Wednesday, September 17, 2025

Latest Posts

ನಾವೆಲ್ಲರೂ ಪ್ರೀತಂಗೌಡರ ಧ್ಚನಿಯಾಗಿದ್ದೇವೆ: ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ

- Advertisement -

Hassan news: ಹಾಸನ : ಹಾಸನದಲ್ಲಿ ಜಿಲ್ಲಾ ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆ ನಡೆದಿದೆ. ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಮಾತನಾಡಿದ್ದು,  ಕಳೆದ ಎಂಟು ತಿಂಗಳ ಹಿಂದೆ ಪ್ರೀತಂಗೌಡ ಅವರಿಗೆ ಆಗಿರುವ ಅನ್ಯಾಯವನ್ನು ಇನ್ನೂ ಜೀರ್ಣಿಸಿಕೊಳ್ಳಲು ಆಗಿಲ್ಲ. ಅಷ್ಟರಲ್ಲಿ ರಾಷ್ಟ್ರಮಟ್ಟದಲ್ಲಿ ನಲವತ್ತು ಪಕ್ಷಗಳು ಎನ್‌ಡಿಎ ಮೈತ್ರಿಕೂಟಕ್ಕೆ ಸೇರಿಕೊಂಡಿದ್ದಾರೆ. ಕೆಲವರು ದೇಶಕ್ಕಾಗಿ, ಮೋದಿಯವರ ಪ್ರಭಾವಕ್ಕೆ ಒಳಗಾಗಿ ಬಂದಿದ್ದಾರೆ. ಇನ್ನೂ ಕೆಲವರು ಅವರ ಅಸ್ತಿತ್ವಕ್ಕಾಗಿ, ಉಳಿವಿಗಾಗಿ ಬಂದು ಸೇರಿದ್ದಾರೆ. ಅವರ ಪಕ್ಷವನ್ನು ಶಾಶ್ವತವಾಗಿ ಉಳಿಸಿಕೊಳ್ಳಲು, ಸಂಘಟನೆ ಮಾಡಿಕೊಳ್ಳಲು ಬಂದಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಜೆಡಿಎಸ್ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ.

ಈ ಬಾರಿ 400 ಕ್ಕೂ ಹೆಚ್ಚು ಸಂಸದರನ್ನು ಕಳುಹಿಸಿ ಕೊಡಬೇಕು. ಪ್ರೀತಂಗೌಡ ಅವರಿಗೆ ಹಿನ್ನಡೆ ಆಗಿದೆ. ಆದರೆ ಎಡ-ಬಲಕ್ಕೆ ಇಬ್ಬರು ಶಾಸಕರನ್ನು ಗೆಲ್ಲಸಿದ್ದು ಪ್ರೀತಂಗೌಡ. ಬೇಲೂರು ಶಾಸಕರು ಹಾಸನದಲ್ಲಿ ಎರಡು ಭಾರಿ ವಿಫಲರಾದರೂ.ಬೇಲೂರಿನಲ್ಲಿ ನಿಂತರು ವಿಫಲರಾದರು.  ಆದರೆ ಪ್ರೀತಂಗೌಡ ಬಂದು ಬಿಜೆಪಿಗೆ ಭದ್ರ ಬುನಾದಿ ಹಾಕಿದರು. ಆಮೇಲೆ ಸುರೇಶ್ ಅವರು ಶಾಸಕರಾಗಿ ಆಯ್ಕೆಯಾದರು. ಪ್ರೀತಂಗೌಡರನ್ನು ಶಾಸಕರನ್ನಾಗಿ ಕಳೆದುಕೊಂಡಿರಬಹುದು. ಆದರೆ ಪಕ್ಷ ಸಂಘಟನೆಗೆ ಅವರ ಶಕ್ತಿ ಸಿಕ್ಕಿದೆ ಎಂದಿದ್ದಾರೆ.

ಕೆಲವರು ಅನ್ಯ ಪಕ್ಷದ ನಾಯಕರು ಮಾತನಾಡಿದ ದಾಟಿ ನೋಡಿದ್ದೇವೆ. ಯಾರೂ ಪ್ರೀತಂಗೌಡ ಸಮಾಧಿ ಕಟ್ಟಲು ಸಾಧ್ಯವಿಲ್ಲ. ಸಂದರ್ಭವನ್ನು ಉಪಯೋಗಿಸಿಕೊಂಡಿದ್ದಾರೆ ಅಷ್ಟೇ.ಸಮನ್ವಯ ಸಮಿತಿ ನಡೆಯಿತು ಹಾಸನದವರು ಯಾರೂ ಕಾಣಲಿಲ್ಲ. ಆದರೆ ಹಾಸನಕ್ಕೆ ವಿಶೇಷವಾದ ಸಮನ್ವಯ ಸಭೆ ಮಾಡುವ ಮಟ್ಟಕ್ಕೆ ಹೋಗಿದೆ. ಮಾಧ್ಯಮದಲ್ಲಿ ಪ್ರೀತಂಗೌಡರಿಗೆ ಕಟ್ಟೆಚ್ಚರ ಕೊಟ್ಟಿದ್ದಾರೆ ಅಂತ ಬಂತು. ಪ್ರೀತಂಗೌಡ ಸೂಚನೆ, ಕಟ್ಟೆಚ್ವರ ಕೊಡುವ ರೀತಿ ಅವರು ನಡೆದುಕೊಂಡಿಲ್ಲ. ಮೈತ್ರಿಕೂಟದ ಪಕ್ಷದವರಿಗೂ ಈ ಸಭೆ ಬಗ್ಗೆ ತಿಳಿಸಿದ್ದೇವೆ. ನಮ್ಮ ಕುಟುಂಬದವರ ಜೊತೆ ಸಭೆ ಮಾಡುತ್ತೇವೆ ಎಂದು ಹೇಳಿದ್ದೇವೆ.

ನಾಳೆ ಜಿಲ್ಲೆಗೆ ಬಿಜೆಪಿ ರಾಜ್ಯಾಧ್ಯಕ್ಷರು ಆಗಮಿಸಲಿದ್ದಾರೆ. ನಮ್ಮ ಮನೆಯ ಯಜಮಾನರು ಆಗಮಿಸಲಿದ್ದಾರೆ. ಅವರನ್ನು ಹೇಗೆ ನಡೆಸಿಕೊಳ್ಳಬೇಕು, ಸ್ವಾಗತ ಮಾಡಬೇಕು ಎಂದು ಚರ್ಚಿಸಲು ಈ ಸಭೆ ಕರೆದಿದ್ದೇವೆ. ನಮ್ಮ ನಾಯಕರ ಗೌರವ, ಸ್ವಾಭಿಮಾನ ಧಕ್ಕೆ ತರವಂತೆ ನಡೆದುಕೊಳ್ಳಬಾರದು. ನಿಮ್ಮನ್ನು ಇನ್ನೊಬ್ಬರ ಮನೆಗೆ ಇಪ್ಪತ್ತು ದಿನಕ್ಕೆ ಲೀಸ್‌ಗೆ ಕಳುಹಿಸಲು ನಾವು ಬಂದಿಲ್ಲ. ನೀವು ಸುಮ್ಮನಿದ್ದರು ನಿಮ್ಮ ಮನೆಗೆ ಬಂದಿದ್ದಾರೆ. ಕೆಲವರು ಇದ್ದು ಇಲ್ಲಾ ಅನ್ನಿಸಿಕೊಂಡಿದ್ದೀರಾ. ಕೆಲವರು ಮೊದಲೇ ಕಾಣಿಸಿಕೊಂಡಿದ್ದಾರೆ. ಸಮನ್ವಯ ‌ಸಮಿತಿ ಇನ್ನೆರಡು ದಿನಗಳಲ್ಲಿ ರಚನೆಯಾಗಲಿದೆ. ನಾವು ಈಗ ಏನು ಮಾಡಬೇಕು ಎಂಬುದು ಬಿಜೆಪಿಯ ಕಟ್ಟಾಳುಗಳಿಗೆ ಗೊತ್ತು. ನಾವು ಮೈತ್ರಿ ಧರ್ಮವನ್ನು, ನರೇಂದ್ರಮೋದಿ ಅವರನ್ನು ಸದೃಢ ಮಾಡಬೇಕಿದೆ. ಮಾರ್ಗಸೂಚಿಗಳನ್ನು ಪಕ್ಷದ ಹಿರಿಯರು ತೀರ್ಮಾನ ಮಾಡ್ತಾರೆ. ನಾವೆಲ್ಲರೂ ಪ್ರೀತಂಗೌಡರ ಧ್ಚನಿಯಾಗಿದ್ದೇವೆ. ಕಡೂರು ಸೇರಿ ನಮ್ಮ ಜಿಲ್ಲೆಯಲ್ಲಿ 26,559 85 ವರ್ಷದ ಹಿರಿಯ ನಾಗರೀಕರಿದ್ದಾರೆ ಎಂದು ಹೇಳಿದ್ದಾರೆ.

ನಿರುದ್ಯೋಗಿ ಅಂದ್ರೆ ಅದು ರಾಹುಲ್ ಗಾಂಧಿ ಒಬ್ಬರೇ: 70 ವರ್ಷದ ಕಾಂಗ್ರೆಸ್ ಆಡಳಿತ ಟೀಕಿಸಿದ ಮತದಾರ

ನಿಮ್ಮ ಗೆಲುವಿನಲ್ಲಿ ದೇಶದ ಗೆಲುವಿದೆ: ರಾಹುಲ್ ಗಾಂಧಿಗೆ ಸಿಎಂ ಸಿದ್ದರಾಮಯ್ಯ ವಿಶ್

ಲಕ್ಷ್ಮಣ್ ಗೆದ್ದರೆ ನಾನು ಗೆದ್ದಂತೆ. ಕಾಂಗ್ರೆಸ್ ಗೆದ್ದರೆ ಸತ್ಯ ಗೆದ್ದಂತೆ: ಸಿಎಂ ಸಿದ್ದರಾಮಯ್ಯ

- Advertisement -

Latest Posts

Don't Miss