Saturday, July 27, 2024

Latest Posts

ಜಾವೆದ್ ಅಖ್ತರ್ ರನ್ನು ಹೊಗಳಿದ ಕಂಗನಾ ರಣಾವತ್

- Advertisement -

ನಟಿ ಕಂಗನಾ ರಣಾವತ್​ ಅವರು ವಿವಾದಗಳಿಂದಲೇ ಹೆಚ್ಚು ಸುದ್ದಿ ಆಗುತ್ತಾರೆ. ಬಾಲಿವುಡ್​ನ ಅನೇಕರನ್ನು ಅವರು ಎದುರು ಹಾಕಿಕೊಂಡಿದ್ದಾರೆ. ಈಗ ಏಕಾಏಕಿ ಜಾವೇದ್​ ಅಖ್ತರ್​  ಅವರನ್ನು ಕಂಗನಾ ರಣಾವತ್​ ಹೊಗಳಿದ್ದಾರೆ.

‘ಜಾವೇದ್​ ಅವರ ಕವಿತೆ ಕೇಳಿದಾಗಲೆಲ್ಲ ಸರಸ್ವತಿಯೇ ಅವರಿಗೆ ಆಶೀರ್ವಾದ ಮಾಡಿದ್ದಾಳೆ ಎನಿಸುತ್ತದೆ. ಅವರಲ್ಲಿ ಸತ್ಯ ಇರುವ ಕಾರಣಕ್ಕೇ ಆ ದೈವಿ ಗುಣ ಇದೆ. ಜೈ ಹಿಂದ್​. ಪಾಕಿಸ್ತಾನದವರ ಮನೆಗೆ ನುಗ್ಗಿ ಹೊಡೆದಿದ್ದಾರೆ’ ಎಂದು ಕಂಗನಾ ರಣಾವತ್​ ಅವರು ಪೋಸ್ಟ್​ ಮಾಡಿದ್ದಾರೆ.

ಕಂಗನಾ ರಣಾವತ್​ ಅವರ ಹೇಳಿಕೆಗೆ ಪ್ರತಿಕ್ರಿಯೆ ಪಡೆಯಲು ಮಾಧ್ಯಮದವರು ಜಾವೇದ್​ ಅಖ್ತರ್​ ಅವರನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ಜಾವೇದ್​ ಅವರು, ‘ಕಂಗನಾ ಅವರನ್ನು ನಾನು ಮುಖ್ಯ ಎಂದು ಪರಿಗಣಿಸಿಲ್ಲ. ಅವರು ಹೇಗೆ ಮುಖ್ಯವಾದ ಹೇಳಿಕೆ ನೀಡಲು ಸಾಧ್ಯ? ಅವರನ್ನು ಬಿಡಿ, ಮುಂದೆ ಹೋಗೋಣ’ ಎಂದು ಜಾವೇದ್​ ಅಖ್ತರ್​ ಹೇಳಿದ್ದಾರೆ.

ಆದರೆ ಅವರ ಮಾತುಗಳಿಂದ ಜಾವೇದ್​ ಅಖ್ತರ್​ ಸಂತಸಗೊಂಡಿಲ್ಲ. ಬದಲಿಗೆ, ‘ಕಂಗನಾ ರಣಾವತ್​ ಮುಖ್ಯವೇ ಅಲ್ಲ’ ಎಂದು ಹೇಳಿದ್ದಾರೆ.  ಹಿರಿಯ ಗೀತರಚನಾಕಾರ ಜಾವೇದ್​ ಅಖ್ತರ್​ ಅವರು ಇತ್ತೀಚೆಗೆ ಪಾಕಿಸ್ತಾನದಲ್ಲಿ ನೀಡಿದ ಹೇಳಿಕೆ ಎಲ್ಲರ ಮೆಚ್ಚುಗೆ ಪಡೆದುಕೊಂಡಿದೆ. 26/11ರ ಮುಂಬೈ ದಾಳಿ ನಡೆಸಿದ ಭಯೋತ್ಪಾದಕರು ಪಾಕಿಸ್ತಾನದವರೇ ಹೊರತು ಬೇರೆ ದೇಶದವರಲ್ಲ ಎಂದು ಜಾವೇದ್​ ಅಖ್ತರ್​ ಅವರು ಪಾಕ್​ ನೆಲದಲ್ಲಿಯೇ ನಿಂತು ಗುಡುಗಿದ್ದಾರೆ. ಅವರ ಧೈರ್ಯವಂತಿಕೆಗೆ ಕಂಗನಾ ಕೂಡ ಭೇಷ್​ ಎಂದಿದ್ದಾರೆ. ಈ ಕುರಿತು ಅವರು ಟ್ವೀಟ್​ ಮಾಡಿದ್ದಾರೆ.

 

ನಿಗೂಢವಾಗಿ ಸಾವನ್ನೊಪ್ಪಿದ ರಷ್ಯಾ ಅಧ್ಯಕ್ಷ ಪುಟಿನ್ ಆಪ್ತೆ

ಹೊಸ ಕಂಪನಿ ಶುರು ಮಾಡಿದ ಗೂಗಲ್ ಕಂಪನಿಯ ಮಾಜಿ ಸಿಬ್ಬಂದಿಗಳು..!

ಅದ್ದೂರಿ ಮದುವೆಯೇ ಸಾವಿಗೆ ಕಾರಣವಾಯ್ತು ….!

 

- Advertisement -

Latest Posts

Don't Miss