Saturday, July 27, 2024

Latest Posts

ಬರೀ ಪ್ರಚಾರಕ್ಕೆಂದೇ ಸಮಯ ಕಳೆಯುವವರು ಏನು ಅಭಿವೃದ್ಧಿ ಮಾಡುತ್ತಾರೆ..?: ಸಂತೋಷ್ ಲಾಡ್ ಪ್ರಶ್ನೆ..

- Advertisement -

Dharwad News: ಧಾರವಾಡ : ಧಾರವಾಡದಲ್ಲಿ ಸಚಿವ ಸಂತೋಷ್ ಲಾಡ್ ಮಾತನಾಡಿದ್ದು, ಮೋದಿ ಅವರ ಗಾಳಿ ಕಡಿಮೆ ಕಾಣುತ್ತಿದೆ. ಜನರ ನಂಬಿಕೆ ಬಿಜೆಪಿ ಕಳೆದುಕೊಂಡಿದೆ ಎಂದಿದ್ದಾರೆ.

ಸುಳ್ಳು ಹೇಳಿ ಮನಸ್ಸು ಗೆದ್ದಿರುವ ಬಿಜೆಪಿ ಪರ ಜನರು ಇಲ್ಲ. 10 ವರ್ಷ ಏನು ಮಾಡಿದ್ರು ಅನ್ನೋದನ್ನ ಬಿಟ್ಟು ಬರೀ ಟೀಕೆ ಮಾಡುತ್ತಾರೆ. ಇದೇನು ಹೊಸದಲ್ಲ, ಅಮಿತ್ ಶಾ, ಮೋದಿ ಬಂದಾಗ ಲೋಕಲ್ ಒಂದೆರಡು ಹೇಳಿರುತ್ತಾರೆ. ಅದನ್ನೇ ಹೇಳುತ್ತಾರೆ, ಹೊಸದೆನು ಹೇಳಲ್ಲಾ. ಈಗ 40-50 ಸಲ ಬರ್ತಿದಾರೆ. ಕಳೆದ 10ವರ್ಷದಲ್ಲಿ ಬೇರೆ ಬೇರೆ ರಾಜ್ಯದಲ್ಲಿ ಹೋಗಿ ಎಷ್ಟು ಸಮಯ ಕಳೆದಿದ್ದಾರೆ ನೋಡಿ. ಪ್ರಧಾನಿ ಮಂತ್ರಿ ಕೇವಲ ಪ್ರಚಾರಕ್ಕೆ ಮಾತ್ರ ಸಾವಿರಾರು ದಿನ ಸೀಮಿತ ಇಟ್ಟಿದ್ದಾರೆ. ಇವರು ಯಾವ ರೀತಿ ಅಧಿಕಾರ ನಡೆಸುತ್ತಾರೆ ನೀವೇ ಹೇಳಿ ಎಂದು ಲಾಡ್ ಪ್ರಶ್ನಿಸಿದ್ದಾರೆ.

ಪ್ರಧಾನ ಮಂತ್ರಿ ಒಂದೊಂದು ರಾಜ್ಯಕ್ಕೆ 40 ಸಲ ಹೋದ್ರೆ ಯಾವ ರೀತಿ ಪ್ರಚಾರ ಸೀಮಿತ ನೀವೇ ಹೇಳಿ. ಅವರನ್ನ ಬಿಟ್ಟರೆ ಬೇರೆ ಯಾರೂ ಪ್ರಚಾರ ಮಾಡಲ್ವಾ..? ಇವರ ಬಳಿ ಬ್ರಾಂಡ್ ಮೋದಿ ಬಿಟ್ಟರೆ ಬ್ರ್ಯಾಂಡ್ ಇಂಡಿಯಾ ಇಲ್ಲ. ಇಂಡಿಯಾ ಗಿಂತ ಮೋದಿ ದೊಡ್ಡ ಬ್ರ್ಯಾಂಡ್ ಆಗಿ ಮೋದಿಯವರನ್ನು ಕೂರಿಸಿದ್ದಾರೆ. ಈ ಬ್ರ್ಯಾಂಡ್ ನ ಮಾರಬೇಕಿದೆ. ಇಂಡಿಯಾ, ಭಾರತ, ಹಿಂದೂಸ್ತಾನ್ ಏನು ಇಲ್ಲ. ಬ್ರ್ಯಾಂಡ್ ಮೋದಿ ಅಷ್ಟೇನೆ, ಅದನ್ನೇ ತೋರಿಸಿ ಮತ ಕೇಳುವುದು ಬಿಟ್ಟರೆ ಏನು ಇಲ್ಲ. ಪದೇ ಪದೇ ಮಾತನಾಡಿದ್ರೆ ಸರ್ಕಾರ ಬೀಳುತ್ತೆ ಅಂತ ಹೇಳ್ತಾರೆ. ಕೇಂದ್ರದಲ್ಲಿ ಸರ್ಕಾರ ಬಂದಾಗೊಮ್ಮೆ 50-60 ಶಾಸಕರನ್ನು ಖರೀದಿ ಮಾಡುವ ಕೆಲಸ ಮಾಡ್ತಾರೆ. ಹೀಗಾಗಿ ಜನರನ್ನ ನಾವು ಜಾಗೃತಿ ಮಾಡುತ್ತಿದ್ದೇವೆ ಎಂದು ಲಾಡ್ ಹೇಳಿದ್ದಾರೆ.

ಬಿಜೆಪಿ ಏನೇ ಮಾಡಿದ್ರೂ ನನಗೆ ಇಂಟ್ರೆಸ್ಟ್ ಇಲ್ಲ. ಆದ್ರೆ 10ವರ್ಷದಲ್ಲಿ ಇವರು ಏನು ಮಾಡಿದ್ದಾರೆ ಅನ್ನೋದು ಉತ್ತರ ಕೊಡಿ. 27 ಸಾವಿರ ಇದ್ದ ಚಿನ್ನ, ಈಗ 67ಸಾವಿರ ಆಗಿದೆ. 58 ರೂ ಇದ್ದ ಡಾಲರ್ 84 ರೂ ಆಗಿದೆ. ಪ್ರಮುಖ ವಿಷಯಗಳಿಗೆ ಉತ್ತರ ಕೊಡಲಿ. ಅಮಿತ್ ಶಾ ಬಂದು ಈಶ್ವರಪ್ಪ ಕಡೆ ಮಾತನಾಡಿಸಿ ಹೋದ್ರು ಅನ್ನೋದು ನನಗೆ ಇಂಟ್ರೆಸ್ಟ್ ಇಲ್ಲ. ಸ್ವಿಸ್ ಬ್ಯಾಂಕ್ ನಿಂದ 15 ಲಕ್ಷ ಕೊಡ್ತಿವಿ ಎಂದು ಹೇಳಿದ್ರು. ಬುಲೆಟ್ ಟ್ರೈನ್ ಮಾಡ್ತೀವಿ ಅಂತ ಹೇಳಿದ್ರು. 100 ಹೊಸ ಸ್ಮಾರ್ಟ್ ಸಿಟಿ ಮಾಡ್ತೀವಿ ಅಂದಿದ್ರು. ರೈತರ ಸಾಲಮನ್ನಾ ಬಗ್ಗೆ ಹೇಳಿದ್ರು. ಬಾಂಗ್ಲಾದೇಶ ಒಂದು ವರ್ಷದ ಆದಾಯ 2.30 ಲಕ್ಷ ಇದೆ. ನಮ್ಮ ದೇಶದ್ದು 1.80ಲಕ್ಷ ಇದೆ. 2014ರಲ್ಲಿ 97ಸಾವಿರ ಇತ್ತು, 2004ರಲ್ಲಿ 29ಸಾವಿರ ಇತ್ತು. 2004 ರಲ್ಲಿ 700 ಬಿಲಿಯನ್ ಡಾಲರ್ ಜಿಡಿಪಿ ಇತ್ತು. 2014 ರಲ್ಲಿ 2.3ಟ್ರಿಲಿಯಲ್ ಡಾಲರ್ ಮಾಡಿದ್ವಿ. ಚೈನಾ 2 ರಿಂದ 10ಟ್ರಿಲಿಯನ್ ಆಯ್ತು. ಇದರ ಬಗ್ಗೆ ಮಾತನಾಡಿದ್ರೆ ನಮಗೆ ಸಂತೋಷ ಆಗುತ್ತೆ. ಮೋದಿ, ಅಮಿತ್ ಶಾ ಬಂದು ಮಾತನಾಡಿ ಹೋದ್ರೆ ಅವರ ಬಗ್ಗೆ ನನಗೆ ಇಂಟ್ರೆಸ್ಟ್ ಇಲ್ಲ ಎಂದು ಲಾಡ್ ಹೇಳಿದ್ದಾರೆ.

ಸುಬ್ರಹ್ಮಣ್ಯಂ ಸ್ವಾಮಿ ಅವರು ಹೇಳಿದ್ದಾರೆ. ಚೈನಾ 4500ಸ್ಕ್ವೇರ್ ಮೀಟರ್ ಭಾರತದ ಒಳಗೆ ನುಗ್ಗಿದೆ ಅಂತ ಹೇಳಿದ್ದಾರೆ. ಅದರ ಬಗ್ಗೆ ಯಾರೂ ಮಾತನಾಡುವುದಿಲ್ಲ. ವಿಶ್ವಗುರು, ಪವರ್ ಫುಲ್, ಉಕ್ರೇನ್ ರಷ್ಯಾ ನಿಲ್ಲುಸುವಂತವರು. ಚೈನಾ ವನ್ನ ಯಾಕೆ ಎದುರಿಸಲ್ಲ. ಹಿಮಾಚಲಪ್ರದೇಶ 30ಹಳ್ಳಿಗಳಿಗೆ ಚೈನಾ ಹೆಸರು ಇಟ್ಟಿದ್ದಾರೆ. ಇದರ ಬಗ್ಗೆ ಉತ್ತರ ಕೊಡಬೇಕಿದೆ. ಚೈನಾ ದ ಬೀಜಿಂಗ್ ಗೆ ನಿಮ್ಮ ಹೆಸರು ಕೊಡಿ ನೋಡೋಣ. ಚೀನಾದ ಹಳ್ಳಿಗಳಿಗೂ ನಿಮ್ಮ ಹೆಸರು ಭಾರತದ ಹೆಸರು ಕೊಡಿ ನೋಡೋಣ.ಎಲ್ಲಿದೆ ಮತ್ತೆ ನಿಮ್ಮ ಹವಾ ಎಂದು ಪ್ರಶ್ನೆ. ಬಂದು ರೋಡ್ ಶೋ ನಲ್ಲಿ ಏನೋ ಹೇಳಿ ಹೋಗೋದು. ಜನರ ದಿಕ್ಕು ತಪ್ಪಿಸುವುದು ಇದೆ ಆಗಿದೆ. ಎಲೆಕ್ಟ್ರಾನ್ ಬಾಂಡ್ ಬಗ್ಗೆ ಯಾಕೆ ಮಾತನಾಡಿಲ್ಲ, ಹಗಲು ದರೋಡೆ ಮಾಡಿದವರು ಇವರು. ದೇಶ, ಅಭಿಮಾನ, ಹಿಂದುತ್ವ, ಪಾಕಿಸ್ತಾನ, ತಾಲಿಬಾನ್ ಅಂತ ಎಷ್ಟು ಸುಳ್ಳು ಹೇಳ್ತೀರಿ. ದಯಮಾಡಿ ಕೈ ಮುಗಿತಿವಿ ಸಾಕು ಮಾಡಿ ಇದನ್ನ. ದೇಶ ಪ್ರಗತಿ ಆಗಬೇಕು, ಯುವ ಜನತೆಗೆ ಅವಕಾಶ ಸಿಗಬೇಕು ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.

ಅವರ ಮನಸ್ಸು ಒಂದು ಕಡೆ, ದೇಹ ಒಂದು‌ ಕಡೆ ಇದೆ: ಎಸ್‌.ಟಿ.ಸೋಮಶೇಖರ್ ಬಗ್ಗೆ ಕರಂದ್ಲಾಜೆ ಮಾತು

ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲ, ಮೋದಿಗೆ ಬೆಂಬಲಿಸುತ್ತೇನೆ: ಸಂಸದೆ ಸುಮಲತಾ ಅಂಬರೀಷ್

ಇಮ್ರಾನ್ ಖಾನ್ ಪತ್ನಿ ಬುಶ್ರಾ ಬೀಬಿಗೆ ಜೈಲಿನಲ್ಲಿ ವಿಷಪ್ರಾಶನ: ಪಾಕ್ ಮಾಜಿ ಪ್ರಧಾನಿ ಆರೋಪ

- Advertisement -

Latest Posts

Don't Miss