Bengaluru News: ಬೆಂಗಳೂರು: ಕೋಲಾರದಿಂದ ರಾತ್ರಿ ಕೆಎಸ್ಆರ್ಟಿಸಿ ಬಸ್ನಲ್ಲಿ ಬೆಂಗಳೂರಿಗೆ ಬಂದು ದ್ವಿಚಕ್ರ ವಾಹನ ಕಳವು ಮಾಡಿಕೊಂಡು ಪರಾರಿಯಾಗುತ್ತಿದ್ದ ಮೂವರು ಆರೋಪಿಗಳನ್ನು ಕಾಟನ್ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೋಲಾರದ ಜಿಲ್ಲೆ ಮುಳಬಾಗಿಲು ತಾಲೂಕಿನ ನವಕ್ಕಲ್ ಬಂಡೆ ನಿವಾಸಿ ಮಹಮ್ಮದ್ ಆಸೀಫ್ (27), ಮಹಮ್ಮದ್ ವಾಸೀಂ (22) ಹಾಗೂ ಸೈಯದ್ ಆಸೀಫ್ (25) ಬಂಧಿತರು. ಆರೋಪಿಗಳಿಂದ ₹22.30 ಲಕ್ಷ ಮೌಲ್ಯದ ವಿವಿಧ ಕಂಪನಿಗಳ 31 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ.
ಕದ್ದ ಬೈಕ್ ಹಳ್ಳಿಗಳಲ್ಲಿ ಮಾರಾಟ
ಆರೋಪಿಗಳು ಕದ್ದ ದ್ವಿಚಕ್ರ ವಾಹನಗಳನ್ನು ಮುಳಬಾಗಿಲು ಸುತ್ತಮುತ್ತಲ ಹಳ್ಳಿಗಳಲ್ಲಿ 5, 10, 15 ಸಾವಿರ ರುಪಾಯಿಗೆ ಮಾರಾಟ ಮಾಡುತ್ತಿದ್ದರು. ಮಾರಾಟಕ್ಕೂ ಮುನ್ನ ದ್ವಿಚಕ್ರ ವಾಹನಗಳ ನೋಂದಣಿ ಫಲಕ ಹಾಗೂ ಚಾಸಿ ಸಂಖ್ಯೆ ಬದಲಿಸುತ್ತಿದ್ದರು. ಕಡಿಮೆ ಬೆಲೆಗೆ ದ್ವಿಚಕ್ರ ವಾಹನಗಳು ಸಿಗುತ್ತಿದ್ದರಿಂದ ಹಳ್ಳಿ ಜನರು ದಾಖಲೆ ಕೇಳದೇ ದ್ವಿಚಕ್ರ ವಾಹನ ಖರೀದಿಸುತ್ತಿದ್ದರು.
31 ಪ್ರಕರಣ ಪತ್ತೆ
ಆರೋಪಿಗಳ ಬಂಧನದಿಂದ ಕಾಟನ್ಪೇಟೆ ಠಾಣೆಯ ಆರು, ಕಲಾಸಿಪಾಳ್ಯ, ಸಿ.ಟಿ.ಮಾರ್ಕೆಟ್, ಚಾಮರಾಜಪೇಟೆ ಠಾಣೆಗಳ ತಲಾ ಎರಡು, ಹೆಬ್ಬಾಳ, ಹಲಸೂರು, ಕೋಲಾರ ಟೌನ್, ಶ್ರೀನಿವಾಸಪುರ ಠಾಣೆಗಳ ವ್ಯಾಪ್ತಿಯಲ್ಲಿ ಕಳವುವಾಗಿದ್ದ ಒಟ್ಟು 31 ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Varthur Santhosh : ಕನ್ನಡದ ಬಿಗ್ಬಾಸ್ ಸೆಟ್ನಲ್ಲೇ “ಆ ಸ್ಪರ್ಧಿ” ಅರೆಸ್ಟ್
‘400-500 ಕೋಟಿ ಖರ್ಚು ಮಾಡಿ ಸುವರ್ಣ ಸೌಧವನ್ನ ಭೂತ ಬಂಗಲೆ ಮಾಡುವುದು ಸರಿಯಲ್ಲ’