International News: ಗಾಜಾದಲ್ಲಿ ಇಸ್ರೇಲ್ ನಡೆಸಿರುವ ವೈಮಾನಿಕ ದಾಳಿಯಲ್ಲಿ 34 ಮಂದಿ ಸಾವನ್ನಪ್ಪಿದ್ದಾರೆ. ಬುಧವಾರ ಈ ಘಟನೆ ನಡೆದಿದ್ದು, 19ಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳು ಸೇರಿ 34 ಜನರು ಸಾವನ್ನಪ್ಪಿದ್ದಾರೆ.
ಅಕ್ಟೋಬರ್ 7ರಂದು ಶುರುವಾಗಿರುವ ಇಸ್ರೇಲ್ ಮತ್ತು ಗಾಜಾ ಯುದ್ಧ ಇಂದಿಗೂ ಅಂತ್ಯವಾಗಿಲ್ಲ. ಸತತ 11 ತಿಂಗಳಿಂದ ಯುದ್ಧ ನಡೆಯುತ್ತಲೇ ಇದ್ದು, ಒಂದು ವರ್ಷ...
Pakistan News: ಮೊಬೈಲ್ ಅನ್ನೋದು ಎಷ್ಟರ ಮಟ್ಟಿಗೆ ಮುಖ್ಯವಾಗಿ ಹೋಗಿದೆ ಅಂದ್ರೆ, ಒಂದು ಹೊತ್ತಿನ ಊಟವಾದ್ರೂ ಬಿಟ್ಟಾರು, ಆದ್ರೆ ಮೊಬೈಲ್ ಬಿಡಲ್ಲಾ ಅನ್ನೋ ರೀತಿ ಇಂದಿನ ಯುವ ಪೀಳಿಗೆ ವರ್ತಿಸುತ್ತಿದೆ. ಪುಟ್ಟ ಮಕ್ಕಳಿಂದ ಹಿಡಿದು, ವೃದ್ಧವರೆಗೂ ಎಲ್ಲರೂ ಮೊಬೈಲ್ ಪ್ರಿಯರೇ. ಮೊದಲೆಲ್ಲ ಮಕ್ಕಳಿಗೆ ಮೊಬೈಲ್ ಬಳಕೆ ಮಾಡಿದ್ರೆ ಹೀಗಾಗತ್ತೆ, ಹಾಗಾಗತ್ತೆ ಅಂತಾ ಬುದ್ಧಿ ಹೇಳ್ತಿದ್ದ...
Political News: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿದೇಶಕ್ಕೆ ಹೋದಾಗಲೆಲ್ಲ ಭಾರತದ ವಿರುದ್ಧ ಹೇಳಿಕೆ ಕೊಟ್ಟು, ಭಾರತದ ಮರ್ಯಾದೆ ತೆಗೆದೇ ಬರುತ್ತಾರೆ. ಈ ಬಾರಿ ಕೂಡ ರಾಹುಲ್ ಗಾಂಧಿ ಆರ್ಎಸ್ಎಸ್ ವಿರುದ್ಧ ಹೇಳಿಕೆ ನೀಡಿದ್ದು, ಮಹಿಳೆಯರೆಲ್ಲ ಮನೆಯಲ್ಲೇ ಇರಬೇಕು ಎಂಬುದು ಆರ್ಎಸ್ಎಸ್ ಆಶಯವೆಂದು ಹೇಳಿದ್ದಾರೆ.
https://youtu.be/D9siXC9BZ9I
ಅಮೆರಿಕದ ಟೆಕ್ಸಾಸ್ ಯುನಿವರ್ಸಿಟಿಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಈ...
Pakistan News: ಸಾಮಾನ್ಯವಾಗಿ ಅಂಗಡಿ, ಮಾಲ್, ದೊಡ್ಡ ದೊಡ್ಡ ಮನೆಗಳು, ರಸ್ತೆಯ ಬದಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಅಥವಾ ಕಳ್ಳತನವಾಗುವ ಸಾಧ್ಯತೆ ಇರುವ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿರುತ್ತದೆ.
https://youtu.be/PG5ZT4KlGMc
ಆದರೆ ಪಾಕಿಸ್ತಾನದಲ್ಲಿ ಓರ್ವ ತಂದೆ ಮಗಳ ತಲೆಗೆ ಕಿರೀಟದಂತೆ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿದ್ದಾನೆ. ಮಗಳು ಎಲ್ಲಿ ಹೋಗುತ್ತಾಳೆ..? ಏನು ಮಾಡುತ್ತಾಳೆ ಎಂದು ನೋಡಲು ತಂದೆ ಈ...
International News: ನಾವೇನೇ ಕೆಲಸ ಮಾಡಿದ್ರೂ ವಾರಕ್ಕೊಮ್ಮೆಯಾದರೂ ಆ ಕೆಲಸಕ್ಕೆ ರಜೆ ಹಾಕ್ತೀವಿ. ಇದರಿಂದ ಮತ್ತೆ ಮರುದಿನ ಕೆಲಸ ಮಾಡಲು ಚೈತನ್ಯ ಬರುತ್ತದೆ. ಆದರೆ ಇಲ್ಲೋರ್ವ ವ್ಯಕ್ತಿ ಬ್ರೇಕ್ ಇಲ್ಲದೇ 104 ದಿನ ಕೆಲಸ ಮಾಡಿ, ಸಾವನ್ನಪ್ಪಿದ್ದಾನೆ.
https://youtu.be/L70KQ6VEfCg
ಚೀನಾದಲ್ಲಿ ಈ ಘಟನೆ ನಡೆದಿದ್ದು, ಕಂಟಿನ್ಯೂ ಆಗಿ 104 ದಿನ, ದಿನಕ್ಕೆ 8 ಗಂಟೆಗೂ ಹೆಚ್ಚು ಕಾಲ...
International News: ಡಿವೋರ್ಸ್ ಆಗದೇ, ಪತಿ-ಪತ್ನಿ 17 ವರ್ಷ ಸಂಸಾರ ನಡೆಸಿ, ಪತಿ ತೀರಿಹೋದಾಗ, ಪತ್ನಿಯಾದವಳು ಏನು ಮಾಡುತ್ತಾಳೆ..? ಪತಿಯನ್ನು ಕಳೆದುಕೊಂಡ ದುಃಖದಲ್ಲಿರುತ್ತಾಳೆ. ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ, ಓಡಿ ಪತಿಯನ್ನು ನೋಡಲು ಬರುತ್ತಾಳೆ. ಆದರೆ ಇಲ್ಲೊಬ್ಬಳು ಪತ್ನಿ, ತಾನು ಪ್ರವಾಸಕ್ಕಾಗಿ ಹೋದ ವೇಳೆಯೇ ಪತಿ ತೀರಿಹೋಗಿದ್ದಾನೆ. ಆದರೆ ನನಗೆ ಆತನ ಶವಸಂಸ್ಕಾರದಲ್ಲಿ ಭಾಗಿಯಾಗಲು ಇಷ್ಟವಿಲ್ಲ....
ನವದೆಹಲಿ: ಬ್ರೂನೈ ಪ್ರವಾಸದ ಸಂದರ್ಭದಲ್ಲಿ ಸುಲ್ತಾನ್ ಹಾಜಿ ಹಸನಲ್ ಬೊಲ್ಕಿಯಾ (Brunei Sultan Haji Hassanal Bolkiah) ಅವರನ್ನು ಭೇಟಿಯಾಗಿ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ದ್ವಿಪಕ್ಷೀಯ ಮಾತುಕತೆ ನಡೆಸಿ ಹಲವು ಮಹತ್ವದ ಘೋಷಣೆಗಳನ್ನ ಮಾಡಿದ್ದಾರೆ. ರಕ್ಷಣೆ, ವ್ಯಾಪಾರ ಮತ್ತು ಹೂಡಿಕೆ, ಆಹಾರ ಭದ್ರತೆ, ಶಿಕ್ಷಣ, ಇಂಧನ, ಬಾಹ್ಯಾಕಾಶ ತಂತ್ರಜ್ಞಾನ,...
ಢಾಕಾ: ಶತ್ರು ದೇಶ ಪಾಕಿಸ್ತಾನದ ಜೊತೆ ಸೇರಿಕೊಂಡು ಭಾರತದ ವಿರುದ್ಧ ಸದಾ ಕಾಲ್ಕೆರೆದುಕೊಂಡು ಜಗಳಕ್ಕೆ ನಿಲ್ಲುವ ಚೀನಾ ಇದೀಗ ಹೊಸ ಕುತಂತ್ರ ಮಾಡುತ್ತಿದೆ. ನಮ್ಮ ನೆರೆಯ ದೇಶ ಬಾಂಗ್ಲಾದಲ್ಲಿ ತನ್ನ ಪ್ರಭಾವವನ್ನ ಹೆಚ್ಚಿಸಿಕೊಳ್ಳೋಕೆ ಚೀನಾ ಪ್ರಯತ್ನಿಸುತ್ತಿದೆ. ಬಾಂಗ್ಲಾ ದೇಶದ ಮಧ್ಯಂತರ ಸರ್ಕಾರ ಮತ್ತು ಅಲ್ಲಿನ ಪ್ರಭಾವಿ ಇಸ್ಲಾಮಿಕ್ ಪಕ್ಷಗಳೊಂದಿಗೆ ಸ್ನೇಹ ವೃದ್ಧಿಸಿಕೊಳ್ಳಲು ಚೀನಾ ಮುಂದಾಗಿದೆ....
ನಾರ್ವೆ: ಇಡೀ ಜಗತ್ತಿನ ಗಮನವನ್ನು ಸೆಳೆದಿದ್ದ ರಷ್ಯಾದ ಬೇಹುಗಾರ ತಿಮಿಂಗಿಲ ಇದೀಗ ನಾರ್ವೆ ಕರಾವಳಿಯಲ್ಲಿ ನಿಗೂಢವಾಗಿ ಸಾವನ್ನಪ್ಪಿದೆ. ರಷ್ಯನ್ ಸ್ಪೈ ತಿಮಿಂಗಿಲ (Russian Spy Whale) ಅಂತಾನೇ ಫೇಮಸ್ ಆಗಿದ್ದ ಹ್ವಾಲ್ಡಿಮಿರ್ (Hvaldimir) ತಿಮಿಂಗಿಲದ ಮೃತದೇಹವು ದಕ್ಷಿಣ ನಾರ್ವೆಯ ರಿಜವಿಕಾ ಕೊಲ್ಲಿಯಲ್ಲಿ ನೀರಿನ ಮೇಲೆ ಪತ್ತೆಯಾಗಿದ್ದು, ಕ್ರೇನ್ ಸಹಾಯದಿಂದ ತಿಮಿಂಗಿಲ ದೇಹವನ್ನು ಹೊರಕ್ಕೆ ತೆಗೆಯಲಾಗಿದೆ...
ನವದೆಹಲಿ: ಕೋಲ್ಕತ್ತಾದ ಆರ್.ಜಿ ಕಾರ್ ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆ ಮೇಲೆ ಅತ್ಯಾಚಾರ ಮತ್ತು ಕೊಲೆ ನಡೆದ ಬಳಿಕ ಅತ್ಯಾಚಾರಿಗಳ ವಿರುದ್ಧ ಕಠಿಣ ಕಾನೂನು ಜಾರಿ ಮಾಡುವಂತೆ ದೇಶದೆಲ್ಲೆಡೆ ಆಗ್ರಹಗಳು ಹೆಚ್ಚಾಗುತ್ತಿವೆ. ಈ ನಡುವೆ ಅತ್ಯಾಚಾರ ಪ್ರಕರಣ ಅಪರಾಧಿಗಳಿಗೆ 10 ದಿನದೊಳಗೆ ಮರಣದಂಡನೆ ಶಿಕ್ಷೆ ವಿಧಿಸುವ ಮಸೂದೆಯನ್ನು ಮಂಡಿಸಲು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್...