ವಿರುದ್ಧ ಪ್ರಹ್ಲಾದ್ ಜೋಶಿ‌ ಅಭಿಮಾನಿಗಳ ಅಸಮಾಧಾನ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಜೋಶಿ, ನಾನು‌ ಅವರ ಬಗ್ಗೆ ಯಾವುದೇ ಪ್ರತಿಕ್ರಿಯೆ ಮಾಡಿಲ್ಲ. ಸಾಮಾಜಿಕ ಜಾಲತಾಣ ಎಂಬುದು ತೆರೆದ ಸಂವಹನ. ಅಲ್ಲಿ‌ ಯಾರು ಅವರ ಬಗ್ಗೆ ಅಸಮಾಧಾನ‌ ವ್ಯಕ್ತಪಡಿಸಿದ್ದಾರೋ ನನಗೆ ಗೊತ್ತಿಲ್ಲ. ನಾನು ಯಾವ ಜಾಲತಾಣದಲ್ಲೂ‌ ಈ‌ ಬಗ್ಗೆ ಚರ್ಚೆ ಮಾಡಲು ಬಯಸುವುದಿಲ್ಲ ಎಂದು ಜೋಶಿ ಹೇಳಿದ್ದಾರೆ.

ಎಲ್ಲ ಸಂಸದರು ಪುಕ್ಕಲರು ಎಂಬ ಸಿದ್ಧರಾಮಯ್ಯ ಹೇಳಿಕೆ‌ ವಿಚಾರದ ಬಗ್ಗೆ ಮಾತನಾಡಿದ ಪ್ರಹ್ಲಾದ್ ಜೋಶಿ,  ರಾಹುಲ‌್ ಗಾಂಧಿಯವರ‌ ಬಳಿಯೇ ಕಾಂಗ್ರೆಸ್ ನವರು ಮಾತನಾಡಲ್ಲ. ಮುಖ್ಯಮಂತ್ರಿ‌ ಪದವಿ ಹೋಗುತ್ತೆ‌ ಎಂಬ‌ ಭಯದಿಂದ‌ ಸಿದ್ಧರಾಮಯ್ಯ ರಾಹುಲ್‌ಗಾಂಧಿ‌ ಮುಂದೆ‌ ಮಾತನಾಡಲ್ಲ. ಖರ್ಗೆ‌ ಪ್ರಧಾನಿ ಅಭ್ಯರ್ಥಿ ಅಂತಾ ಹೇಳೋಕೇ‌ ಸಿದ್ಧರಾಮಯ್ಯ ಹೆದರುತ್ತಾರೆ. ಅಭಿವೃದ್ದಿ ಹಾಗೂ ಬರ ಪರಿಹಾರದ ವಿಚಾರವಾಗಿ ಈವರೆಗೂ ಯಾವುದೇ ವರದಿ ನೀಡಲು ಸರ್ಕಾರಕ್ಕೆ‌ ಸಾಧ್ಯವಾಗಿಲ್ಲ. ಬಹಿರಂಗ ಚರ್ಚೆಯ‌ ಮೂಲಕ‌ ಈಗಾಗಲೇ ಕಾಂಗ್ರೆಸ್ ನವರಿಗೆ ಉತ್ತರ ನೀಡಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ನಮ್ಮ ಸರ್ಕಾರ ಸುಭದ್ರವಾಗಿದೆ, ದಿವಾಳಿಯಾಗಿರುವುದು ನಿಮ್ಮ ಬುದ್ದಿಯೇ ಹೊರತು ನಮ್ಮ ರಾಜ್ಯ ಅಲ್ಲ: ಸಿಎಂ

ಈ ಬಾರಿ ಕಾಂಗ್ರೆಸ್ ಪಕ್ಷದ ಬಾವುಟ ಹಾರಿಸಲಿದ್ದೇವೆ: ವಿನೋದ್ ಅಸೂಟಿ

ನಾನು ಮಾಂಸಾಹಾರವನ್ನೇ ಸೇವಿಸುವುದಿಲ್ಲ: ಗೋಮಾಂಸ ಇಷ್ಟವೆಂಬ ಆರೋಪಕ್ಕೆ ಕಂಗನಾ ತಿರುಗೇಟು..

- Advertisement -

Latest Posts

Don't Miss