Friday, July 31, 2026

KTV

Chanakya Neeti: ಅಗತ್ಯಕ್ಕಿಂತ ಹೆಚ್ಚು ಒಳ್ಳೆಯವರಾಗಬೇಡಿ ಅಂತಾರೆ ಚಾಣಕ್ಯರು

Chanakya Neeti: ಒಳ್ಳೆಯತನ ಅನ್ನೋದು ನಮ್ಮನ್ನು ಕಾಪಾಡುವ ಗುಣ. ಒಳ್ಳೆಯತನವಿದ್ದ ಮನುಷ್ಯನಿಗೆ ಉತ್ತಮ ಕರ್ಮಗಳೇ ಕಾಪಾಡುತ್ತದೆ. ಆದರೆ ಈ ಸಮಾಜದಲ್ಲಿ ನಾವು ಅಗತ್ಯಕ್ಕಿಂತ ಹೆಚ್ಚು ಒಳ್ಳೆಯವರಾಗಬಾರದು ಅಂತಾರೆ ಚಾಣಕ್ಯರು. ಯಾಕೆ ಅಂತಾ ತಿಳಿಯೋಣ ಬನ್ನಿ. ಚಾಣಕ್ಯರು ಹೇಳುವ ಪ್ರಕಾರ, ನಾವು ಉತ್ತಮರಾಗಿರಬೇಕು. ಸಹಾಯದ ಗುಣ, ಕಾಳಜಿ, ದಯೆಯ ಗುಣದವರಾಗಿರಬೇಕು. ಆದರೆ ಆ ಕಾಳಜಿ, ಪ್ರೀತಿ, ದಯೆ...

Sandalwood: ಡಿವೋರ್ಸ್ ವಿಷಯದ ಬಗ್ಗೆ ಮೌನ ಮುರಿದ ನಟಿ ಶುಭಪೂಂಜಾ

Sandalwood: ಮದುವೆಯಾಗಿ 4 ವರ್ಷದ ಬಳಿಕ ನಟಿ ಶುಭಪೂಂಜಾ ಡಿವೋರ್ಸ್ ಪಡೆಯಲು ಮುಂದಾಗಿದ್ದಾರೆ. ಕೆಲ ದಿನಗಳ ಹಿಂದೆ ಶುಭಪೂಂಜಾ ಕೋರ್ಟ್‌ನಲ್ಲಿ ಈ ಬಗ್ಗೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿ ಹರಿದಿತ್ತು. ಆದರೆ ಈ ಬಗ್ಗೆ ಶುಭಪೂಂಜಾ ಆಗಲಿ, ಅವರ ಪತಿ ಸುಮಂತ್ ಆಗಲಿ ಎಲ್ಲಿಯೂ ಈ ಬಗ್ಗೆ ಹೇಳಿಕೆ ನೀಡಿರಲಿಲ್ಲ. ಇದೀಗ ಶುಭಪೂಂಜಾ ತಮ್ಮ...

Dharwad News: ಧಾರವಾಡ ಜಿಲ್ಲೆಯಲ್ಲಿ ಡೆಂಗ್ಯೂ ಪತ್ತೆ: ಓರ್ವ ಯುವಕ ಆಸ್ಪತ್ರೆಗೆ ದಾಖಲು

Dharwad News: ಧಾರವಾಡ ಜಿಲ್ಲೆಯಲ್ಲಿ ಡೆಂಗ್ಯೂ ಜ್ವರದ ಪ್ರಕರಣ ಪತ್ತೆಯಾಗಿದ್ದು, 20 ವರ್ಷದ ಯುವಕನೊಬ್ಬ ಹುಬ್ಬಳ್ಳಿಯ ಕಿಮ್ಸ್‌ಆರ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಹಿಂದೆ ದೇಶಾದ್ಯಂತ ಆತಂಕ ಸೃಷ್ಟಿಸಿದ್ದ ಡೆಂಗ್ಯೂ ಇದೀಗ ಜಿಲ್ಲೆಯಲ್ಲಿ ಕಾಣಿಸಿಕೊಂಡಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಧಾರವಾಡ ಜಿಲ್ಲೆಯಲ್ಲಿ ಡೆಂಗ್ಯೂ ಜ್ವರದ ಪ್ರಕರಣ ಪತ್ತೆಯಾಗಿದ್ದು, ಸೋಂಕಿತ 20 ವರ್ಷದ ಯುವಕನಿಗೆ ಹುಬ್ಬಳ್ಳಿಯ ಕಿಮ್ಸ್‌ಆರ್‌ಐ...

Dandeli News: ನಡು ರಸ್ತೆಯಲ್ಲಿ ಕರಡಿ ಪ್ರತ್ಯಕ್ಷ: ವಾಹನ ಸವಾರರಲ್ಲಿ ಆತಂಕ

Dandeli News: ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯ ಬೊಮ್ಮನಳ್ಳಿ ಬಳಿ ರಸ್ತೆಯಲ್ಲಿ ಕರಡಿ ಪ್ರತ್ಯಕ್ಷವಾಗಿದೆ. ದಟ್ಟ ಅರಣ್ಯ ಪ್ರದೇಶದಿಂದ ಈ ಕರಡಿ ರಸ್ತೆಗೆ ಪ್ರವೇಶಿಸಿದ್ದು, ವಾಹನ ಸವಾರರು ಕೆಲ ಕಾಲ ಆತಂಕಕ್ಕೀಡಾಗಿದ್ದರು. ಭಾಗವತಿ-ಬೊಮ್ಮನಳ್ಳಿ ರಸ್ತೆಯಲ್ಲಿ ಕರಡಿ ಸಂಚರಿಸುವ ದೃಶ್ಯ ಕಂಡುಬಂದಿದ್ದು, ಈ ರಸ್ತೆಯಲ್ಲಿ ಪ್ರತಿದಿನ ಹಲವರು ಓಡಾಡುತ್ತಿರುತ್ತಾರೆ. ಆದರೆ ನಿನ್ನೆ ಈ ರಸ್ತೆಯಲ್ಲಿ ಓಡಾಡುವವರಿಗೆ ಕರಡಿ ಸಿಕ್ಕಿದ್ದು,...

Uttara Kannada: ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜೇನುಹುಳು ದಾಳಿ: 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

Mundagod News : ತಾಲೂಕಿನ ಕರಗಿನಕೊಪ್ಪದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜೇನುಹುಳುಗಳು ದಾಳಿ ನಡೆಸಿದ ಪರಿಣಾಮ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ನಡೆದಿದೆ. ಶಾಲೆಯ ವಸತಿ ನಿಲಯದ ಎರಡನೇ ಮಹಡಿಯಲ್ಲಿ ಜೇನುಹುಳುಗಳು ದೊಡ್ಡ ಪ್ರಮಾಣದಲ್ಲಿ ಗೂಡು ಕಟ್ಟಿಕೊಂಡಿದ್ದವು. ಈ ವೇಳೆ ವಿದ್ಯಾರ್ಥಿಯೊಬ್ಬರು ಗೂಡಿನ ಕಡೆಗೆ ಯಾವುದೋ ವಸ್ತುವನ್ನು ಎಸೆದ ಪರಿಣಾಮ ಜೇನುಹುಳುಗಳು ಏಕಾಏಕಿ ಕೆರಳಿ ವಿದ್ಯಾರ್ಥಿಗಳ ಮೇಲೆ ದಾಳಿ...

Hubli News: ಬಾಲ್ಯದಲ್ಲಿ ಶಾಲಾ ಶುಲ್ಕ ಕಟ್ಟಿದ ಗುರುವಿಗೆ ಕಾಣಿಕೆಯಾಗಿ ಕಾರು ಗಿಫ್ಟ್ ನೀಡಿದ ಶಿಷ್ಯ

Hubli News: ಬಾಲ್ಯದಲ್ಲಿ ಶಾಲಾ ಶುಲ್ಕ ಕಟ್ಟಿ ಶಿಕ್ಷಣ ಮುಂದುವರಿಸಲು ನೆರವಾಗಿದ್ದ ಶಿಕ್ಷಕರಿಗೆ ಕೃತಜ್ಞತೆಯ ಕಾಣಿಕೆಯಾಗಿ ಹಳೆಯ ವಿದ್ಯಾರ್ಥಿಯೊಬ್ಬ ಹೊಸ ಕಾರನ್ನು ಉಡುಗೊರೆಯಾಗಿ ನೀಡಿರುವ ಭಾವನಾತ್ಮಕ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಗುರು-ಶಿಷ್ಯರ ಬಾಂಧವ್ಯಕ್ಕೆ ಹೊಸ ಅರ್ಥ ನೀಡುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹಾವೇರಿ ಜಿಲ್ಲೆಯ ಹಾನಗಲ್‌ನ ಕುಮಾರೇಶ್ವರ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ಸಿ.ಎಸ್. ವಸ್ತ್ರದ್ ಅವರಿಗೆ...

Hubli News: 250 ಕೋಟಿ ವಂತಿಗೆ ಬಾಕಿ; ನಿರಂತರ ನೀರು ಯೋಜನೆಗೆ ಹಿನ್ನಡೆ

Hubli News: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ವಿಶ್ವಬ್ಯಾಂಕ್ ನೆರವಿನ ನಿರಂತರ ನೀರು ಸರಬರಾಜು ಯೋಜನೆಗೆ ಪಾವತಿಸಬೇಕಿರುವ 250 ಕೋಟಿಗೂ ಅಧಿಕ ವಂತಿಗೆಯನ್ನು ಬಾಕಿ ಉಳಿಸಿಕೊಂಡಿದೆ. ಇದರಿಂದ ಯೋಜನೆಯ ಅನುಷ್ಠಾನ ಹಾಗೂ ಕಾಮಗಾರಿ ಪ್ರಗತಿಗೆ ಹಿನ್ನಡೆಯಾಗಿರುವುದು ಬೆಳಕಿಗೆ ಬಂದಿದೆ. ಅವಳಿ ನಗರದಲ್ಲಿ ಜಾರಿಯಲ್ಲಿರುವ ವಿಶ್ವಬ್ಯಾಂಕ್ ನೆರವಿನ ನಿರಂತರ ನೀರು ಸರಬರಾಜು ಯೋಜನೆಗೆ ಪಾಲಿಕೆ ತನ್ನ ಪಾಲಿನ ವಂತಿಗೆ...

Chanakya Neeti: ಯಾರನ್ನು ಕರೆದರೂ ಈ 5 ಜನರನ್ನು ಮಾತ್ರ ನಿಮ್ಮ ಮನೆಗೆ ಕರೆಯಬೇಡಿ..

Chanakya Neeti: ಮನೆಗೆ ಅತಿಥಿಯನ್ನು ಕರೆದು ಉಣ ಬಡಿಸುವುದು ನಮ್ಮ ಭಾರತೀಯ ಪದ್ಧತಿ. ಹಾಗಾಗಿಯೇ ನಾವು ಅತಿಥಿ ದೇವೋಭವ, ವಸುದೈವ ಕುಟುಂಬಕಂ ಎಂದು ಹೇಳುತ್ತೇವೆ. ಆದರೆ ಚಾಣಕ್ಯರ ಪ್ರಕಾರ, ನಾವು ಯಾರನ್ನು ಮನೆಗೆ ಕರೆದರೂ, ಕೆಲವರನ್ನು ಮಾತ್ರ ಯಾವುದೇ ಕಾರಣಕ್ಕೂ ಮನೆಗೆ ಕರೆಯಬಾರದಂತೆ. ಹಾಗಾದ್ರೆ ನಾವು ಯಾರನ್ನು ಮನೆಗೆ ಕರೆಯಬಾರದು ಅಂತಾ ತಿಳಿಯೋಣ ಬನ್ನಿ.. ಸಮಯ...

Political News: ಜನರ ಬಗ್ಗೆ ಕಳಕಳಿ ಇದ್ದರೆ ರಾಜ್ಯದ ಪಾಲಿನ ತೆರಿಗೆ ಕಡಿ‌ಮೆ ಮಾಡುತ್ತಾರೆ: ಬಸವರಾಜ ಬೊಮ್ಮಾಯಿ

Political News: ಇಂದು ಮಾಧ್ಯಮಗಳ ಜತೆ ಮಾತನಾಡಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ಕಾಂಗ್ರೆಸ್ ನಲ್ಲಿ ಅಧಿಕಾರ ಹಸ್ತಾಂತರ ಮೇಲ್ನೋಟಕ್ಕೆ ಬಹಳ ಸುಗಮವಾಗಿ ಆಯಿತು ಎನ್ನುವಂತೆ ಕಾಣಿಸುತ್ತಿದೆ. ಆದರೆ, ಒಳ ಬೇಗುದಿ ಇನ್ನೂ ಕೆಂಡದಂತೆ ಜೀವಂತ ಆಗಿದೆ. ಅದರ ಲಕ್ಷಣಗಳೇ ಖಾತೆಗೊಂದಲ ನಡೆಯುತ್ತಿದೆ. ಎರಡನೇಯದಾಗಿ ಸಿದ್ದರಾಮಯ್ಯ ನಾಯಕತ್ವ...

Uttara Kannada News: ವಸತಿ ಶಾಲೆಯಲ್ಲಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹ*ತ್ಯೆ

Uttara Kannada News: ಸಿದ್ದಾಪುರ: ತಾಲೂಕಿನ ಕಾನಸೂರಿನ ಇಂದಿರಾಗಾಂಧಿ ವಸತಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಒಬ್ಬ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಇಂದು ಸಂಜೆ ಕಾನಸೂರಿನ ಇಂದಿರಾ ಗಾಂಧಿ ವಸತಿ ಶಾಲೆಯ ಬಟ್ಟೆ ಒಣಗಿಸುವ ಕೋಣೆಯಲ್ಲಿ ವಿದ್ಯಾರ್ಥಿ ಗೋಕುಲ ಕೃಷ್ಣ ಗೌಡ (15) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ವಿದ್ಯಾರ್ಥಿ ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ...
- Advertisement -spot_img

Latest News

ನರಕಯಾತನೆಯ ತಾಣವಾದ ಕಿಮ್ಸ್ ಆಸ್ಪತ್ರೆ, ನಿರ್ದೇಶಕರು ರಾಜೀನಾಮೆ ನೀಡುವಂತೆ ಸಾರ್ವಜನಿಕರ ಒತ್ತಾಯ

Koppala News: ಕೊಪ್ಪಳ ಜಿಲ್ಲೆಯ ಬಡ ರೋಗಿಗಳ ಜೀವನಾಡಿಯಾಗಬೇಕಿದ್ದ ಕಿಮ್ಸ್ ಆಸ್ಪತ್ರೆ, ಇಂದು ನಿರ್ದೇಶಕರ ಬೇಜವಾಬ್ದಾರಿ ಮತ್ತು ಅತಿಯಾದ ಭ್ರಷ್ಟಾಚಾರದಿಂದಾಗಿ ಬಡವರ ನರಕಯಾತನೆಯ ತಾಣವಾಗಿದೆ. ದೂರದ ಊರುಗಳಿಂದ...
- Advertisement -spot_img