Saturday, July 27, 2024

Latest Posts

ನಂದ ಕಿಶೋರ್‌ಗೆ ತಿರುಗೇಟು ನೀಡಿದ ಯುವಕ..!

- Advertisement -

ಕೆಲವು ದಿನಗಳ ಹಿಂದೆ ಚರಣ್ ಎಂಬುವ ವ್ಯಕ್ತಿ ಕಿಚ್ಚ ಸುದೀಪ್ ಅವರ ರಮ್ಮಿ ಜಾಹೀರಾತಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನಿರ್ದೇಶಕ ನೊಂದ ಕಿಶೋರ್ ಆಕ್ರೋಶ ಹೊರ ಹಾಕಿದ್ದರು.

ಇದೀಗ ನಂದ ಕಿಶೋರ್ ಅವರು ಕಿಡಿ ಕಾರಿದ್ದ ವಿಡಿಯೋ ವೈರಲ್ ಆಗುತ್ತಿದ್ದಂತೆ ಚರಣ್ ಎಂಬುವ ವ್ಯಕ್ತಿ ಫೇಸ್ ಬುಕ್ ಲೈವ್ ಬಂದಿದ್ದಾನೆ. ನಿರ್ದೇಶಕ ನೊಂದ ಕಿಶೋರ್, ನಟ ಸುದೀಪ್ ಹಾಗೂ ಅವರ ಮ್ಯಾನೇಜರ್ ಕಮ್ ನಿರ್ಮಾಪಕ ಜಾಕ್ ಮಂಜು ಅವರ ವಿರುದ್ಧ ತಿರುಗಿ ಬಿದ್ದಿದ್ದಾನೆ.

“ಲೇ ನಂದ ಕಿಶೋರ, ಈಗ ಬಂದ್ಯ. ಈಗ ಬರಬೇಕು ಅನಿಸಿತಾ? ಬುಡಕ್ಕೆ ಮೆಣಸಿನಕಾಯಿ ಹಚ್ಚಿಕೊಂಡಾಗ ಡಾ. ರಾಜಕುಮಾರ್ ಹೆಸರನ್ನು ತೆಗೆದುಕೊಂಡು ರಕ್ಷಣೆ ಮಾಡಿ ಅಂತ ಭಿಕ್ಷೆ ಬೇಡುವುದಕ್ಕೆ ಬಂದಿದ್ದೀಯಾ. ಕಲಾಭಿಮಾನಿಗಳೆಲ್ಲಾ ರಕ್ಷಣೆ ಮಾಡಬೇಕು ಎಂದಿದ್ದೀಯಲ್ಲಾ ನಾಚಿಕೆಯಾಗಬೇಕು. ಅದೇ ಕಲಾಭಿಮಾನಿಗಳಿಗೆ ಜೂಜು ಆಡಿಸಿದಾಗ ಎಲ್ಲಿ ಹೋಗಿದ್ರಿ ನೀವೆಲ್ಲ?

ಕನ್ನಡದ ಚಿತ್ರರಂಗದಲ್ಲಿ ಫಿಲಂ ಚೇಂಬರ್ ಇದೆ, ಒಂದು ಕಂಪ್ಲೇಂಟ್ ಮಾಡು ಅಂತಿಯಲ್ಲ, ಕಂಪ್ಲೇಂಟ್ ಯಾಕೆ ಮಾಡಬೇಕು. ಕನ್ನಡ ಫಿಲಂ ಚೇಂಬರ್ ಗೆ ಗೊತ್ತಿಲ್ವಾ ಜೂಜು ಆಡಿಸಿದ್ದು. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದೀಯ ಅಂತಿಯಲ್ಲ, ಮಾತಾಡುವುದಕ್ಕಿಂತ ಮುಂಚಿತವಾಗಿ ಅಧ್ಯಯನ ಮಾಡಿಕೊಂಡು ಮಾತಾಡು. ದಿನಕ್ಕೆ ಸಾವಿರ ಕಾಲ್ ಬರುತ್ತಿದೆ. ಸಾಧ್ಯವಾದಷ್ಟು ಕಾಲ್ ರಿಸೀವ್ ಮಾಡುತ್ತಿದ್ದೇನೆ. ಮಾತನಾಡುತ್ತಿದ್ದೇನೆ. ಆ ವಿಡಿಯೋ ಕಾಲ್ ಅನ್ನು ಕಿಚ್ಚ ಸುದೀಪ್ ಪಿ ಎ ಜಾಕ್ ಮಂಜುಗೆ ಕಳುಹಿಸಿದ್ದೇನೆ ಎಂದಿದ್ದಾನೆ.

ಡಾ.ರಾಜಕುಮಾರ್ ಅವರು, ಅವರ ಕಲಾಭಿಮಾನಿಗಳಿಗೆ ಒಂದೇ ಒಂದು ಕೆಟ್ಟ ಚಟವನ್ನಾದರೂ ಹೇಳಿಕೊಟ್ಟಿದ್ದಾರಾ? ನೀವು ಚಿತ್ರರಂಗ ಒಂದು ಕುಟುಂಬ ಅಂತ ಹೇಳಿದ್ರಲ್ಲ, ಈ ಕುಟುಂಬದವರು ಸುದೀಪ್ ಜೂಜು ಆಡಿಸಿದಾಗ ಕೇಳಿದಿದ್ದರೆ ನಾವ್ಯಾಕೆ ಬರುತ್ತಿದ್ದೆವು? ನಿಮ್ಮ ಮನೆಯಲ್ಲಿ ಗಲೀಜು ಮಾಡಿಕೊಂಡಿದ್ದಕ್ಕೆ ನಾನು ಇವತ್ತು ಗಲೀಜು ಕ್ಲೀನ್ ಮಾಡುವುದಕ್ಕೆ ಬಂದಿರುವುದು. ರಮ್ಮಿ ಆಡಿ, ಎಲ್ಲಾ ಹಣವನ್ನು ಹಂಚಿ, ಈ ತರ ಆದರೆ ಯಾರು ಬಂದು ಸಿನಿಮಾ ನೋಡುವವರು ಎಂದು ಕಿಡಿಕಾರಿದ್ದಾನೆ.

ಅಲ್ಲಿ ಯಾರೋ ಜೂಜಿನಿಂದ ಸತ್ತು ಹೋದರೆ, ಅದು ಸುದೀಪ್ ನಿಂದಲೇ ಸತ್ತು ಹೋದ ಅಂತ ಬರೆದಿಡಬೇಕಾ ಅವನು? ಜೂಜಿನಿಂದ ಸತ್ತಿರುವುದು. ಸರ್ಕಾರ ಅಪ್ಲಿಕೇಶನ್ ಅನ್ನು ಬ್ಯಾನ್ ಮಾಡಬೇಕಿತ್ತು. ನೀನು ಹೇಳಿದ್ಯಲ್ಲಾ ಮೇರು ನಟ ಅಂತ, ಆ ಮೇರು ನಟನಿಗೆ ಬುದ್ಧಿ ಬೇಕು. ನಾನು ಏನಾದರೂ ಕೆಟ್ಟ ಕೆಲಸ ಮಾಡಿದರೆ, ನನ್ನ ಅಭಿಮಾನಿಗಳು ಕೂಡ ಅದೇ ಕೆಲಸ ಮಾಡುತ್ತಾರೆ ಅನ್ನೋದು ಗೊತ್ತಿರಬೇಕು. ಸ್ಕಿಲ್ ಗೇಮ್ ಅಂತ ಸಾವಿರ ಜನ ಬೀದಿಗೆ ಬಂದಿದ್ರಲ್ಲ, ಆ ಹೊಣೆಯನ್ನು ಯಾರು ತೆಗೆದುಕೊಳ್ಳುತ್ತಾರೆ ಎಂದು ಯುವಕ ಕಿಡಿ ಕಾರಿದ್ದಾನೆ.

- Advertisement -

Latest Posts

Don't Miss