Thursday, June 19, 2025

Latest Posts

ತುಳಸಿದಾಸರ ಪ್ರಕಾರ, ಈ 9 ಜನರೊಂದಿಗೆ ಎಂದಿಗೂ ಶತ್ರುತ್ವ ಕಟ್ಟಿಕೊಳ್ಳಬಾರದಂತೆ.. ಭಾಗ 1

- Advertisement -

Spiritual: ನಾವು ಜೀವನದಲ್ಲಿ ನೆಮ್ಮದಿಯಾಗಿರಬೇಕು ಅಂದ್ರೆ, ನಾವಾಯಿತು, ನಮ್ಮ ಕೆಲಸವಾಯಿತು ಎಂದು ಇರಬೇಕು. ಆದರೆ ಕೆಲವೊಮ್ಮೆ ಹಣೆಬರಹ ಕೆಟ್ಟು ಕೆಲವರೊಂದಿಗೆ ಜಗಳವಾಗಬಹುದು. ಆದರೆ ಅದನ್ನು ಮುಂದುವರಿಸಿಕೊಂಡು ಹೋಗಬಾರದು. ಇನ್ನು ತುಳಸಿದಾಸರ ಪ್ರಕಾರ ಈ 9 ಜನರೊಂದಿಗೆ ಎಂದಿಗೂ ಶತೃತ್ವ ಕಟ್ಟಿಕೊಳ್ಳಬಾರದಂತೆ. ಹಾಗಾದರೆ ಯಾರು ಆ 9 ಜನ ಅಂತಾ ತಿಳಿಯೋಣ ಬನ್ನಿ..

ತಂದೆ ತಾಯಿಗಳೊಂದಿಗೆ. ನಿಮ್ಮ ಹೆತ್ತವರೊಂದಿಗೆ ಎಂದಿಗೂ ದ್ವೇಷ ಸಾಧಿಸಬೇಡಿ. ಏಕೆಂದರೆ ಅವರು ನಿಮಗಾಗಿಯೇ ಜೀವನವನ್ನು ಮುಡಿಪಾಗಿ ಇಟ್ಟಿರುತ್ತಾರೆ. ತಮ್ಮ ಆಸೆ ಆಕಾಂಕ್ಷೆಗಳನ್ನ ಬದಿಗಿಟ್ಟು, ನಿಮಗಾಗಿ ಹಗಲು ರಾತ್ರಿ ದುಡಿದಿರುತ್ತಾರೆ. ನಿಮ್ಮ ಮೇಲೆ ಜೀವವನ್ನೇ ಇಟ್ಟಿರುತ್ತಾರೆ. ಮಕ್ಕಳು ಮಾಡಿದ ತಪ್ಪಿಗೆ ಒಂದೆರಡು ಮಾತು ಬೈಯ್ಯಬಹುದೇ ವಿನಃ, ಕನಸಿನಲ್ಲೂ ನಿಮಗೆ ಕೆಟ್ಟದ್ದನ್ನು ಬಯಸುವುದಿಲ್ಲ.

ಗುರುವಿನೊಂದಿಗೆ. ಗುರುವಿಗೆ ನಿಮ್ಮ ಭವಿಷ್ಯದ ಬಗ್ಗೆ ಸರಿಯಾಗಿ ತಿಳಿದಿರುತ್ತದೆ. ನಿಮಗೆ ಯಾವ ವಿಷಯದ ಬಗ್ಗೆ ಜ್ಞಾನವಿದೆ. ಯಾವ ವಿಷಯದ ಬಗ್ಗೆ ಜ್ಞಾನವಿಲ್ಲವೆಂದು ಅವರಿಗೆ ಗೊತ್ತಿರುತ್ತದೆ. ಅಂಥವರೊಂದಿಗೆ ನೀವು ದ್ವೇಷ ಸಾಧಿಸಿದರೆ, ಅವರು ನಿಮ್ಮನ್ನು ಸುಲಭವಾಗಿ ಸೋಲಿಸುತ್ತಾರೆ.

ಶಸ್ತ್ರಾಸ್ತ್ರ ಉಳ್ಳವನು. ಶಸ್ತ್ರಾಸ್ತ್ರ ಉಳ್ಳವನ ಬಳಿ ದ್ವೇಷ ಸಾಧಿಸಬಾರದು ಅನ್ನೋದಕ್ಕೆ ಕಾರಣ, ಆ ಶಸ್ತ್ರದಿಂದ ಅವನು ನಿಮಗೆ ತೊಂದರೆ ಮಾಡಬಹುದು. ಅಥವಾ ನಿಮ್ಮ ಪ್ರಾಣಕ್‌ಕೆ ಹಾನಿಯೂ ಮಾಡಬಹುದು. ಹಾಗಾಗಿ ಶಸ್ತ್ರಾಸ್ತ್ರ ಇರುವವನ ಬಳಿ ದ್ವೇಷ ಸಾಧಿಸಬಾರದು.

ನಿಮ್ಮ ಬಗೆಗಿನ ರಹಸ್ಯ ತಿಳಿದವನೊಂದಿಗೆ. ನಿಮ್ಮ ಬಗ್ಗೆ ಯಾರಿಗಾದರೂ ರಹಸ್ಯ ತಿಳಿದಿದ್ದರೆ, ಅಂಥವರೊಂದಿಗೆ ದ್ವೇಷ ಸಾಧಿಸಬೇಡಿ. ಏಕೆಂದರೆ ಅವರು ನಿಮ್ಮ ರಹಸ್ಯವನ್ನು ಇನ್ನೊಬ್ಬರೊಂದಿಗೆ ಹಂಚಿಕೊಂಡರೆ, ನಿಮ್ಮ ಮರ್ಯಾದೆ ಹೋಗಬಹುದು. ನಿಮ್ಮ ಜೀವನವೇ ನಾಶವಾಗಬಹುದು. ಹಾಗಾಗಿ ಒಂದು ನೀವು ಯಾರಲ್ಲಿಯೂ ನಿಮ್ಮ ರಹಸ್ಯವನ್ನು ಹೇಳಬಾರದು. ಅಥವಾ ಆ ರಹಸ್ಯ ಗೊತ್ತಿದ್ದವರ ಬಳಿ ದ್ವೇಷ ಸಾಧಿಸಬಾರದು.

ಮೂರ್ಖರೊಂದಿಗೆ. ಮೂರ್ಖರಿಗೆ ತಮ್ಮ ಜೀವನ ಹೇಗಿದೆ..? ತಾವು ಯಾವ ಪರಿಸ್ಥಿತಿಯಲ್ಲಿದ್ದೇವೆ. ತಮ್ಮ ಜೊತೆ ಒಳ್ಳೆಯದಾಗುತ್ತಿದೆಯೋ, ಕೆಟ್ಟದ್ದಾಗುತ್ತಿದೆಯೋ ಎಂಬುದನ್ನ ಅರಿತುಕೊಳ್ಳುವಷ್ಟು ಜ್ಞಾನವಿರುವುದಿಲ್ಲ. ಹಾಗಾಗಿ ಅಂಥವರೊಂದಿಗೆ ನೀವು ದ್ವೇಷ ಸಾಧಿಸಿದರೆ, ನಿಮಗೆ ಅದರಿಂದ ನಷ್ಟವಾಗುತ್ತದೆಯೇ, ಹೊರತು ಲಾಭವೇನು ಇಲ್ಲ.

ಇನ್ನುಳಿದವರ ಬಗ್ಗೆ ಮುಂದಿನ ಭಾಗದಲ್ಲಿ ತಿಳಿಯೋಣ.

ಶಾಂತ ಸ್ವರೂಪಿ ಸೀತಾದೇವಿ ರಣಚಂಡಿ ಅವತಾರ ತಾಳಲು ಕಾರಣವೇನು..?

ನೀವು ಶ್ರೀಮಂತರಾಗಬೇಕು ಎಂದಲ್ಲಿ, ವಿದುರನ ಈ ಮಾತು ಕೇಳಿ..

ಮುಟ್ಟಾದ ಮೂರು ದಿನಗಳವರೆಗೂ ಹೆಣ್ಣು ಮಕ್ಕಳು ತಲೆ ಸ್ನಾನ ಮಾಡಬಾರದು.. ಯಾಕೆ ಗೊತ್ತಾ..?

- Advertisement -

Latest Posts

Don't Miss