ಗುರುಗ್ರಾಮ್: ಇಲ್ಲೊಬ್ಬ ಚಾಲಾಕಿ ವಂಚಕ ಚಿನ್ನಾಭರಣದ ಅಂಗಡಿಯವರನ್ನೇ ಮೋಸ ಮಾಡಿ ಬರೋಬ್ಬರಿ 2 ಲಕ್ಷದ ಚಿನ್ನದ ನಾಣ್ಯಗಳನ್ನು ಎಗರಿಸಿಕೊಂಡು ಹೋಗಿದ್ದಾನೆ.
ಹೌದು ಗುರುಗ್ರಾಮದ ಚಿನ್ನಾಭರಣ ಮಳಿಗೆಗೆ ಬಂದಿದ್ದಂತಹ ಅಪರಿಚಿತ ವ್ಯಕ್ತಿಯೊಬ್ಬ ಚಿನ್ನದ ನಾಣ್ಯಗಳನ್ನು ಕೊಂಡುಕೊಳ್ಳುವುದಾಗಿ ಹಾಗೂ ಹಣವನ್ನು ಆನ್ಲೈನ್ ಮೂಲಕ ಪಾವತಿ ಮಾಡುವುದಾಗಿ ಹೇಳಿದ್ದಾನೆ ಇದಕ್ಕೆ ಒಪ್ಪಿದಂತಹ ಅಂಗಡಿಯ ಮಾಲೀಕರಾದ ಅನುರಾದ ಪತಿಯ ಬ್ಯಾಂಕ್ ದಾಖಲೆಗಳನ್ನು ನೀಡಿದ್ದಾರೆ.
ಚಿನ್ನವನ್ನು ಪಡೆದುಕೊಂಡಿರುವ ಅಪರಿಚಿತ ವ್ಯಕ್ತಿ ಚಿನ್ನಾಭರಣ ಅಂಗಡಿ ಮಾಲಿಕರಿಗೆ ಹಣ ಪಾವತಿಯಾಗಿದೆ ಎಂದು ಸ್ಕ್ರೀನ್ ಶಾಟ್ ತೋರಿಸಿ ಅಲ್ಲಿಂದ ಹೊರನಡೆದಿದ್ದಾನೆ. ಕೆಲ ಸಮಯದ ನಂತರ ಪರಿಶೀಲಿಸಿದಾಗ ತಿಳಿದು ಬಂದಿರುವ ವಿಷಯವೇನೆಂದರೆ ಹಣ ಪಾವತಿಯಾಗಿಲ್ಲ ನಮಗೆ ಅವನು ಮೋಸ ಮಾಡಿದ್ದಾನೆ ಎಂದು.
ಭೀಮ್ ಗಡ್ ಖೇರಿ ನಿವಾಸಿಯಾಗಿರುವ ಆಭರಣ ಮಳಿಗೆಯ ಮಾಲೀಕರಾದ ಅನುರಾಧ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ, “ನನ್ನ ಪತಿ ಮುಖೇಶ್ ಕುಮಾರ್ ಆಗ ಆಸ್ಪತ್ರೆಯಲ್ಲಿದ್ದರು. ನಾನು ಅವರ ಬ್ಯಾಂಕ್ ಖಾತೆಯ ವಿವರಗಳನ್ನು ನಾಣ್ಯವನ್ನು ಖರೀದಿಸಿದ ಅಪರಿಚಿತ ವ್ಯಕ್ತಿಗೆ ನೀಡಿದೆ ಮತ್ತು ಪಾವತಿ ಯಶಸ್ವಿಯಾಗಿದೆ ಎಂದು ಆ ವ್ಯಕ್ತಿ ನನಗೆ whats app ನಲ್ಲಿ ಸ್ಕ್ರೀನ್ಶಾಟ್ ಕಳುಹಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.ನಂತರ ಅವರು ಖಾತೆಯನ್ನು ಪರಿಶೀಲಿಸಿದಾಗ, ಅಂತಹ ಯಾವುದೇ ಪಾವತಿಗಳು ಕ್ರೆಡಿಟ್ ಆಗಿಲ್ಲ ಎಂದು ತಿಳಿದುಬಂದಿದೆ ಎಂದು ಆಭರಣ ಮಳಿಗೆಯ ಮಾಲೀಕರಾದ ಅನುರಾಧ ಪೊಲೀಸರಿಗೆ ಹೇಳಿದರು.
ಹಣಕ್ಕಾಗಿ ಅವನನ್ನು ಸಂಪರ್ಕ ಮಾಡಿದಾಗ ಅವನು ಮೆಹತ್ ನಲ್ಲಿಇರುವುದಾಗಿ ಇಲ್ಲಗೆ ಬನ್ನಿಎಂದು ಹೇಳಿದ್ದಾನೆ ಆದರೆ ಹಣ ಪಾವತಿ ,ಮಾಡಿಲ್ಲ.
Siddaramaiah : ದಲಿತರ ಹಿತ ಕಾಪಾಡುವಲ್ಲಿ ರಾಜಿ ಇಲ್ಲ: ಸಿಎಂ ಸಿದ್ದರಾಮಯ್ಯ
HD Kumaraswamy : ಕಾಂಗ್ರೆಸ್ ನಿಂದ ಐಎಎಸ್ ಅಧಿಕಾರಿಗಳ ದುರ್ಬಳಕೆ – ಕುಮಾರಸ್ವಾಮಿ ಗಂಭೀರ ಆರೋಪ