Sunday, June 1, 2025

Latest Posts

ಬಿಜೆಪಿ ಸೇರಲಿದ್ದಾರಾ ನಟ, ನಿರ್ದೇಶಕ ರಿಷಬ್ ಶೆಟ್ಟಿ..? : ಸಿಎಂ ಬೊಮ್ಮಾಯಿ ಹೇಳಿದ್ದೇನು..?

- Advertisement -

ಬೆಂಗಳೂರು: ಮೊನ್ನೆ ತಾನೇ ಕಿಚ್ಚ ಸುದೀಪ್ ಅವರು ಬಿಜೆಪಿಗೆ ಸೇರಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ತಾನು ಯಾವುದೇ ಪಕ್ಷಕ್ಕೆ ಸೇರುವುದಿಲ್ಲ, ಬದಲಾಗಿ ಬಿಜೆಪಿಯವರಿಗೆ ಸಪೋರ್ಟ್ ಮಾಡುತ್ತೇನೆ. ಅವರ ಪರ ಪ್ರಚಾರ ಮಾಡುತ್ತೇನೆ. ನಾನು ಕಷ್ಟಕಾಲದಲ್ಲಿದ್ದಾಗ, ಬೊಮ್ಮಾಯಿ ಮಾಮಾ ನನಗೆ ಸಹಾಯ ಮಾಡಿದ್ದರು. ಹಾಗಾಗಿ ಅವರ ಮನವಿಯ ಮೇರೆಗೆ ನಾನು ಬಿಜೆಪಿಗೆ ಸಪೋರ್ಟ್ ಮಾಡಲಿದ್ದೇನೆ ಎಂದು ಹೇಳಿದ್ದರು.

ಇದೀಗ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಬಿಜೆಪಿ ಸೇರಲಿದ್ದಾರಾ ಅಥವಾ ಬಿಜೆಪಿ ಪರ ಪ್ರಚಾರ ಮಾಡಲಿದ್ದಾರಾ..? ಎಂಬ ಪ್ರಶ್ನೆ ಉದ್ಭವಿಸಿದೆ. ಯಾಕಂದ್ರೆ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ನಟ ರಿಷಬ್‌ ಶೆಟ್ಟಿ ಒಂದೇ ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದು, ಇವರೇನಾದ್ರೂ ಈ ಬಗ್ಗೆ ಚರ್ಚಿಸಿದ್ದಾರಾ ಎಂಬ ಪ್ರಶ್ನೆ ಜನರಲ್ಲಿ ಉದ್ಭವಿಸಿತ್ತು. ಆದರೆ ಇದಕ್ಕೆ ಸಿಎಂ ಬೊಮ್ಮಾಯಿ ಮತ್ತು ರಿಷಬ್ ಇಬ್ಬರೂ ಸ್ಪಷ್ಟನೆ ನೀಡಿದ್ದಾರೆ.

ನನಗೆ ರಾಜಕೀಯ ಬಣ್ಣ ಬೇಡ. ಸದ್ಯ ನಾನು ಕಾಂತಾರ ಬರವಣಿಗೆಯಲ್ಲಿ ತೊಡಗಿಕೊಂಡಿದ್ದೇನೆ. ನಿಮ್ಮೆಲ್ಲರ ಆಶೀರ್ವಾದವಿರಲಿ ಎಂದು ಹೇಳಿದ್ದಾರೆ. ಅದೇ ರೀತಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಬಸವರಾಜ್ ಬೊಮ್ಮಾಯಿ, ಸದ್ಯ ಈ ಬಗ್ಗೆ ಯೋಚನೆ ಮಾಡಲಿಲ್ಲ. ನನಗೆ ರಿಷಬ್ ಕೊಲ್ಲೂರಿಗೆ ಬಂದಿದ್ದೇ ಗೊತ್ತಿರಲಿಲ್ಲ. ಆಕಸ್ಮಿಕವಾಗಿ ನಾವು ಭೇಟಿಯಾಗಿದ್ದು, ರಿಷಬ್ ನಾನು ಒಳ್ಳೆಯ ಸ್ನೇಹಿತರು. ಚುನಾವಣೆ ಬಗ್ಗೆ ಅವರ ಬಳಿ ನಾನು ಮಾತನಾಡಿಲ್ಲ ಎಂದು ಹೇಳಿದ್ದಾರೆ.

ಕೊಲ್ಲೂರು ಮೂಕಾಂಬಿಕೆಯ ದೇವಸ್ಥಾನದಲ್ಲಿ ನಟ ರಿಷಬ್ ಮತ್ತು ಸಿಎಂ ಬೊಮ್ಮಾಯಿ ಭೇಟಿಯಾಗಿದ್ದು, ಕಾಕತಾಳೀಯವಾಗಿದೆ. ರಿಷಬ್ ತತ್ವಸಿದ್ಧಾಂತ, ಬಿಜೆಪಿಯೊಂದಿಗೆ ಹೋಲಿಕೆಯಾಗುವ ಕಾರಣ ಜನರಲ್ಲಿ ಈ ಪ್ರಶ್ನೆ ಉದ್ಭವಿಸಿದೆ. ಅಲ್ಲದೇ ರಿಷಬ್ ಶೆಟ್ಟಿಯವರಿಗೆ ಪ್ರಧಾನಿ ಮೋದಿ ಬಗ್ಗೆ ಉತ್ತಮ ಅಭಿಪ್ರಾಯವಿದ್ದು, ಈ ಮೊದಲು ಅವರು ಖಾಸಗಿ ವಾಹಿನಿಯೊಂದರಲ್ಲಿ ಸಂದರ್ಶನ ಕೊಡುವಾಗ ನರೇಂದ್ರಮೋದಿ ಓರ್ವ ಉತ್ತಮನಾಯಕನೆಂದು ಹೇಳಿದ್ದರು. ಅಲ್ಲದೇ, ಕೆಲ ತಿಂಗಳ ಹಿಂದಷ್ಟೇ ರಿಷಬ್ ಪ್ರಧಾನಿಯವರನ್ನ ಭೇಟಿಯಾಗಿದ್ದರು.

ಕಳೆದ ವರ್ಷ ರಿಲೀಸ್ ಆಗಿದ್ದ ಕಾಂತಾರ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದ್ದು, ವಿಶ್ವದಾದ್ಯಂತ ಸದ್ದು ಮಾಡಿತ್ತು. ಈಗ ಅದರ ಇನ್ನೊಂದು ಭಾಗದ ಬರವಣಿಗೆಯನ್ನ ಮೊನ್ನೆ ಯುಗಾದಿ ದಿನ ಶುರು ಮಾಡಿದ್ದಾರೆ.

ಡಿಕೆಶಿಯನ್ನು ಭೇಟಿ ಮಾಡಿದ ಯೋಗೇಶ್ ಬಾಬು: ಕಾಂಗ್ರೆಸ್ ಸೇರ್ತಾರಾ ರೆಬೆಲ್ ನಾಯಕ..?

‘ಸಂವಿಧಾನ ಜಾರಿಗೆ ಬರದಿದ್ದಿದ್ದರೆ ನಾನು ಸಿಎಂ ಆಗುತ್ತಿರಲಿಲ್ಲ, ಊರಲ್ಲಿ ಕುರಿ ಮೇಯಿಸುತ್ತಿದ್ದೆ’

- Advertisement -

Latest Posts

Don't Miss