2023 Special Story: 2023 ಮುಗಿಯುತ್ತ ಬರುತ್ತಿದೆ. ಇನ್ನು ಎರಡರಿಂದ ಮೂರು ದಿನದಲ್ಲಿ 2023 ಮುಗಿದು ನಾವೆಲ್ಲ 2024ನೇ ವರ್ಷಕ್ಕೆ ಕಾಲಿಡುತ್ತಿದ್ದೇವೆ. 2023 ಕೆಲವರ ಪಾಲಿಗೆ ಲಕ್ಕಿ ಇನ್ನು ಕೆಲವರ ಪಾಲಿಗೆ ಅನ್ಲಕ್ಕಿಯಾಗಿತ್ತು. ಸ್ಯಾಂಡಲ್ವುಡ್ ಪಾಲಿಗೂ ಇದು ಕೊಂಚ ಅನ್ಲಕ್ಕಿ ಎನ್ನಬಹುದು. ಏಕೆಂದರೆ, ಸ್ಯಾಂಡಲ್ವುಡ್ ಈ ವರ್ಷ ಹಲವು ಗಣ್ಯರನ್ನ ಕಳೆದುಕೊಂಡಿದೆ.
ಲೀಲಾವತಿ: ಇದೇ ಡಿಸೆಂಬರ್ 8ರಂದು ಲೀಲಾವತಿ ನಮ್ಮನ್ನು ಅಗಲಿದರು. 50 ವರ್ಷಗಳ ಕಾಲ ಸ್ಯಾಂಡಲ್ವುಡ್ನಲ್ಲಿ ತಮ್ಮ ಸೇವೆ ಸಲ್ಲಿಸಿದ್ದ ಲೀಲಾವತಿ, ಅತ್ಯುತ್ತಮ ನಟಿಯಾಗಿದ್ದರು. ಹಲವಾರು ಪ್ರಶಸ್ತಿಗಳಿಗೆ ಭಾಜನರಾದ ಲೀಲಾವತಿ, ತಮ್ಮ ಕೊನೆಯ ದಿನಗಳಲ್ಲಿ ಸಮಾಜ ಸೇವೆಗಾಗಿ ಪಶು ಚಿಕಿತ್ಸಾಲಯವನ್ನು ಕೂಡ ಸ್ಥಾಪಿಸಿದ್ದರು. ಡಿಸಿಎಂ ಡಿ.ಕೆ.ಶಿವಕುಮಾರ್ ಲೀಲಾವತಿ ದೇಹಾಂತ್ಯಕ್ಕೂ ಮುನ್ನ ಆ ಚಿಕಿತ್ಸಾಲಯದ ಉದ್ಘಾಟನೆ ಮಾಡಿದ್ದರು.
ಎಸ್.ಕೆ.ಭಗವಾನ್: ಪ್ರಸಿದ್ಧ ನಿರ್ದೇಶಕ, ನಿರ್ಮಾಪಕ,ನಟ ಎಸ್.ಕೆ.ಭಗವಾನ್ ಅವರು ಇದೇ ವರ್ಷದ ಫೆಬ್ರವರಿ 20ರಂದು ನಿಧನರಾದರು. 90 ವರ್ಷ ವಯಸ್ಸಿನ ಇವರು, ಹಲವು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕಳೆದ ವರ್ಷ ಡಿಸೆಂಬರ್ನಿಂದಲೇ ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಫೆಬ್ರವರಿ 20ರಂದು ಚಿಕಿತ್ಸೆ ಫಲಿಸದೇ, ಭಗವಾನ್ ಕೊನೆಯುಸಿರೆಳೆದರು.
ಸ್ಪಂದನಾ ವಿಜಯ್ ರಾಘವೇಂದ್ರ: ಬ್ಯಾಂಕಾಕ್ ಟ್ರಿಪ್ಗೆ ಎಂಜಾಯ್ ಮಾಡಲೆಂದು ಹೋಗಿದ್ದ ಸ್ಪಂದನಾ ವಿಜಯ್ ರಾಘವೇಂದ್ರ, ಅಲ್ಲೇ ಹಾರ್ಟ್ ಅಟ್ಯಾಕ್ ಆಗಿ ಸಾವನ್ನಪ್ಪಿದ್ದರು. ತುಳುನಾಡಿನ ಹೆಣ್ಣಾದ ಸ್ಪಂದನಾರನ್ನು ವಿಜಯ್ ಪ್ರೀತಿಸಿ ವಿವಾಹವಾಗಿದ್ದರು. ಪತ್ನಿಯೇ ಸರ್ವಸ್ವ ಎಂದು ಬಿಗ್ಬಾಸ್ನಲ್ಲಿದ್ದಾಗ ವೀಜಯ್ ಹೇಳುತ್ತಿದ್ದರು. ಆದರೆ ಸ್ಪಂದನಾ ಹೃದಯಾಘಾತದಿಂದ ಇದೇ ವರ್ಷ ಆಗಸ್ಟ್ 27ರಂದು ಮೃತಪಟ್ಟರು.
ಶರತ್ ಬಾಬು: ಅಮೃತ ವರ್ಷಿಣಿ ಸಿನಿಮಾದಲ್ಲಿ ನಟಿಸಿದ್ದ ನಟ ಶರತ್ ಬಾಬು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ತಮ್ಮ 71ನೇ ವಯಸ್ಸಿನಲ್ಲಿ ಇದೇ ವರ್ಷ ಅವರು ನಿಧನರಾದರು.
ನಿತಿನ್ ಗೋಪಿ: ಕೊಳಲುವಾದಕ ಗೋಪಿ ಅವರ ಪುತ್ರ ನಿತಿನ್ ಗೋಪಿ ತಮ್ಮ 39ನೇ ವಯಸ್ಸಿಗೆ ಅಪಘಾತ ಸಂಭವಿಸಿ, ನಿಧನರಾದರು. ಮುತ್ತಿನಂಥ ಹೆಂಡತಿ, ನಿಶ್ಶಬ್ಧ, ಕೆರಳಿದ ಕೇಸರಿ, ಚಿರಬಾಂಧವ್ಯ ಮುಂತಾದ ಸಿನಿಮಾಗಳಲ್ಲಿ ನಿತಿನ್ ನಟಿಸಿದ್ದರು.
ಮಂದೀಪ್ ರಾಯ್: ಮಂದೀಪ್ ರಾಯ್ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕಾಮಿಡಿ ಆ್ಯಕ್ಟರ್ ಆಗಿದ್ದರು. ಇವರು ಅನಾರೋಗ್ಯದಿಂದ ಬಳಲುತ್ತಿದ್ದು, 2023ರಲ್ಲಿ ನಿಧನರಾಗಿದ್ದಾರೆ.
ಸಂಪತ್ ಜೆ ರಾಮ್: ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಟಿಸಿದ್ದ ಸಂಪತ್ ಜೆ ರಾಮ್ 35ನೇ ವರ್ಷಕ್ಕೆ ಕಾರಣಾಂತರಗಳಿಂದ ಆತ್ಮಹತ್ಯೆಗೆ ಶರಣಾಗಿದ್ದರು.
ಲಕ್ಷ್ಮಣ್: ಸ್ಯಾಂಡಲ್ವುಡ್ನ ಹಲವು ಸಿನಿಮಾಗಳಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದ ಲಕ್ಷ್ಮಣ್ ಕೂಡ ಇದೇ ವರ್ಷ ಮೃತಪಟ್ಟಿದ್ದಾರೆ. ಇವರು ತಮ್ಮ 74ನೇ ವಯಸ್ಸಿಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಕೇಕ್ ಕತ್ತರಿಸುವಾಗ ಹಿಂದೂ ದೇವರಿಗೆ ಜೈ ಎಂದ ರಣ್ಬೀರ್: ದಾಖಲಾಯ್ತು ಎಫ್ಐಆರ್
ಡೈರೆಕ್ಟರ್ ವರ್ಮಾ ತಲೆ ತಂದವರಿಗೆ 1 ಕೋಟಿ ರೂ. ಬಹುಮಾನ ಘೋಷಣೆ: ಎಫ್ಐಆರ್ ದಾಖಲು