Friday, June 20, 2025

Latest Posts

ಈ 6 ಹಸಿರು ತರಕಾರಿ ಸೇವನೆಯಿಂದ ನಿಮ್ಮ ಆರೋಗ್ಯ ಅತ್ಯುತ್ತಮವಾಗಿರುತ್ತದೆ..

- Advertisement -

ತರಕಾರಿ ಸೇವನೆ, ಹಣ್ಣು, ಸೊಪ್ಪಿನ ಸೇವನೆಯಿಂದ ಹಲವು ಲಾಭಗಳಿದೆ ಅಂತಾ ನಾವು ನಿಮಗೆ ಈ ಮೊದಲೇ ಹೇಳಿದ್ದೇವೆ. ಒಂದೊಂದು ಹಣ್ಣು, ತರಕಾರಿಗಳಿಗೂ ಒಂದೊಂದು ಗುಣವಿರುತ್ತದೆ. ಇದು ನಮ್ಮ ಆರೋಗ್ಯವನ್ನ ಕಾಪಾಡುವುದರಲ್ಲಿ ಸಹಕಾರಿಯಾಗಿರುತ್ತದೆ. ನಾವಿಂದು ಯಾವ 6 ತರಕಾರಿಯನ್ನ ತಿನ್ನುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಅನ್ನೋ ಬಗ್ಗೆ ಹೇಳಲಿದ್ದೇವೆ..

ಮೊದಲು ಹಸಿರು ತರಕಾರಿ, ನುಗ್ಗೆಸೊಪ್ಪು. ಇದರಲ್ಲಿ ಕ್ಯಾಲ್ಶಿಯಂ, ಪ್ರೊಟೀನ್, ಪೋಟ್ಯಾಷಿಯಂ, ವಿಟಾಮಿನ್ ಸಿ ಮತ್ತು ಐರನ್ ಇದೆ. ಹಾಗಾಗಿ ಇದರ ಸೇವನೆ ಮಾಡಿದ್ರೆ ನಿಮ್ಮ ಮೂಳೆ ಗಟ್ಟಿಗೊಳ್ಳತ್ತೆ. ನೀವು ಶಕ್ತಿವಂತರಾಗಲು ಇದು ಸಹಾಯ ಮಾಡತ್ತೆ. ಹಾಗಾಗಿ ವಾರಕ್ಕೆ ಎರಡು ಬಾರಿಯಾದ್ರೂ ನೀವು ನುಗ್ಗೆಸೊಪ್ಪು ಸೇವಿಸಬೇಕು.

ಎರಡನೇಯ ಹಸಿರು ತರಕಾರಿ, ಹೂಕೋಸಿನ ಎಲೆ. ಹೂಕೋಸು ಅಂದ್ರೆ ಕ್ವಾಲಿ ಫ್ಲವರ್ ತಿನ್ನೋಕ್ಕೆ ಎಷ್ಟು ರುಚಿಯಾಗಿರತ್ತೋ, ಅದರ ಎಲೆ ಅಷ್ಟೇ ಆರೋಗ್ಯಕರವಾಗಿರತ್ತೆ. ಹಾಗಾಗಿ ಇದರ ಸೇವನೆ ಮಾಡಬೇಕು. ಆದ್ರೆ ನೀವು ಯಾವುದೇ ತರಕಾರಿ, ಸೊಪ್ಪು, ಹಣ್ಣು ತಿನ್ನುವ ಮುನ್ನ ಅದನ್ನ ಚೆನ್ನಾಗಿ ತೊಳೆದು ತಿನ್ನಬೇಕು. ನೀವು ಸಾರು, ಸಾಂಬಾರ್ ಅಥವಾ ಪಲ್ಯ ಮಾಡುವಾಗ, ಈ ಸೊಪ್ಪನ್ನ ಬಳಸಬಹುದು.

ಮೂರನೇಯದ್ದು, ಮೂಲಂಗಿ ಎಲೆ. ಮೂಲಂಗಿ ಅಂದ್ರೆ ಹಲವು ಜನ ಹೇಟ್ ಮಾಡ್ತಾರೆ. ಆದ್ರೆ ನೀವು ವಾರಕ್ಕೆರಡು ಬಾರಿಯಾದ್ರೂ ಮೂಲಂಗಿ ತಿಂದ್ರೆ, ಮೂಲವ್ಯಾಧಿಯಿಂದ ದೂರವಿರ್ತೀರಿ ಅಂತಾ ಹೇಳಲಾಗಿದೆ. ಅಲ್ಲದೇ, ಇದರ ಸೇವನೆಯಿಂದ ಇನ್ನೂ ಹಲವು ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ಅದೇ ರೀತಿ ಮೂಲಂಗಿ ಎಲೆ ಕೂಡ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನೀವು ಮೂಲಂಗಿ ಸಾಂಬಾರ್ ಮಾಡುವಾಗ, ಇದರ ಎಲೆಯನ್ನ ಕೂಡ ಬಳಸಬಹುದು. ಇದನ್ನ ತಿನ್ನುವುದರಿಂದ ನಮ್ಮ ಜೀರ್ಣಕ್ರಿಯೆ ಸಮಸ್ಯೆಗೆ ಮುಕ್ತಿ ಸಿಗತ್ತೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಸಿಗುತ್ತದೆ.

ನಾಲ್ಕನೇಯದ್ದು, ತಾರಾಮಿರಾ ಅನ್ನುವ ಎಲೆ. ಕೆಲವರು ಇದರ ಹೆಸರನ್ನ ಕೇಳಿದ್ದೆ ಮೊದಲ ಬಾರಿ ಇರಬಹುದು. ಆದ್ರೆ ಇದರ ಸೇವನೆ ಆರೋಗ್ಯಕ್ಕೆ ಉತ್ತಮ. ಕಣ್ಣಿನ ದೃಷ್ಟಿ ಉತ್ತಮವಾಗಿರುತ್ತದೆ. ಕ್ಯಾನ್ಸರ್‌ ಬರುವುದನ್ನು ತಡೆಯುತ್ತದೆ. ಮೂಳೆ ಗಟ್ಟಿ ಮಾಡುತ್ತದೆ.

ಐದನೇಯದ್ದು, ಸಾಸಿವೆ ಎಲೆ. ವಿಟಾಮಿನ್ ಸಿ ಮತ್ತು ವಿಟಾಮಿನ್ ಕೆ ಅಂಶ ಹೊಂದಿರುವ ಈ ಸೊಪ್ಪು ಸೇವಿಸಿದರೆ, ಕಣ್ಣು, ಹೃದಯ, ರೋಗ ನಿರೋಧಕ ಶಕ್ತಿ ಎಲ್ಲವೂ ಉತ್ತಮವಾಗಿರುತ್ತದೆ. ಚಳಿಗಾಲದಲ್ಲಿ ಇದರ ಪದಾರ್ಥ ಮಾಡಿ ಸೇವಿಸಲಾಗುತ್ತದೆ.

ಯಾವ ಸಮಯದಲ್ಲಿ, ಯಾವ ರೀತಿ ಮತ್ತು ಎಷ್ಟು ಆಹಾರವನ್ನು ಸೇವಿಸಬೇಕು..?

ಮಂಡಿನೋವು, ಕಾಲು ನೋವಿದ್ರೆ ಈ ಔಷಧಿ ಬಳಸಿ ನೋಡಿ..

ಪಿಸಿಓಡಿ, ಪಿಸಿಓಎಸ್ ಇದ್ದವರು ಈ 5 ಸೂಪರ್ ಫುಡ್ ತಿನ್ನಬೇಕು..

- Advertisement -

Latest Posts

Don't Miss