Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ, ಸಂಸದ ಜಗದೀಶ್ ಶೆಟ್ಟರ್ ಮಾತನಾಡಿದ್ದು, ಡಿ.ಕೆ.ಶಿವಕುಮಾರ್ ಅಮಿತ್ ಶಾ ಭಾಗಿ, ಬಿಜೆಪಿ ಸೇರ್ಪಡೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಒಳ ಜಗಳ ನಡಿತಾ ಇದೆ. ಮುಖ್ಯಮಂತ್ರಿ ಆಯ್ಕೆ ಸಮಯದಲ್ಲಿ ಪವರ್ ಶೇರಿಂಗ್ ಮಾತುಕತೆ ಆಗಿತ್ತು. ಹೀಗಾಗಿ ಸಿಎಂ ಸ್ಥಾನ ಹಂಚಿಕೆ ತಡ ಆಯ್ತು. ಹೈಕಮಾಂಡ್ ನೇತೃತ್ವದಲ್ಲಿ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಒಪ್ಪಂದ ಆಗಿದೆ. ಅದರ ಬಗ್ಗೆ ಬಹಿರಂಗವಾಗಿ ಹೇಳಲು ಯಾರಿಗೂ ಧೈರ್ಯ ಇಲ್ಲಾ. ಅದರಿಂದ ಏನಾದರೂ ಹೆಚ್ಚು ಕಡಿಮೆ ಆಗುತ್ತೆ ಅಂತ. ಸಿದ್ದರಾಮಯ್ಯ ಅಧಿಕಾರ ಬಿಟ್ಟು ಇಳಿಯಲು ತಯಾರಿಲ್ಲ. ಆದರೆ ಡಿಕೆ ಶಿವಕುಮಾರ್ ಒಪ್ಪಂದದಂತೆ ಅಧಿಕಾರ ಕೊಡಿ ಅಂತ ಕೇಳ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರಿದ್ದಾಗ ಅವರಿಬ್ಬರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಿದ್ದೆ. ಸಿದ್ದರಾಮಯ್ಯ, ಡಿಕೆಶಿ ಇಬ್ಬರು ನೇರವಾಗಿ ಮಾತನಾಡಲು ತಯಾರಿಲ್ಲ. ಹೈಕಮಾಂಡ್ ಗೆ ಬಿಟ್ಟ ವಿಚಾರ ಅಂತ ಸಿದ್ದರಾಮಯ್ಯ ಹೇಳ್ತಾರೆ. ಹಾಗಾದ್ರೆ ಇಬ್ಬರ ನಡುವೆ ಏನೋ ನಡೆದಿದೆ ಅಂದಹಾಗಾಯ್ತು ಎಂದು ಶೆಟ್ಟರ್ ಹೇಳಿದ್ದಾರೆ.
ಸಿದ್ದರಾಮಯ್ಯ ಪರವಾಗಿ ಹೆಚ್ ಸಿ ಮಹದೇವಪ್ಪ, ರಾಜಣ್ಣ, ಸತೀಶ್ ಜಾರಕಿಹೊಳಿ, ಎಂ ಬಿ ಪಾಟೀಲ್ ಮಾತನಾಡೋಕೆ ಆರಂಭಿಸಿದ್ದಾರೆ, ಡಿಕೆಶಿ ಬಾಯಿ ಬಿಡಲಿ ಅಂತ ಪ್ರಚೋದನೆ ನೀಡುವಂತ ಹೇಳಿಕೆ ನೀಡಲಾಗ್ತಿದೆ. ಅಧ್ಯಕ್ಷ ಹುದ್ದೆ ಇರುವವರ ಬಗ್ಗೆನೇ ರಾಜಣ್ಣ ಕೆಟ್ಟದಾಗಿ ಮಾತಾಡ್ತಾರೆ ಇದ್ದಾರೆ. ರಾಜಣ್ಣ ಹೇಳಿಕೆಗೆ ಡಿಕೆಶಿ ಮಾತನಾಡ್ತಿಲ್ಲ. ಸಿದ್ದರಾಮಯ್ಯ ಅವರು ರಾಜಣ್ಣರನ್ನ ಕರೆದು ಹೇಳಬಹುದಿತ್ತಲ್ಲ. ಇವರನ್ನೆಲ್ಲ ಮಾತನಾಡೋಕೆ ಸಿದ್ದರಾಮಯ್ಯ ಅವರೇ ಬಿಟ್ಟಿದ್ದಾರೆ. ಇದು ಯಾವುದೇ ಸಂದರ್ಭದಲ್ಲಿ ಸ್ಫೋಟ ಆಗುತ್ತೆ.
ಕರ್ನಾಟಕದ ಕಾಂಗ್ರೆಸ್ ನಲ್ಲಿ ಯಾರು ಏಕನಾಥ ಶಿಂದೆ, ಅಜಿತ್ ಪವಾರ ಆಗ್ತಾರೆ ಡಿಕೆ ಶಿವಕುಮಾರ್ ಹೇಳಬೇಕು. ನನ್ನ ರಾಜಕೀಯ ಅನುಭವ ಪ್ರಕಾರ ಸ್ವಾಭಿಮಾನಕ್ಕೆ ಧಕ್ಕೆ ಆದಾಗ ನಿರ್ಧಾರ. ಕೈಗೊಳ್ಳೋದು ಬಿಡೋದು ಡಿಕೆ ಶಿವಕುಮಾರ್ ಗೆ ಬಿಟ್ಟ ವಿಚಾರ. ಡಿಕೆಶಿ ಬಿಜೆಪಿಗೆ ಬರ್ತಾರೋ ಇಲ್ವೋ ಗೊತ್ತಿಲ್ಲ. ರಾಜಣ್ಣ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಡೋದಾದ್ರೆ ರಾಜೀನಾಮೆ ಕೊಡೋದಾಗಿ ಹೇಳಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡೊರು ಯಾರು? ಪರಮೇಶ್ವರ್ ರಾಜೀನಾಮೆ ಗಂಭೀರವಾಗಿ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲಾ ಎಂದು ಶೆಟ್ಟರ್ ಹೇಳಿದ್ದಾರೆ.
ಬೆಳಗಾವಿ ನಮ್ಮದು ಇದರಲ್ಲಿ ಬೇರೆ ಪ್ರಶ್ನೆಯೇ ಇಲ್ಲ. ಮಹಾಜನ್ ಆಯೋಗದ ವರದಿ ಕ್ಲಿಯರ್ ಆಗಿ ಹೇಳಿದೆ. ಮಹಾಜನ್ ವರದಿ ಅನುಷ್ಠಾನ ಆಗಲೇ ಬೇಕು. ರಾಜಕೀಯ ಮುಖಂಡರು ಇದಕ್ಕೆ ಫೈಟ್ ಮಾಡುತ್ತಿದ್ದಾರೆ.. ಬೆಳಗಾವಿಯಲ್ಲಿ ಕನ್ನಡಿಗರು ಮತ್ತು ಮರಾಠ ಎನ್ನುವ ಭೇದ ಭಾವ ಇಲ್ಲ. ಎಲ್ಲರೂ ಒಗ್ಗಟ್ಟಾಗಿದ್ದಾರೆ ಎಲ್ಲರೂ ಸಂತೋಷದಿಂದ ವಾಸವಿದ್ದಾರೆ. ಆದರೆ ಕೆಲವು ವಯಕ್ತಿಕ ಘಟನೆಗಳನ್ನು ಭಾಷಾ ವಿವಾದಕ್ಕೆ ಎಳೆದು ತರಬಾರದು. ಬೆಳಗಾವಿಯಲ್ಲಿ ಮರಾಠಿ ಕನ್ನಡ ಎನ್ನುವ ಭೇದ ಭಾವ ಜನಸಾಮಾನ್ಯರಲ್ಲಿ ಇಲ್ಲ. ಕೆಲವು ವ್ಯಕ್ತಿಗಳಲ್ಲಿರುವುದನ್ನು ವೈಭವಿಕರಣ ಮಾಡುವ ಅವಶ್ಯಕತೆ ಇಲ್ಲ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ರಾಜ್ಯದ ಬಜೆಟ್ ಬಗ್ಗೆ ಏನು ನಿರೀಕ್ಷೆ ಇಲ್ಲ. ಎಸ್ ಎಸಿ ಎಸ್ ಎಸ್ಟಿ ಅಭಿವೃದ್ಧಿ ಇರುವ ಹಣವನ್ನು ಗ್ಯಾರಂಟಿಗೆ ವರ್ಗಾವಣೆ ಮಾಡಿದ್ದಾರೆ. ಇದೇನು ದಲಿತಪರ ಇರುವ ಕಾಳಜಿನಾ?. ಸಂಬಂಧಿಸಿದ ಸಚಿವರು ಇದನ್ನು ಸಮರ್ಥನೆ ಮಾಡಿಕೊಳ್ಳತ್ತಾರೆ. ಇದ್ಯಾವ ನೀತಿ, ಇದೇನಾ ದಲಿತ ಬಗೆಗಿನ ಕಳಕಳಿ?. ಹೀಗಾಗಿ ಸಿದ್ದರಾಮಯ್ಯ ಬಜೆಟ್ ಮೇಲೆ ಯಾವ ನಿರೀಕ್ಷೆ ಇಲ್ಲ. ಯಡಿಯೂರಪ್ಪ ಸಿಎಂ ಇದ್ದಾಗ ಬೆಂಗಳೂರು ಅಭಿವೃದ್ಧಿ ಏನು ಹಣ ನೀಡಿದ್ದಾರೆ ಅದೇ ಫೈನಲ್. ಯಡಿಯೂರಪ್ಪ ಕಾಲದಲ್ಲಿ ಬೆಂಗಳೂರು ಅಭಿವೃದ್ಧಿ ಆದಷ್ಟು ಬೇರೆ ಯಾವ ಸರ್ಕಾರದಲ್ಲಿ ಆಗಿಲ್ಲ. ಗ್ಯಾರಂಟಿಗ ಹಣ ಹೊಂದಿಸಲು ಆಗುತ್ತಿಲ್ಲ. ಇನ್ನೂ ಉತ್ತರ ಕರ್ನಾಟಕದ ಅಭಿವೃದ್ಧಿಗೆ, ಕೃಷ್ಣ ಮೇಲ್ದಂಡೆ ಯೋಜನೆಗೆ ಏನು ಹಣ ಕೊಡತ್ತಿರಾ?. ಇಂದು ದಾಖಲೆಗಾಗಿ ಬಜೆಟ್ ಮಂಡನೆ ಮಾಡುತ್ತಿದ್ದಾರೆ ಅಷ್ಟೇ. ಸಿದ್ಧಾರಾಮಯ್ಯ ಬಜೆಟ್ ಮೇಲೆ ಉತ್ತರ ಕರ್ನಾಟಕದ ಜನ ನಿರೀಕ್ಷೆ ಇಟ್ಟುಕೊಳ್ಳುವುದು ತಪ್ಪು. ಇದು ಗ್ರಹಚಾರ ಎಂದು ರಾಜ್ಯ ಸರ್ಕಾರದ ವಿರುದ್ಧ ಶೆಟ್ಟರ್ ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಹೊರಹಾಕಿರುವ ಶೆಟ್ಟರ್, ಕೇಂದ್ರ ಸರ್ಕಾರದ ಬಗ್ಗೆ ಮತ್ತು ಮೋದಿ ಬಗ್ಗೆ ಟೀಕೆ ಮಾಡದಿದ್ದ್ರೆ ಸಿದ್ದರಾಮರಿಗೆ ಊಟ ಹೋಗಲ್ಲ. ಬೆಳಗ್ಗೆಯಿಂದ ಸಾಯಂಕಾಲ ಬರೀ ಟೀಕೆ ಮಾಡುತ್ತಾರೆ. ಅನುದಾನ ಹಂಚಿಕೆಯಲ್ಲಿ ದಕ್ಷಿಣ ಭಾರತಕ್ಕೆ ಅನ್ಯಾಯ ಆಗುತ್ತಿದ್ದ್ರೆ. ಇದನ್ನು ಸಂಸತ್ತಿನಲ್ಲಿ ಯಾಕೆ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಮಾತನಾಡುತ್ತಿಲ್ಲ. ನೀತಿ ಆಯೋಗದ ಸಭೆಯಲ್ಲಿ ಸಿಎಂ ಏನೋ ಮಾತನಾಡೋದಿಲ್ಲಾ. ಜನ ಸಂಖ್ಯೆ ಆಧಾರದ ಮೇಲೆ ಅನುದಾನ ಹಂಚಿಕೆ ಆಗುತ್ತದೆ. ತ್ರೀ ಭಾಷಾ ಸೂತ್ರ, ನೂತನ ಶಿಕ್ಷಣ ನೀತಿ ಬಗ್ಗೆ ಟೀಕೆ. ಹೀಗೆ ಬರೀ ಕೇಂದ್ರ ಸರ್ಕಾರದ ಬಗ್ಗೆ ಅಪ್ರಚಾರ ಮಾಡಲು ಈ ರೀತಿಯಲ್ಲಿ ಮಾತನಾಡುತ್ತಾರೆ. ಕ್ಷೇತ್ರದ ಪುನರ್ ವಿಂಗಡನೆ ಬಗ್ಗೆ ಅಮಿತ್ ಶಾ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಹೀಗಿದ್ದರೂ ಸ್ಟಾಲಿನ್ ವಿರೋಧ ಮಾಡಿದರು ಅಂತ. ಸಿದ್ಧರಾಮಯ್ಯ ನಾನೇನು ಕಮ್ಮಿ ಅಂತ ಕೇಂದ್ರ ಬಗ್ಗೆ ಟೀಕೆ ಮಾಡುತ್ತಿದ್ದಾರೆ.
ಇನ್ನು ಯಡಿಯೂರಪ್ಪ ಪೋಕ್ಸೋ ಪ್ರಕರಣದ ಬಗ್ಗೆ ಮಾತನಾಡಿದ ಶೆಟ್ಟರ್, ಯಡಿಯೂರಪ್ಪ ಪೋಕ್ಸೋ ಪ್ರಕರಣದಲ್ಲಿ ಕಾನೂನು ಹೋರಾಟ ಮಾಡುತ್ತಾರೆ. ಈಗಾಗಲೇ ಅವರ ಮೇಲಿನ ಆರೋಪ ಸುಳ್ಳು ಅಂತ ಯಡಿಯೂರಪ್ಪ ಹೇಳಿದ್ದಾರೆ. ಹೀಗಾಗಿ ನ್ಯಾಯಾಲಯ ಮೇಲೆ ಭರವಸೆಯಿದೆ. ಮಹಾದಾಯಿ ಅನುಷ್ಠಾನದ ಬಗ್ಗೆ ಬಿಜೆಪಿ ಸಹ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಆದಷ್ಟು ಬೇಗ ಮಹದದಾಯಿ ವಿವಾದ ಇತ್ಯರ್ಥ ಆಗುವ ಭರವಸೆಯಿದೆ.
ನಟ್ಟು ಬೋಲ್ಟ್ ಸರಿ ಮಾಡ್ತೇನೆ ಅಂತ ಧಮ್ ಕೊಡೋದು ಸರಿಯಲ್ಲ ಎಂದು ಡಿಕೆಶಿ ಹೇಳಿಕೆ ಬಗ್ಗೆ ಶೆಟ್ಟರ್ ಪ್ರತಿಕ್ರಿಯಿಸಿದ್ದಾರೆ. ಪಾದಯಾತ್ರೆ ವೇಳೆ ಕಲಾವಿದರು ಬೆಂಬಲಿಸಿಲ್ಲ ಅನ್ನೋದನ್ನ ಒಪ್ಪೋಣ. ಹೋರಾಟಕ್ಕೆ ಬರಬೇಕೋ ಬೇಡವೋ ಅನ್ನೋದು ಅವರಿಗೆ ಬಿಟ್ಟ ವಿಚಾರ. ನಾವು ಅದನ್ನು ಹೇಳೋ ಅವಶ್ಯಕತೆ ಇಲ್ಲ. ಗೋಕಾಕ್ ವರದಿ ಜಾರಿ ಹೋರಾಟದ ಸಂದರ್ಭದಲ್ಲಿ ರಾಜಕುಮಾರ್ ಸ್ವಯಂಪ್ರೇರಿತರಾಗಿ ಧುಮುಕಿದ್ದರು. ಅವರೇ ಹೋರಾಟದ ನೇತೃತ್ವ ತೆಗೆದುಕೊಂಡಿದ್ದರು. ಕನ್ನಡ ಚಲನಚಿತ್ರ ರಂಗದ ಕಲಾವಿದರು ಇದರ ಬಗ್ಗೆ ವಿಚಾರ ಮಾಡಬೇಕು. ಅವರು ಹೊರಟಕ್ಕೆ ಬರದೇ ಇದ್ದಲ್ಲಿ ಜನರೇ ತೀರ್ಮಾನಿಸ್ತಾರೆ. ಕನ್ನಡ ಚಲನಚಿತ್ರ ಕಲಾವಿದರ ಬಗ್ಗೆ ಕನ್ನಡಿಗರೇ ತೀರ್ಮಾನ ಕೈಗೊಳ್ತಾರೆ. ಹೊರಾಟಕ್ಕೆ ಬನ್ನಿ ಅಂತ ಬೆದರಿಕೆ ಹಾಕೋದು ಸರಿಯಲ್ಲ. ಈ ರೀತಿ ಹೇಳಿವುದರಲ್ಲಿ ಅರ್ಥವಿಲ್ಲ ಎಂದು ಡಿಕೆಶಿ ಹೇಳಿಕೆಗೆ ಶೆಟ್ಟರ್ ಟಾಂಗ್ ನೀಡಿದ್ದಾರೆ.