Political News: ನಿನ್ನೆ ತಾನೇ ಲೋಕಸಭಾ ಚುನಾವಣೆಗಾಗಿ ಬಿಜೆಪಿ ಮೊದಲ ಹಂತದ ಪಟ್ಟಿ ರಿಲೀಸ್ ಮಾಡಿದ್ದು, 195ಕ್ಕೂ ಹೆಚ್ಚು ಜನರಿಗೆ ಟಿಕೇಟ್ ಘೋಷಿಸಿದೆ. ಆದರೂ ನಟ ಪವನ್ ಸಿಂಗ್ ತಾನು ಚುನಾವಣೆಗೆ ನಿಲ್ಲುವುದಿಲ್ಲವೆಂದು ಹೇಳಿದ್ದಾರೆ.
ಭೋಜಪುರಿ ನಟನಾಗಿರುವ ಪವನ್ ಸಿಂಗ್ಗೆ ಪಶ್ಚಿಮ ಬಂಗಾಳದ ಅಸನ್ಸೋಲ್ನಿಂದ ಲೋಕಸಭೆ ಚುನಾವಣೆಗೆ ನಿಲ್ಲಲು ಬಿಜೆಪಿ ಟಿಕೇಟ್ ಘೋಷಿಸಿತ್ತು. ಆದರೆ ಈ ಬಗ್ಗೆ ಬಿಜೆಪಿಗೆ ಧನ್ಯವಾದ ಹೇಳಿರುವ ಪವನ್, ಬಿಜೆಪಿ ನನ್ನ ಮೇಲೆ ನಂಬಿಕೆ ಇಟ್ಟು ಟಿಕೇಟ್ ಘೋಷಣೆ ಮಾಡಿದೆ. ಆದರೆ ನಾನು ಈ ಚುನಾವಣೆಯಲ್ಲಿ ಕಾರಣಾಂತರಗಳಿಂದ ಸ್ಪರ್ಧಿಸಲಾಗುತ್ತಿಲ್ಲ.
ಟಿಎಂಸಿ ಸಂಸದರಾಗಿರುವ ನಟ ಶತ್ರುಘ್ನ ಸಿನ್ಹಾಗೆ ಪೈಪೋಟಿ ನೀಡಲು ಪವನ್ ಸಿಂಗ್ರನ್ನು ಬಿಜೆಪಿ ಕಣಕ್ಕೆ ಇಳಿಸಿತ್ತು. ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಅಷ್ಟು ಸೀಟ್ ಬಿಜೆಪಿ ಗೆಲ್ಲಲೇಬೇಕು ಎಂದು ಟಾರ್ಗೇಟ್ ಹಾಕಲಾಗಿತ್ತು. ಆದರೆ ಪವನ್ ಸಿಂಗ್ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ.
ಕುಡಿಯುವ ನೀರಿನ ದಂಧೆ ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡ ರಾಜ್ಯ ಸರ್ಕಾರ..
ಫುಡ್ ವ್ಲಾಗರ್ಸ್, ಹೊಟೇಲ್ ಉದ್ಯಮಿಗಳು ಸೇರಿ ನಾವೆಲ್ಲ ರಾಮೇಶ್ವರಂ ಕೆಫೆಯೊಂದಿಗಿದ್ದೇವೆ: ಸಿಹಿ ಕಹಿ ಚಂದ್ರು