ಹಿಂದೂಗಳ ಪೂಜೆಯಲ್ಲಿ ಪ್ರಥಮ ಪ್ರಾಶಸ್ತ್ಯ ಪಡೆಯುವ ವಸ್ತು ಅಂದರೆ ತುಳಸಿ. ತುಳಸಿಯನ್ನ ಆಹಾರಕ್ಕೆ ಹಾಕಿ ನೈವೇದ್ಯ ಮಾಡುತ್ತಾರೆ. ಕೃಷ್ಣನಿಗೆ ತುಲಾಭಾರ ಮಾಡುವಾಗ ಎಷ್ಟೆಲ್ಲ ಚಿನ್ನಾಭರಣವನ್ನಿಟ್ಟರೂ ಅದು ಸಮನಾಗಲಿಲ್ಲ. ಆದ್ರೆ ತುಳಸಿ ಇರಿಸಿದ ಮೇಲಷ್ಟೇ ಅದು ಸಮನಾಯಿತು. ಹಾಗಾದ್ರೆ ತುಳಸಿ ಅಂದರೆ ಯಾರು..? ತುಳಸಿ ಹುಟ್ಟಿದ್ದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ,..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಎಷ್ಟೇ ಭಕ್ಷ್ಯಭೋಜನವನ್ನಿರಿಸಿದರೂ, ಸಾವಿರ ತರಹದ ಹೂವನ್ನು ತಂದು ಮುಡಿಸಿದರೂ, ತರಹ ತರಹದ ಅಲಂಕಾರ ಮಾಡಿದರೂ, ತುಳಸಿ ಇಲ್ಲದ ಪೂಜೆಯನ್ನ ಹರಿ ಒಪ್ಪಿಸಿಕೊಳ್ಳುವುದಿಲ್ಲವೆಂಬ ಮಾತು ಪುರಾಣದಲ್ಲಿ ಹೇಳಲಾಗಿದೆ. ಯಾವ ನೈವೈದ್ಯವನ್ನಿರಿಸದಿದ್ದರೂ, ಹೂವು ಹಾಕದಿದ್ದರೂ, ತುಳಸಿ ಅರ್ಪಿಸಿ, ಕೃಷ್ಣಾರ್ಪಣಮಸ್ತು ಅಂದರೆ ಸಾಕು, ವಿಷ್ಣು ಪ್ರಸನ್ನನಾಗುತ್ತಾನೆ.

ಇಂಥ ತುಳಸಿ ಯಾರು ಎಂಬ ಪ್ರಶ್ನೆಗೆ ಉತ್ತರ, ವೃಂದಾ. ತುಳಸಿದೇವಿಯ ಮೂಲ ಹೆಸರು ವೃಂದಾದೇವಿ. ಈಕೆ ಕಾಳನೇಮಿ ಅನ್ನೋ ರಾಕ್ಷಸನ ಮಗಳು. ಈಕೆ ರಾಕ್ಷಸನ ಮಗಳಾಗಿದ್ದರೂ, ವಿಷ್ಣುವಿನ ಪರಮ ಭಕ್ತೆಯಾಗಿದ್ದಳು. ಈಕೆಯ ಭಕ್ತಿ ಕಾಳನೇಮಿಗೆ ಅಸೂಯೇ ಮೂಡಿಸುತ್ತಿತ್ತು. ಹೀಗಾಗಿ ಆತ ಜಲಂಧರ ಎಂಬ ರಾಕ್ಷಸನೊಂದಿಗೆ ವೃಂದಾಳ ವಿವಾಹ ಮಾಡಿಸುತ್ತಾನೆ. ವಿವಾಹದ ಬಳಿಕವೂ ವೃಂದಾ ವಿಷ್ಣುವಿನ ಪೂಜೆ ಮುಂದುವರಿಸುತ್ತಾಳೆ. ಅಲ್ಲದೇ, ಮಹಾಪತಿವೃತೆಯೂ ಆಗಿರುತ್ತಾಳೆ.

ಆಕೆ ಮಹಾಪತಿವೃತೆಯಾದ ಕಾರಣ ಮತ್ತು ಪರಮೇಶ್ವರದ ಅಂಶವಾದ ಕಾರಣ ಜಲಂಧರನಿಗೆ ಯಾರೂ ಏನೂ ಮಾಡಲಾಗುವುದಿಲ್ಲ. ಶಿವನ ಅಂಶದಿಂದ ಜನಿಸಿದವ ರಾಕ್ಷಸನಾಗಲು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಉತ್ತರ, ಆತ ಶಿವನ ಸಿಟ್ಟಿನ ಅಂಶ. ಹೀಗಾಗಿ ಆತನಲ್ಲಿ ದುಷ್ಟಅಂಶಗಳೇ ಹೆಚ್ಚಾಗಿರುತ್ತದೆ.
ಈತನ ಸಂಹಾರ ಮಾಡದಿದ್ದರೆ ಲೋಕಕ್ಕೆ ಕಂಠಕವಾಗುವುದೆಂದು ಅರಿತ ನಾರದರು, ಆತನ ಬಳಿ ಹೋಗಿ ಪಾರ್ವತಿ ನಿನಗೆ ಸೇರಬೇಕಾದವಳು ಎಂದು ಹೇಳುತ್ತಾರೆ. ಇದಕ್ಕೆ ಕಿವಿಗೊಟ್ಟ ರಾಕ್ಷಸ, ಪಾರ್ವತಿಯನ್ನ ಪಡೆಯಲು ಶಿವನ ರೂಪ ಧರಿಸಿ ಕೈಲಾಸಕ್ಕೆ ತೆರಳುತ್ತಾನೆ. ಆದರೆ ಪಾರ್ವತಿಗೆ ಶಿವನ ರೂಪದಲ್ಲಿ ಬಂದಿರುವುದು ರಾಕ್ಷಸನೆಂದು ತಿಳಿಯುತ್ತದೆ. ಆಕೆ ಆತನಿಗೆ ಶಾಪ ನೀಡುತ್ತಾಳೆ. ನೀನು ಹೇಗೆ ನನ್ನನ್ನು ಪಡೆಯಲು ವೇಷ ಮರೆಸಿ ಬಂದೆಯೋ ಅದೇ ರೀತಿ ನಿನ್ನ ಪತ್ನಿಯ ಬಳಿ ಬೇರೆಯವರು ಮಾರುವೇಷದಲ್ಲಿ ಬರಲಿ ಎಂದು ಪಾರ್ವತಿ ಶಾಪ ನೀಡುತ್ತಾಳೆ.
ಜಲಂಧರನ ಈ ಕೆಲಸ ಕಂಡ ಶಿವ ಕೋಪಗೊಳ್ಳುತ್ತಾನೆ. ಶಿವ ಜಲಂಧರನ ಬಳಿ ಹೋರಾಡುತ್ತಾನೆ. ಆದರೂ ಶಿವನಿಗೆ ಜಲಂಧರನನ್ನು ಸೋಲಿಸಲಿಕ್ಕಾಗುವುದಿಲ್ಲ. ಆಗ ವಿಷ್ಣು ಜಲಂಧರನ ವೇಷ ಧರಿಸಿ, ವೃಂದಾಳ ಬಳಿ ಹೋಗಿ ಆಕೆಯ ಪಾತಿವೃತ್ಯ ಹಾಳು ಮಾಡುತ್ತಾನೆ. ತದನಂತರ ಶಿವ ಜಲಂಧರನನ್ನು ಸೋಲಿಸಿ, ಸಾಯಿಸುತ್ತಾನೆ.
ಇತ್ತ ವೃಂದಾಳಿಗೆ ತನ್ನ ಜೊತೆ ಕಾಲ ಕಳೆದಿದ್ದು, ಜಲಂಧರನಲ್ಲ, ವಿಷ್ಣು ಎಂಬುದು ಗೊತ್ತಾಗಿ, ವಿಷ್ಣು ಭೂಲೋಕದಲ್ಲಿ ಎಲ್ಲೂ ಪೂಜಿಸಲ್ಪಡದೇ ಇರಲಿ ಮತ್ತು ಆತನಿಗೂ ಪತ್ನಿ ಇಲ್ಲದ ಏಕಾಂತದ ಜೀವನ ಸಿಗಲಿ ಎಂದು ಶಾಪ ಹಾಕಿ, ನಿಂತ ಜಾಗದಲ್ಲೇ ಬೂದಿಯಾಗುತ್ತಾಳೆ. ಅದೇ ಬೂದಿಯಿಂದ ತುಳಸಿ ಗಿಡ ಉದ್ಭವವಾಗುತ್ತದೆ. ಹೀಗೆ ತುಳಸಿಯ ಜನನವಾಗುತ್ತದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ