Monday, August 3, 2026

bengaluru news

ರಾಜ್ಯದಲ್ಲೂ ಜೋರಾದ ನೀಟ್ ಜಟಾಪಟಿ – ಶಾಸಕ ಬಿಪಿ ಹರೀಶ್ ಮೇಲೆ ಮೊಟ್ಟೆ ಎಸೆತ!

ನೀಟ್ ಪರೀಕ್ಷಾ ಅಕ್ರಮದ ಕಿಡಿ ಈಗ ಕೇವಲ ದೆಹಲಿಗೆ ಮಾತ್ರ ಸೀಮಿತವಾಗಿಲ್ಲದೆ ಕರ್ನಾಟಕಕ್ಕೂ ತಲುಪಿ ಭಾರಿ ದಂಗಲ್ ಎಬ್ಬಿಸಿದೆ. ದೆಹಲಿಯಲ್ಲಿ ರಾಹುಲ್ ಗಾಂಧಿ ಅವರ ಬಂಧನ ಖಂಡಿಸಿ ಶುರುವಾದ ಪ್ರತಿಭಟನೆ, ಬೆಂಗಳೂರಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮುಖಾಮುಖಿ ಕಾಳಗಕ್ಕೆ ಕಾರಣವಾಗಿದೆ. ಬಿಜೆಪಿ ಕಚೇರಿಗೆ ಮುತ್ತಿಗೆ ಯತ್ನ, ಅದಕ್ಕೆ ಪ್ರತ್ಯುತ್ತರವಾಗಿ ಕೆಪಿಸಿಸಿ ಕಚೇರಿಗೆ...

IIT-IIM ಪದವೀಧರರ ಸಾಹಸ! ಅಮೆರಿಕದ ಉದ್ಯೋಗ ತೊರೆದು ಬೆಂಗಳೂರಿನಲ್ಲಿ ಸ್ವಂತ ಕೆಫೆ

ದೇಶದ ಪ್ರತಿಷ್ಠಿತ ಐಐಟಿ ಮತ್ತು ಐಐಎಂ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡಿ, ಅಮೆರಿಕದಲ್ಲಿ ಹೆಚ್ಚಿನ ಸಂಬಳದ ಉದ್ಯೋಗದಲ್ಲಿದ್ದ ಇಬ್ಬರು ಸ್ನೇಹಿತರು ಇದೀಗ ತಮ್ಮ ಕನಸಿನ ಉದ್ಯಮಕ್ಕಾಗಿ ಎಲ್ಲವನ್ನೂ ತೊರೆದು ಬೆಂಗಳೂರಿನಲ್ಲಿ ಸ್ವಂತ ಕೆಫೆ ಆರಂಭಿಸಿದ್ದಾರೆ. ಇವರ ಈ ಸಾಹಸಮಯ ನಿರ್ಧಾರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ಸುದ್ದಿಯಲ್ಲಿದೆ. ಐಐಟಿ ಖರಗ್‌ಪುರ ಮತ್ತು ಐಐಎಂ ಬೆಂಗಳೂರು ಪದವೀಧರರಾಗಿರುವ ಇಬ್ಬರು...

“ಸ್ವಲ್ಪ ಮಳೆ ಬಂದರೂ ಮುಳುಗುವ ಅಭಿವೃದ್ಧಿ” ಕಾಂಗ್ರೆಸ್ ಆಡಳಿತದ ಅವ್ಯವಸ್ಥೆಯ ಸ್ಪಷ್ಟ ಸಾಕ್ಷಿ: ಆರ್.ಅಶೋಕ್

Political News: ಉತ್ತರಹಳ್ಳಿ ನ್ಯಾಯಾಂಗ ಬಡಾವಣೆಯಲ್ಲಿ ನಿರ್ಮಾಣವಾಗಿರುವ ಅಂಡರ್‌ಪಾಸ್‌ನಲ್ಲಿ ಸ್ವಲ್ಪ ಮಳೆ ಬಂದರೂ, ಅದು ನೀರಿನಿಂದ ತುಂಬಿ ವಾಹನ ಸಂಂಚಾರಕ್ಕೆ ಯೋಗ್ಯವಲ್ಲದ ಸ್ಥಳವಾಗುತ್ತದೆ. ಹಾಗಾಗಿ ಪೋಲೀಸರೇ ಅಲ್ಲಿ ಸಂಚಾರವನ್ನು ನಿರ್ಬಂಧಿಸುತ್ತಾರೆ. ಈ ಬಗ್ಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತಮ್ಮ ಎಕ್ಸ್ ಖಾತೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಳೆ ಬಂದರೆ ಅಂಡರ್‌ಪಾಸ್ ಬಂದ್… ಇದೇನಾ “ಬ್ರಾಂಡ್ ಬೆಂಗಳೂರು” ಅಭಿವೃದ್ಧಿ?...

JDS ನಲ್ಲಿ ಭಾರಿ ಟ್ವಿಸ್ಟ್? JTD ‘ಹೊಸ’ ತಂತ್ರ!

ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರನ್ನು ಹಿರಿಯ ಜೆಡಿಎಸ್ ನಾಯಕ ಜಿ. ಟಿ. ದೇವೇಗೌಡ ಅಚಾನಕ್ ಭೇಟಿಯಾಗಿರುವುದು ರಾಜ್ಯ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಇತ್ತೀಚಿನ ರಾಜಕೀಯ ಬೆಳವಣಿಗೆಗಳ ನಡುವೆ ನಡೆದ ಈ ಭೇಟಿ ಹಲವು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ. ಬೆಂಗಳೂರಿನಲ್ಲಿ ನಡೆದ ಈ ಭೇಟಿಯ ವೇಳೆ ಇಬ್ಬರು ನಾಯಕರು ಕೆಲಕಾಲ ರಾಜಕೀಯ ಬೆಳವಣಿಗೆಗಳು, ಪಕ್ಷದ ಒಳಾಂಗಣ...

ಕಾಂಗ್ರೆಸ್ ಸರ್ಕಾರಕ್ಕೆ ಅಗ್ನಿಪರೀಕ್ಷೆ! ಕೈ ವಿರುದ್ದ ಮುಸ್ಲಿಮರ ಬಂಡಾಯ

ಮುಸ್ಲಿಂ ಸಮುದಾಯದ ಭರವಸೆಗಳ ಅನುಷ್ಠಾನ ಹಾಗೂ ರಾಜಕೀಯ ಪ್ರಾತಿನಿಧ್ಯದ ಬಗ್ಗೆ ರಾಜ್ಯದಲ್ಲಿ ಮತ್ತೆ ಚರ್ಚೆಗಳು ಕೇಳಿಬರುತ್ತಿವೆ. ಈ ಕುರಿತು ಮೇ 16ರಂದು ಬೆಂಗಳೂರಿನಲ್ಲಿ ನಡೆಯಲಿರುವ ‘ಕರ್ನಾಟಕ ಮುಸ್ಲಿಂ ಸಮಾವೇಶ’ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ. ಈ ಸಮಾವೇಶದಲ್ಲಿ ಸರ್ಕಾರದ ನೀತಿಗಳ ಕುರಿತು ವಿಶೇಷ ವರದಿ ಬಿಡುಗಡೆ ಮಾಡಲು ಸಂಘಟನೆಗಳು ಮುಂದಾಗಿವೆ. ರಾಜ್ಯದಲ್ಲಿನ ಮುಸ್ಲಿಂ ಸಮುದಾಯಕ್ಕೆ...

IPL ಫೈನಲ್ ಮೇಲೆ ಬಿತ್ತು ‘ಉಚಿತ’ ರಾಜಕಾರಣದ ಕರಿನೆರಳು! RCB ಅಭಿಮಾನಿಗಳ ಕನಸಿಗೆ ಕನ್ನ?

ಐಪಿಎಲ್ ಫೈನಲ್ ಪಂದ್ಯ ಬೆಂಗಳೂರಿನಲ್ಲಿ ನಡೆಯದ ವಿಚಾರ ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರದಿಂದ ಕೇಳಿಬಂದ ಭಾರೀ ಪ್ರಮಾಣದ ಉಚಿತ ಟಿಕೆಟ್ ಬೇಡಿಕೆಯ ಹಿನ್ನೆಲೆಯಲ್ಲಿ ಫೈನಲ್ ಪಂದ್ಯವನ್ನು ಬೆಂಗಳೂರಿನಲ್ಲಿ ಆಯೋಜಿಸಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಮಾಹಿತಿಯ ಪ್ರಕಾರ, ಸುಮಾರು 10 ಸಾವಿರ ವಿವಿಐಪಿ ಟಿಕೆಟ್‌ಗಳನ್ನು ಸರ್ಕಾರದ ಪರವಾಗಿ ಕೇಳಲಾಗಿದೆ...

ಯುವತಿ ನಿಗೂಢ ಸಾವು: ಸ್ಟಿಕ್ಕಿ ನೋಟ್ಸ್‌ ನೀಡುತ್ತಾ ಸುಳಿವು?

ಆಡುಗೋಡಿ ಯುವತಿ ಸಾವು ಪ್ರಕರಣ: ಗೋಡೆಗಳ ಮೇಲಿನ ಚೀಟಿಗಳು, ನಿಗೂಢ ಯುವಕ. ಬೆಂಗಳೂರು ನಗರದ ಆಡುಗೋಡಿಯಲ್ಲಿ ನಡೆದ ಯುವತಿ ಸಾವಿನ ಪ್ರಕರಣವು ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ಪೂಜಾ ದತ್ತಾ ಎಂಬ ಯುವತಿಯ ಮೃತದೇಹ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪೊಲೀಸರು ಮನೆಯನ್ನು ಪರಿಶೀಲಿಸಿದಾಗ, ಮನೆಯ ಗೋಡೆಗಳ ಮೇಲೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಬರೆದ...

ಬೆಂಗಳೂರು ವಿವಿ ಜಾಗದಲ್ಲಿ ಹೆಲಿಪ್ಯಾಡ್ ನಿರ್ಮಾಣಕ್ಕೆ ಪ್ಲಾನ್!

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣ ನಗರಕ್ಕೆ ಒಂದು ರೀತಿಯ ಆಕ್ಸಿಜನ್ ಪ್ಲಾಂಟ್ ಇದ್ದಂತೆ. 1100 ಎಕರೆಗಳ ವಿಶಾಲ ವ್ಯಾಪ್ತಿಯ ಈ ಆವರಣದಲ್ಲಿ ಈಗಾಗಲೇ ಹಲವು ಸಂಸ್ಥೆಗಳಿಗೆ ಜಾಗ ಹಂಚಿಕೆ ಮಾಡಲಾಗಿದೆ. ಇದೀಗ ಇಲ್ಲಿ ರೋಗಿಗಳ ತುರ್ತು ಚಿಕಿತ್ಸೆಗೆ ನೆರವಾಗಲು ಏರ್ ಆಂಬುಲೆನ್ಸ್ ಹೆಲಿಪ್ಯಾಡ್ ನಿರ್ಮಾಣ ಮಾಡುವ ಬೇಡಿಕೆ ಕೇಳಿಬಂದಿದೆ. ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ...

ಸಿಜೆ ರಾಯ್ ಸಾವು ಹಿಂದೆ ಕೇರಳ ಚುನಾವಣೆ?

ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಹಾಗೂ ಖ್ಯಾತ ಉದ್ಯಮಿ ಸಿಜೆ ರಾಯ್ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಇದೀಗ ಹೊಸ ತಿರುವು ಕಾಣಿಸಿಕೊಂಡಿದೆ. ಐಟಿ ಅಧಿಕಾರಿಗಳ ದಾಳಿ ನಡೆಯುತ್ತಿದ್ದ ಸಂದರ್ಭದಲ್ಲೇ ಸಿಜೆ ರಾಯ್ ತಮ್ಮ ಕಚೇರಿಯಲ್ಲಿ ಲೈಸೆನ್ಸ್ ಪಿಸ್ತೂಲ್ ಬಳಸಿ ಗುಂಡು ಹಾರಿಸಿಕೊಂಡು ಜೀವ ಅಂತ್ಯಗೊಳಿಸಿಕೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಸಾವಿಗೆ ಕೇರಳ ವಿಧಾನಸಭಾ ಚುನಾವಣೆಯೊಂದಿಗೆ...

ವಿಕಾಸಸೌಧ – ವಿಧಾನಸೌಧಕ್ಕೆ ಸೋಲಾರ್ ಪವರ್

ರಾಜ್ಯದ ಪ್ರಮುಖ ಆಡಳಿತ ಕೇಂದ್ರಗಳಾದ ವಿಧಾನಸೌಧ ಹಾಗೂ ವಿಕಾಸಸೌಧಕ್ಕೆ ಸೋಲಾರ್ ಮೂಲಕ ವಿದ್ಯುತ್ ಪೂರೈಕೆ ಮಾಡುವ ಯೋಜನೆಯು ಭರದಿಂದ ಸಾಗುತ್ತಿದೆ.ಸೆಲ್ಕೋ ಸಂಸ್ಥೆಯ ಮೂಲಕ ಒಟ್ಟು 300 ಕಿಲೋವಾಟ್ ಸಾಮರ್ಥ್ಯದ ಸೋಲಾರ್ ಗ್ರಿಡ್ ಸ್ಥಾಪನೆ ಕಾರ್ಯ ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯ ಮೂಲಕ ವರ್ಷಕ್ಕೆ ಸುಮಾರು 4.50 ಲಕ್ಷ ಯುನಿಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ. ವಿಧಾನಸೌಧ ಮತ್ತು...
- Advertisement -spot_img

Latest News

Bidar News: ಗುಂಡಿಗಳ ನಗರವಾಗಿ ಬದಲಾಗಿದೆಯೇ ಬೀದರ್? ರಸ್ತೆ ಅವಸ್ಥೆಗೆ ಜನರ ಆಕ್ರೋಶ..

Bidar News: ಬೀದರ್ ನಗರದಲ್ಲಿ ರಸ್ತೆಗಳ ದುಸ್ಥಿತಿ ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮಳೆ ಬಂದರೆ ಸಾಕು ನಗರದ ಹಲವು ರಸ್ತೆಗಳು ಕೆರೆಯಂತಾಗುತ್ತಿದ್ದು, ರಸ್ತೆ ಎಲ್ಲಿದೆ,...
- Advertisement -spot_img