Tuesday, October 22, 2024

Latest Posts

ವಿರಾಟ್‌ನನ್ನು ಅಪ್ಪಿಕೊಂಡು ನಿಯಮ ಉಲ್ಲಂಘಿಸಿದ ಅಭಿಮಾನಿ: ನರೇಂದ್ರ ಹಿರ್ವಾನಿ ಪೊಲೀಸರ ವಶಕ್ಕೆ

- Advertisement -

Sports News: ಇಂದೋರ್‌ನಲ್ಲಿ ನಡೆಯುತ್ತಿರುವ ಭಾರತ್- ಅಪ್ಘಾನಿಸ್ತಾನ್ ಪಂದ್ಯದ ವೇಳೆ, ಕೊಹ್ಲಿ ಅಭಿಮಾನಿಯೊಬ್ಬ ನಿಯಮ ಉಲ್ಲಂಘಿಸಿ, ವಿರಾಟ್‌ನನ್ನು ಬಂದು ತಬ್ಬಿಕೊಂಡಿದ್ದಾನೆ. ಹೀಗಾಗಿ ಮಧ್ಯಪ್ರದೇಶ ಪೊಲೀಸರು ಆ ಅಭಿಮಾನಿಯನ್ನು ವಶಕ್ಕೆ ಪಡೆದಿದ್ದಾರೆ.

ಟಿಕೇಟ್ ಖರೀದಿಸಿ ಪಂದ್ಯ ವೀಕ್ಷಿಸಿಲು ಬಂದಿದ್ದ ವೀರಾಟ್ ಫ್ಯಾನ್ ನರೇಂದ್ರ ಹಿರ್ವಾನಿ ಎಂಬಾತ, ನಿಯಮ ಉಲ್ಲಂಘನೆ ಮಾಡಿ, ಮೈದಾನಕ್ಕೆ ಹಾರಿ ಬಂದು, ವಿರಾಟ್‌ನ ಕಾಲಿಗೆ ಬಿದ್ದು, ಬಳಿಕ ವಿರಾಟ್‌ನನ್ನು ತಬ್ಬಿಕೊಂಡಿದ್ದಾನೆ. ಈತ ಗ್ಯಾಲರಿಯಿಂದ ಜಿಗಿದು ಬಂದು, ಈ ರೀತಿ ಮಾಡಿದ್ದು, ನೆಚ್ಚಿನ ಆಟಗಾರನಿಗೆ ಮುಟ್ಟಿದ್ದಕ್ಕಾಗಿ, ಭಾವುಕನಾಗಿದ್ದಾನೆ.

ಈ ಅಭಿಮಾನಿಯನ್ನು ಮಧ್ಯಪ್ರದೇಶ ಪೊಲೀಸರು ವಶಕ್ಕೆ ಪಡೆದಿದ್ದು, ತುಕೋಗಂಜ್ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗಿದೆ. ಶೀಘ್ರದಲ್ಲೇ ನರೇಂದ್ರನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ಸಚಿನ್‌ ಟೆಂಡೂಲ್ಕರ್‌ಗೆ ಆಹ್ವಾನ

ಇಸ್ರೇಲ್ ಸೈನಿಕರಿಗೆ ಬೆಂಬಲಿಸಿದ್ದಕ್ಕೆ, ಸೌತ್ ಆಫ್ರಿಕಾ U19 ತಂಡದ ನಾಯಕ ವಜಾ

ಈ ಸಲ ಕಪ್ ಆರ್‌ಸಿಬಿಯದ್ದೇ ಎಂದು ಭವಿಷ್ಯ ನುಡಿದ ಎಬಿ ಡೆವಿಲಿಯರ್ಸ್..

- Advertisement -

Latest Posts

Don't Miss