ಕಲಬುರ್ಗಿ: ಸಿದ್ದು ಕುಡಿದಾಗ ಒಂದು ಮಾತನಾಡುತ್ತಾರೆ, ಕುಡಿಯದೆ ಇದ್ದಾಗ ಇನ್ನೊಂದು ಮಾತನಾಡುತ್ತಾರೆ ಎಂದು ಕೆ ಎಸ್ ಈಶ್ವರಪ್ಪ ಸಿದ್ದುಗೆ ಟಾಂಗ್ ನೀಡಿದ್ದಾರೆ. ಸಿದ್ದರಾಮಯ್ಯ ಬಿಜೆಪಿಯ ರಾಜ್ಯಾಧ್ಯಕ್ಷ ನವೀನ್ ಕುಮಾರ್ ಕಟೀಲ್ ಭಯೋತ್ಪಾದಕ ಎಂದು ಹೇಳಿರುವ ಹೇಳಿಕೆಗೆ ಕಲಬುರ್ಗಿಯಲ್ಲಿ ಕೆ ಎಸ್ ಈಶ್ವರಪ್ಪ ಸಿದ್ದರಾಮಯ್ಯ ಯಾವಾಗ ಕುಡಿಯುತ್ತಾರೆ, ಯಾವಾಗ ಕುಡಿಯುವುದಿಲ್ಲ ಎಂದು ತಿಳಿಯುವುದೇ ಇಲ್ಲ. ಕುಡಿದಾಗ ಒಂದು ತರಹ ಮಾತನಾಡುತ್ತಾರೆ ಕುಡಿಯದೆ ಇದ್ದಾಗ ಇನ್ನೊಂದು ತರ ಮಾತನಾಡುತ್ತಾರೆ. ಮಾಜಿ ಮುಖ್ಯಮಂತ್ರಿಯಾಗಿದ್ದು ಈ ರೀತಿ ಮಾತನಾಡುವುದು ಸರಿಯಲ್ಲ . ನವೀನ್ ಕುಮಾರ್ ಕಟೀಲ್ ಅವರನ್ನು ಭಯೋತ್ಪಾದಕ ಎನ್ನುವುದು, ಜಮೀರ್ ಅಹ್ಮದ್ ಅನ್ನು ಹೊಗಳುತ್ತಾರೆ ಅದು ಇವರ ದೇಶಭಕ್ತಿಯ ಬಗ್ಗೆ ತಿಳಿಸುತ್ತದೆ. ನವೀನ್ ಕುಮಾರ್ ಕಟೀಲ್ ಅಪ್ಪಟ ದೇಶಭಕ್ತ, ಮೋಸಕ್ಕೆ ಮತ್ತೊಂದು ಹೆಸರು ಸಿದ್ದರಾಮಯ್ಯ, ಇವರು ಜೆಡಿಎಸ್ ಗೆ ಮೋಸ ಮಾಡಿದ್ದಾರೆ ಹಾಗೂ ಶ್ರೀನಿವಾಸ್ ಪ್ರಸಾದ್ ಗೆ ಮೋಸ ಮಾಡಿದ್ದಾರೆ. ಅವರ ರಕ್ತ ಕಣಕಣದಲ್ಲೂ ಮೋಸ ಇದೆ ಎಂದು ಕೆ ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.