Sunday, September 8, 2024

Latest Posts

ಪುನೀತ್ ಆಯಸ್ಸಿನ ಬಗ್ಗೆ ರಾಯರು ಕೊಟ್ಟಿದ್ರಾ ಸೂಚನೆ..?!

- Advertisement -

ಬೆಂಗಳೂರು- ಪುನೀತ್ ರಾಜ್ ಕುಮಾರ್… ಕರುನಾಡಿನ ಜನ ಮಾನಸದಲ್ಲಿ ಎಂದಿಗೂ ಮರೆಯದೇ ಉಳಿಯಲಿರೋ ವೀರ ಕನ್ನಡಿಗ. ಫಿಕ್ನೆಸ್ ವಿಚಾರದಲ್ಲಿ ಸಾವಿರಾರು ಮಂದಿಗೆ ಸ್ಪೂರ್ತಿಯಾಗಿದ್ದ ಪುನೀತ್ ತಮ್ಮನ್ನು ತಾವು ಆರೋಗ್ಯವಾಗಿಟ್ಟುಕೊಳ್ಳಲು ಪ್ರತಿದಿನ ವ್ಯಾಯಾಮ, ಯೋಗಾದಿಗಳನ್ನು ಮಾಡ್ತಿದ್ರು. ಇಂಥಹ ಪುನೀತ್ ಇದ್ದಕ್ಕಿದ್ದಂತೆ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದು ಆಘಾತಕಾರಿ ಸಂಗತಿ. ಆದ್ರೆ ಈ ಮಧ್ಯೆ ಪುನೀತ್ ರಾಜ್ ಕುಮಾರ್ ರವರ ಆಯಸ್ಸು ಇದ್ದಿದ್ದು ಇಷ್ಟೇನಾ, ಭಗವಂತನಿಗೂ ಅಪ್ಪು ಇಷ್ಟವಾಗಿ ಅವರನ್ನು ಇಷ್ಟು ಬೇಗ ತನ್ನ ಬಳಿ ಕರೆಸಿಕೊಂಡನಾ ಅನ್ನೋದು ಅಭಿಮಾನಿಗಳು ಅಳಲು ತೋಡಿಕೊಳ್ತಿದ್ದಾರೆ. ಆದ್ರೆ ಇದಕ್ಕೆ ಪುಷ್ಟಿ ನೀಡುವಂತೆ ಭಗವಂತನೇ ಸೂಚನೆ ನೀಡುವ ರೀತಿಯಲ್ಲಿ ವಿಡಿಯೋ ವೊಂದು ವೈರಲ್ ಆಗ್ತಿದೆ.

ಹೌದು, ಕಳೆದ ವರ್ಷ ಮಂತ್ರಾಲಯಕ್ಕೆ ಭೇಟಿ ನೀಡಿದ್ದ ವೇಳೆ ಮಾತನಾಡ್ತಿದ್ದ ಅಪ್ಪು, ತಾವು ಮುಂದಿನ ಬಾರಿ ರಾಯರ ಆರಾಧನಾ ಮಹೋತ್ಸವದಲ್ಲಿ ಭಾಗಿಯಾಗಿ ದೇವರ ಹಾಡುಗಳನ್ನು ಹಾಡೋದಾಗಿ ಹೇಳಿದ್ರು. ಪುನೀತ್ ಈ ಮಾತು ಹೇಳಲು ಆರಂಭಿಸುತ್ತಿದ್ದಂತೆಯೇ, ಗದ್ದುಗೆಯ ಮೇಲಿರಸಲಾಗಿದ್ದ ರಾಯರ ಮೂರ್ತಿ ಜಾರಿಕೊಂಡಿದೆ. ಅಲ್ಲದೆ ಗದ್ದುಗೆಯ ಮೇಲೆ ಇಡಲಾಗಿದ್ದ ಬೆಳ್ಳಿಯ ವೀಣೆ ಕೂಡ ತನ್ನಿಂತಾನೇ ಜಾರಿಕೊಂಡಿದೆ. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡ್ತಿದೆ.

ಇನ್ನು ಈ ವಿಡಿಯೋದಲ್ಲಿ ರಾಯರ ಮೂರ್ತಿ ತನ್ನಿಂತಾನೇ ಜಾರಿಕೊಂಡಿರೋದಕ್ಕೆ ಆಸ್ತಿಕ ವರ್ಗ ತಮ್ಮದೇ ಆದ ಅರ್ಥ ಕಲ್ಪಿಸುತ್ತಿದೆ. ಪುನೀತ್ ರಿಗೆ ರಾಯರು ಅದಾಗಲೇ ತಮ್ಮ ಆಯಸ್ಸಿನ ಬಗ್ಗೆ ಈ ಮೂಲಕ ಸೂಚನೆ ನೀಡಿದ್ದರು ಅನ್ನೋ ಮಾತು ಕೇಳಿಬರ್ತಿದೆ.

ಕರ್ನಾಟಕ ಟಿವಿ- ಬೆಂಗಳೂರು

- Advertisement -

Latest Posts

Don't Miss