ದಕ್ಷಿಣ ಭಾರತದ ಚಲನಚಿತ್ರ ನಟ ದಳಪತಿ ವಿಜಯ್ ವಿರುದ್ಧ ಉತ್ತರ ಪ್ರದೇಶದ ಬರೇಲ್ವಿ ಧರ್ಮಗುರು ಮೌಲಾನಾ ಶಹಾಬುದ್ದೀನ್ ರಜ್ವಿ ಫತ್ವಾ ಹೊರಡಿಸಿದ್ದಾರೆ. ವಿಜಯ್ ಇಸ್ಲಾಂ ವಿರೋಧಿ ಎಂದಿರುವ ಧರ್ಮಗುರು, ತಮಿಳುನಾಡಿನ ಮುಸ್ಲಿಮರು ವಿಜಯ್ ಅವರಿಂದ ದೂರ ಇರಬೇಕೆಂದು ಮೌಲಾನಾ ಸೂಚನೆ ನೀಡಿದ್ದಾರೆ.
ಇನ್ನೂ ಅಖಿಲ ಭಾರತ ಮುಸ್ಲಿಂ ಜಮಾತ್ನ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ, ಟಿವಿಕೆ ತಮಿಳಗ ವೆಟ್ರಿ ಕಳಗಂ ಅಧ್ಯಕ್ಷ ಮತ್ತು ನಟ ವಿಜಯ್ ವಿರುದ್ಧ ಫತ್ವಾ ಹೊರಡಿಸಿದ ಫತ್ವಾದಲ್ಲಿ ದಳಪತಿ ವಿಜಯ್ ಮುಸ್ಲಿಂ ವಿರೋಧಿ. ಈ ನಟನ ಹಿನ್ನೆಲೆ ಮತ್ತು ಇತಿಹಾಸ ಕೂಡ ಇಸ್ಲಾಂ ವಿರೋಧಿಯಾಗಿದೆ. ರೋಜಾ ಇಫ್ತಾರ್ ಸಮಯದಲ್ಲಿ ಕುಡುಕರು, ಜೂಜುಕೋರರು ಮತ್ತು ಸಮಾಜ ವಿರೋಧಿಗಳನ್ನು ಆಹ್ವಾನಿಸುವುದು ಕಾನೂನುಬಾಹಿರ ಮತ್ತು ಪಾಪಕರ ಕೃತ್ಯವಾಗಿದೆ. ಹೀಗಾಗಿ ತಮಿಳುನಾಡಿನ ಮುಸ್ಲಿಮರೇ ಅಂತಹ ವ್ಯಕ್ತಿಯನ್ನು ನಂಬಬೇಡಿ ಮತ್ತು ಅವರನ್ನು ನಿಮ್ಮ ಕಾರ್ಯಕ್ರಮಗಳಿಗೂ ಕರೆಯಬೇಡಿ ಎಂದು ಫತ್ವಾದಲ್ಲಿ ಮೌಲಾನಾ ತಿಳಿಸಿದ್ದಾರೆ.
ಮುಸ್ಲಿಂ ತುಷ್ಟೀಕರಣ ಎಂದ ಮೌಲಾನಾ..
ಅಲ್ಲದೆ ತಮ್ಮ ರಾಜಕೀಯಕ್ಕಾಗಿ ನಟ ವಿಜಯ್ ಅವರು ಚಲನಚಿತ್ರ ರಂಗದಿಂದ ಹೊರ ಬಂದು, ರಾಜಕೀಯ ಲಾಭಕ್ಕಾಗಿ ಮುಸ್ಲಿಂ ಭಾವನೆಗಳನ್ನು ಬಳಸುತ್ತಿದ್ದಾರೆ. ಆದರೆ ಅವರ ಇತಿಹಾಸವು ಮುಸ್ಲಿಂ ವಿರೋಧಿ ಭಾವನೆಗಳಿಂದ ಕೂಡಿದೆ. ಅವರು ನಟಿಸಿದ್ದ ದಿ ಬೀಸ್ಟ್ ಚಿತ್ರದಲ್ಲಿ ಮುಸ್ಲಿಮರು ಮತ್ತು ಇಡೀ ಮುಸ್ಲಿಂ ಸಮುದಾಯವನ್ನು ಭಯೋತ್ಪಾದನೆ ಮತ್ತು ಉಗ್ರವಾದದೊಂದಿಗೆ ಬಿಂಬಿಸಿದ್ದಾರೆ. ಇನ್ನೂ ಈ ಚಿತ್ರದಲ್ಲಿ ವಿಜಯ್ ಮುಸ್ಲಿಮರನ್ನು ಕೆಟ್ಟದಾಗಿ ತೋರಿಸಲು ಪ್ರಯತ್ನಿಸಿದ್ದಾರೆ. ಈಗ ಅವರು ರಾಜಕೀಯಕ್ಕೆ ಪ್ರವೇಶಿಸುತ್ತಿರುವುದರಿಂದ ಮತ್ತು ಅವರಿಗೆ ಮುಸ್ಲಿಂ ಮತಗಳು ಬೇಕಾಗಿರುವುದರಿಂದ ಈಗ ಮುಸ್ಲಿಂ ತುಷ್ಟೀಕರಣವಕ್ಕೆ ಮುಂದಾಗಿದ್ದಾರೆ. ಇಷ್ಟೇ ಅಲ್ಲದೆ ಅವರು ಇಸ್ಲಾಂ ಧರ್ಮ ಮತ್ತು ಮುಸ್ಲಿಮರನ್ನು ಗುರಿಯಾಗಿಸಿಕೊಂಡಿರುವ ಸಿನಿಮಾಗಳನ್ನೂ ಮಾಡಿದ್ದಾರೆ ಎಂದು ಮೌಲಾನಾ ದೂರಿದ್ದಾರೆ.
ಇಫ್ತಾರ್ ನಿಯಮ ಉಲ್ಲಂಘನೆ ಆರೋಪ..!
ಇನ್ನೂ ಇತ್ತೀಚೆಗೆ ನಟ ವಿಜಯ್ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿಯೂ ಸಹ ಆ ಇಫ್ತಾರ್ ಮತ್ತು ರಂಜಾನ್ನ ಪಾವಿತ್ರ್ಯವನ್ನು ಕಡೆಗಣಿಸಿದ್ದಾರೆ. ಇಸ್ಲಾಂನ ತತ್ವಗಳಿಗೆ ವಿರುದ್ಧವಾಗಿರುವ ವ್ಯಕ್ತಿಗಳನ್ನು ಇಫ್ತಾರ್ಗೆ ಕರೆಯಲಾಗಿತ್ತು. ಇದರಲ್ಲಿ ಮದ್ಯಪಾನಿಗಳು ಹಾಗೂ ರೌಡಿಗಳು ಪಾಲ್ಗೊಂಡಿದ್ದರು. ಅಲ್ಲದೆ ಅವರು ಉಪವಾಸ ಆಚರಿಸುತ್ತಿರಲಿಲ್ಲ, ಜೊತೆಗೆ ಇಸ್ಲಾಮಿಕ್ ಪದ್ಧತಿಗಳನ್ನು ಅನುಸರಿಸುತ್ತಿರಲಿಲ್ಲ. ಈ ವಿಚಾರಕ್ಕಾಗಿ ತಮಿಳುನಾಡಿನ ಸುನ್ನಿ ಮುಸ್ಲಿಮರು ಅವರ ವಿರುದ್ಧ ಪೊಲೀಸರಿಗೆ ದೂರು ಕೂಡ ನೀಡಿದ್ದರು. ಇನ್ನೂ ಅವರ ಕಾರ್ಯಕ್ರಮಗಳಿಗೆ ಹೋಗಬೇಡಿ ಅಥವಾ ನಿಮ್ಮ ಧಾರ್ಮಿಕ ಕಾರ್ಯಕ್ರಮಗಳಿಗೆ ಅವರನ್ನು ಆಹ್ವಾನಿಸಬೇಡಿ ಎಂದು ಮೌಲಾನಾ ಶಹಾಬುದ್ದೀನ್ ರಜ್ವಿ ಹೊರಡಿಸಿರುವ ಫತ್ವಾದಲ್ಲಿ ಸೂಚಿಸಲಾಗಿದೆ. ಇ
ಏನಿದು ವಿವಾದ..?
ಕಳೆದ ಮಾರ್ಚ್ 7ರಂದು, ರಂಜಾನ್ ತಿಂಗಳ ಸಂದರ್ಭದಲ್ಲಿ, ನಟ ವಿಜಯ್ ಚೆನ್ನೈನ ರಾಯಪೆಟ್ಟಾದ ವೈಎಂಸಿಎ ಕ್ರೀಡಾಂಗಣದಲ್ಲಿ ತಮ್ಮ ಟಿವಿಕೆ ಪಕ್ಷದ ವತಿಯಿಂದ ಇಫ್ತಾರ್ ಕೂಟ ಆಯೋಜಿಸಿದ್ದರು. ಅವರು ಬಿಳಿ ಉಡುಪು ಮತ್ತು ಮುಸ್ಲಿಂ ಟೋಪಿ ಧರಿಸಿ, ಮುಸ್ಲಿಂ ಸಂಪ್ರದಾಯದಂತೆ ನಮಾಜ್ನಲ್ಲಿ ಭಾಗವಹಿಸಿ, ಉಪವಾಸ ಆಚರಿಸಿದ್ದರು. ವಿಜಯ್ ಇಡೀ ದಿನ ಉಪವಾಸವಿದ್ದು, ಸುಮಾರು 3,000 ಜನರಿಗೆ ಔತಣಕೂಟವನ್ನು ಏರ್ಪಡಿಸಿದ್ದರು, ಇದರಲ್ಲಿ 15 ಸ್ಥಳೀಯ ಮಸೀದಿಗಳ ಇಮಾಮ್ಗಳು ಭಾಗವಹಿಸಿದ್ದರು. ಈ ವೇಳೆ ಇಫ್ತಾರ್ನ ನಿಯಮಗಳನ್ನು ಪಾಲನೆ ಮಾಡಿಲ್ಲ ಎನ್ನುವುದು ಮೌಲ್ವಿಯ ಆರೋಪಿಯ ಆರೋಪವಾಗಿದೆ. ಇನ್ನೂ ತಾವು ಅಭಿನಯಿಸಿದ್ದ ಚಿತ್ರವೇ ತಮ್ಮ ರಾಜಕೀಯದ ಆರಂಭಕ್ಕೆ ಅಡ್ಡಿಯಾಯ್ತಾ ಎನ್ನುವ ಪ್ರಶ್ನೆಗಳು ಈಗ ವಿಜಯ್ ಅಭಿಮಾನಿಗಳಲ್ಲಿ ಮೂಡುತ್ತಿದೆ. ಅದರಲ್ಲಿ ಮನರಂಜನೆಗಾಗಿ ಮಾಡಿರುವ ಪಾತ್ರ ವಿಜಯ್ಗೆ ನಿಜವಾದ ಹೊಡೆತವನ್ನೇ ನೀಡಿದಂತಾಗಿದೆ.