Movie News: ನಟಿ ರಶ್ಮಿಕಾ ಮಂದಣ್ಣ ಚಲಿಸುತ್ತಿದ್ದ ವಿಮಾನ ಭೂಸ್ಪರ್ಶವಾಗಿದ್ದು, ರಶ್ಮಿಕಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಶ್ಮಿಕಾ ಮತ್ತು ನಟಿ ಶ್ರದ್ಧಾದಾಸ್ ಚಲಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಇರುವ ಕಾರಣದಿಂದ ತುರ್ತು ಭೂಸ್ಪರ್ಶವಾಗಿದೆ. ಈ ಬಗ್ಗೆ ರಶ್ಮಿಕಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೇಟಸ್ ಹಾಕಿದ್ದು, ಹೀಗೆ ಮಾಡಿ ನಾವು ಸಾವಿನಿಂದ ಪಾರಾದೆವು ಎಂದಿದ್ದಾರೆ.
ವಿಮಾನ ಸಿಬ್ಬಂದಿ ನೀಡಿದ ಸೂಚನೆಯಂತೆ, ರಶ್ಮಿಕಾ ಮಂದಣ್ಣ ಮತ್ತು ಶ್ರದ್ಧಾದಾಸ್ ತುರ್ತು ಭೂಸ್ಪರ್ಶದ ವೇಳೆ, ತಮ್ಮ ಕಾಲುಗಳನ್ನು ಮುಂದಿನ ಸೀಟ್ಗೆ ಒತ್ತಿಹಿಡಿದಿದ್ದಾರೆ. ಈ ರೀತಿ ನಾವು ನಮ್ಮ ಪ್ರಾಣ ಉಳಿಸಿಕೊಂಡೆವೆಂದು ರಶ್ಮಿಕಾ, ಫೋಟೋ ಅಪ್ಲೋಡ್ ಮಾಡಿದ್ದಾರೆ.
ರಶ್ಮಿಕಾ ಹೈದರಾಬಾದ್, ಮುಂಬೈನಲ್ಲೂ ಮನೆ ಖರೀದಿಸಿದ್ದು, ಕಾಲಿವುಡ್, ಟಾಲಿವುಡ್, ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹಾಗಾಗಿ ಅವರಿಗೆ ಚೆನ್ನೈ, ಹೈದರಾಬಾದ್, ಮುಂಬೈ ಸೇರಿ ಬೇರೆ ಬೇರೆ ಸಿಟಿಗಳಿಗೆ ಸಿನಿಮಾ ಶೂಟಿಂಗ್ಗಾಗಿ ತಿರುಗಾಡುತ್ತಲೇ ಇರಬೇಕು. ಈ ಕಾರಣಕ್ಕೆ, ಅವರು ವಿಮಾನದಲ್ಲಿ ಪದೇ ಪದೇ ಪ್ರಯಾಣ ಮಾಡುತ್ತಲೇ ಇರುತ್ತಾರೆ.
ಬೆಳ್ಳಿ ಪರ್ವ ಡಿ-25 ಕಾರ್ಯಕ್ರಮ: ದರ್ಶನ್ ಸಹಾಯ ನೆನೆದು ಭಾವುಕರಾದ ಸಂಸದೆ ಸುಮಲತಾ ಅಂಬರೀಷ್
ಕರಿಮಣಿ ಮಾಲೀಕ ಹಾಡು ಹಾಡಿ, ತುಳು ಹಾಡಿಗೆ ರೀಲ್ಸ್ ಮಾಡಿದ ಕಿಲಿ ಪೌಲ್..
ಕಿಂಗ್ ಚಾರ್ಲ್ಸ್ಗೆ ಕ್ಯಾನ್ಸರ್: ತಂದೆಯ ಆರೋಗ್ಯ ವಿಚಾರಿಸಲು ತೆರಳಿದ ಪ್ರಿನ್ಸ್ ಹ್ಯಾರಿ..