Tuesday, August 4, 2026

Dharwad

Hubli News: ನೈಋತ್ಯ ರೈಲ್ವೆಗೆ ಜೂನ್‌ನಲ್ಲಿ ದಾಖಲೆ ಸಾಧನೆ

Hubli News: ನೈಋತ್ಯ ರೈಲ್ವೆ 2026ರ ಜೂನ್ ತಿಂಗಳಲ್ಲಿ ಸರಕು ಸಾಗಣೆ ಹಾಗೂ ಆದಾಯ ಎರಡರಲ್ಲೂ ಗಮನಾರ್ಹ ಸಾಧನೆ ಮಾಡಿದೆ. ಸರಕು ಸಾಗಣೆ, ಪ್ರಯಾಣಿಕರ ಸಂಖ್ಯೆ ಮತ್ತು ಆದಾಯದಲ್ಲಿ ಕಳೆದ ವರ್ಷಕ್ಕಿಂತ ಉತ್ತಮ ಪ್ರಗತಿ ದಾಖಲಿಸಿರುವುದಾಗಿ ನೈಋತ್ಯ ರೈಲ್ವೆ ಪ್ರಕಟಿಸಿದೆ. ಜೂನ್ 2026ರಲ್ಲಿ ನೈಋತ್ಯ ರೈಲ್ವೆ ಒಟ್ಟು 4.18 ಮಿಲಿಯನ್ ಟನ್ ಸರಕು ಸಾಗಣೆ ಮಾಡಿದ್ದು,...

Hubli News: ಸರ್ಕಾರ 50% ರಿಯಾಯಿತಿ ನೀಡಿದರೂ.. ದಂಡ ಪಾವತಿಸಲು ಮುಂದೆ ಬರುತ್ತಿಲ್ಲ ವಾಹನ ಸವಾರರು..

Hubli News: ಮೋಟಾರು ವಾಹನ ಕಾಯ್ದೆ ಉಲ್ಲಂಘನೆ ಪ್ರಕರಣಗಳಲ್ಲಿ ದಂಡ ಪಾವತಿಸಲು ಸರ್ಕಾರ ಶೇ.50ರಷ್ಟು ರಿಯಾಯಿತಿ ನೀಡಿದ್ದರೂ, ಸಾವಿರಾರು ವಾಹನ ಮಾಲೀಕರು ಇನ್ನೂ ಈ ಅವಕಾಶವನ್ನು ಬಳಸಿಕೊಂಡಿಲ್ಲ. ಹುಬ್ಬಳ್ಳಿಯ ಎರಡು ಆರ್‌ಟಿಒ ಕಚೇರಿ ವ್ಯಾಪ್ತಿಯಲ್ಲೇ 7,403 ಪ್ರಕರಣಗಳು ಬಾಕಿ ಉಳಿದಿದ್ದು, ಸಾರಿಗೆ ಇಲಾಖೆ ಮತ್ತೆ ವಾಹನ ಸವಾರರಿಗೆ ಮನವಿ ಮಾಡಿದೆ. ಮೋಟಾರು ವಾಹನ ಕಾಯ್ದೆ ಉಲ್ಲಂಘನೆ...

Dharwad News: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ – ಬಾಲಕಿ ಗರ್ಭಿಣಿ

Dharwad News: ಧಾರವಾಡದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅಪ್ರಾಪ್ತ ಬಾಲಕನೇ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ಬೆಳಕಿಗೆ ಬಂದಿದೆ. ಘಟನೆ ಬೆಳಕಿಗೆ ಬಂದ ಬಳಿಕ ಬಾಲಕಿ ಗರ್ಭಿಣಿಯಾಗಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದ್ದು, ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 16 ವರ್ಷದ...

Dharwad: ಕಟ್ಟಡ ಇದೆ… ಸೌಲಭ್ಯ ಇಲ್ಲ… 11 ವರ್ಷಗಳಿಂದ ಜೀವದ ಭಯದಲ್ಲಿ ಶಿಕ್ಷಣ

Dharwad News: ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಜಿನ್ನೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಪರಿಸ್ಥಿತಿ ಮಾತ್ರ ಆ ಹೇಳಿಕೆಗಳಿಗೆ ವಿರುದ್ಧವಾಗಿದೆ. ಕಳೆದ 11 ವರ್ಷಗಳಿಂದ ವಿದ್ಯಾರ್ಥಿಗಳು ಶಿಥಿಲಗೊಂಡ ಹಂಚಿನ ಕಟ್ಟಡದಲ್ಲೇ ಶಿಕ್ಷಣ ಪಡೆಯುತ್ತಿದ್ದಾರೆ. ಮತ್ತೊಂದೆಡೆ ಸರ್ಕಾರಿ 6 ಎಕರೆ...

Dharwad News: ಮಳೆಯ ನಿರೀಕ್ಷೆಯಲ್ಲಿ ಕಣ್ಣು ಆಕಾಶದತ್ತ… ಮನಸ್ಸು ಮಾತ್ರ ಶ್ರೀರಾಮನತ್ತ..!

Dharwad News: ಮುಂಗಾರು ಮಳೆ ಕೈಕೊಟ್ಟು ರೈತರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಧಾರವಾಡ ಜಿಲ್ಲೆಯ ರೈತರ ತಂಡವೊಂದು ಅಪರೂಪದ ಸಂಕಲ್ಪ ಕೈಗೊಂಡಿದೆ. ಕಾರು, ಬಸ್, ರೈಲು ಅಲ್ಲ… ರೈತನ ಜೀವನಾಡಿಯಾದ ಟ್ರ್ಯಾಕ್ಟರ್‌ನಲ್ಲೇ ಬರೋಬ್ಬರಿ 1,697 ಕಿಲೋಮೀಟರ್ ದೂರದ ಅಯೋಧ್ಯೆ ಯಾತ್ರೆ ಆರಂಭಿಸಿದ್ದಾರೆ. ಉತ್ತಮ ಮಳೆಯಾಗಿ ಹೊಲಗಳು ಹಸಿರಾಗಲಿ… ಅನ್ನದಾತನ ಬದುಕು ನೆಮ್ಮದಿಯಾಗಲಿ ಎಂಬ ಆಶಯದೊಂದಿಗೆ ಹೊರಟಿರುವ...

Dharwad: ಚಲಿಸುತ್ತಿದ್ದ ಬಸ್‌ನಿಂದ ಉಗುಳಲು ಹೋಗಿ ಭೀಕರ ಅಪಘಾತ

Dharwad News: ಚಲಿಸುತ್ತಿದ್ದ ಬಸ್‌ನಿಂದ ಉಗಳಲು ಹೋಗಿದ್ದ ವ್ಯಕ್ತಿಯೊಬ್ಬರು ಭೀಕರ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದಲ್ಲಿ ನಡೆದಿದೆ. ಬಸ್‌ನ ಕೊನೆಯ ಸೀಟಿನಲ್ಲಿ ಕುಳಿತಿದ್ದ ವೇಳೆ ಹಿಂಬದಿಯಿಂದ ಬಂದ ಟಿಪ್ಪರ್ ಲಾರಿ ತಲೆಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯ ರುಂಡ ಕಟ್ ಆಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದಲ್ಲಿ ಈ...

Dharwad: ದಪ್ಪ ಇರುವ ಕಾರಣಕ್ಕೆ ಗರ್ಭಿಣಿಯಾಗುತ್ತಿಲ್ಲವೆಂದು ಪತಿಯಿಂದಲೇ ಪತ್ನಿಯ ಹ*ತ್ಯೆ..?

Dharwad News: ಹೆಂಡತಿ ದಪ್ಪ ಇದ್ದಾಳೆ, ಗರ್ಭಧರಿಸುತ್ತಿಲ್ಲ ಎಂಬ ಕಾರಣಕ್ಕೆ ಪತಿಯೇ ಕತ್ತು ಹಿಸುಕಿ ಕೊಲೆ ಮಾಡಿರುವ ಆರೋಪ ಧಾರವಾಡ ಜಿಲ್ಲೆಯಲ್ಲಿ ಕೇಳಿಬಂದಿದೆ. ನವಲಗುಂದ ತಾಲೂಕಿನ ಹಣಸಿ ಗ್ರಾಮದಲ್ಲಿ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಪ್ರಕರಣ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹಣಸಿ ಗ್ರಾಮದಲ್ಲಿ 29 ವರ್ಷದ...

Dharwad: ಬೆಳೆ ಹಾನಿ ಸಮೀಕ್ಷೆ ಮಾಡಿ ಪರಿಹಾರ ಘೋಷಿಸಿ: ಬರಕ್ಕೆ ಬೇಸತ್ತ ರೈತರಿಂದ ಆಗ್ರಹ

Dharwad: ಮುಂಗಾರು ಮಳೆಯ ನಿರೀಕ್ಷೆಯಲ್ಲಿ ಹೊಲಕ್ಕೆ ಇಳಿದಿದ್ದ ಉತ್ತರ ಕರ್ನಾಟಕದ ಅನ್ನದಾತ ಈಗ ಆಕಾಶದತ್ತ ಕಣ್ಣಿಟ್ಟಿದ್ದಾನೆ. ಉತ್ತಮ ಮಳೆಯಾಗುತ್ತದೆ ಎಂಬ ನಂಬಿಕೆಯಲ್ಲಿ ಹೆಸರು, ಶೇಂಗಾ, ಉದ್ದು, ಮೆಣಸಿನಕಾಯಿ ಹಾಗೂ ಹತ್ತಿ ಬೆಳೆಗಳ ಬಿತ್ತನೆ ಮಾಡಿದ್ದ ರೈತರಿಗೆ ಈಗ ಮಳೆ ಕೈಕೊಟ್ಟಿದೆ. ಬೆಳೆಗಳು ಕಣ್ಣೆದುರೇ ಒಣಗುತ್ತಿದ್ದು, ಸರ್ಕಾರ ತಕ್ಷಣ ಮೋಡ ಬಿತ್ತನೆ ನಡೆಸಿ ರೈತರ ನೆರವಿಗೆ...

Hubli News: ಆಮೆಯಂತೆ ನಿಧಾನಗತಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ: ಸಾರ್ವಜನಿಕರಿಂದ ಅಸಮಾಧಾನ

Hubli News: ಸಾವಿನ ಹೆದ್ದಾರಿ ಎಂದೇ ಕುಖ್ಯಾತಿ ಪಡೆದಿರುವ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯಲ್ಲಿ ಅಪಘಾತಗಳ ಸರಣಿ ಮುಂದುವರಿದಿದ್ದರೂ, ರಸ್ತೆ ಅಗಲೀಕರಣ ಕಾಮಗಾರಿ ಮಾತ್ರ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ. ನೂರಾರು ಜೀವಗಳನ್ನು ಬಲಿ ಪಡೆದಿರುವ ಈ ರಸ್ತೆಯ ಕಾಮಗಾರಿ ವಿಳಂಬ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಇದು ಕೇವಲ ಒಂದು ರಸ್ತೆ ಅಲ್ಲ… ನೂರಾರು ಕುಟುಂಬಗಳ ಕಣ್ಣೀರಿಗೆ ಕಾರಣವಾದ...

Hubli News: ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ ಪಕ್ಷೇತರರಿಗೆ ಮೇಯರ್‌ಗಿರಿ?

Hubli News: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಅಧಿಕಾರಾವಧಿ ಮುಕ್ತಾಯಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಈ ಬಾರಿ ಮೇಯರ್ ಸ್ಥಾನ ಪಕ್ಷೇತರ ಸದಸ್ಯರ ಪಾಲಾಗುವ ಸಾಧ್ಯತೆ ಹೆಚ್ಚಾಗಿದೆ. ಮೀಸಲಾತಿ ಲೆಕ್ಕಾಚಾರದಿಂದ ಬಿಜೆಪಿ ಪಕ್ಷೇತರ ಸದಸ್ಯರನ್ನೇ ಅವಲಂಬಿಸುವ ಅನಿವಾರ್ಯತೆ ಎದುರಾಗಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಅಧಿಕಾರಾವಧಿ ಇದೇ ತಿಂಗಳ 30ರಂದು...
- Advertisement -spot_img

Latest News

Bidar News: ಗುಂಡಿಗಳ ನಗರವಾಗಿ ಬದಲಾಗಿದೆಯೇ ಬೀದರ್? ರಸ್ತೆ ಅವಸ್ಥೆಗೆ ಜನರ ಆಕ್ರೋಶ..

Bidar News: ಬೀದರ್ ನಗರದಲ್ಲಿ ರಸ್ತೆಗಳ ದುಸ್ಥಿತಿ ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮಳೆ ಬಂದರೆ ಸಾಕು ನಗರದ ಹಲವು ರಸ್ತೆಗಳು ಕೆರೆಯಂತಾಗುತ್ತಿದ್ದು, ರಸ್ತೆ ಎಲ್ಲಿದೆ,...
- Advertisement -spot_img