Wednesday, April 22, 2026

ಜಿಲ್ಲಾ ಸುದ್ದಿಗಳು

ಮಂಡ್ಯದಲ್ಲಿ ಜ್ಯೂಸ್ ಕುಡಿದು ಹಣ ನೀಡದೇ ಹುಚ್ಚಾ ವೆಂಕಟ್ ರಂಪಾಟ..!

ಮಂಡ್ಯ: ಮಂಡ್ಯದಲ್ಲಿ ಜ್ಯೂಸ್ ಕುಡಿದ ಹುಚ್ಚಾ ವೆಂಕಟ್, ಹಣ ನೀಡದೇ ಜ್ಯೂಸ್ ಅಂಗಡಿಯವನ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ. ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಹುಚ್ಚಾ ವೆಂಕಟ್ ಶ್ರೀರಂಗಪಟ್ಟಣದಲ್ಲಿ ಎರಡು ಮೂರು ದಿನಗಳಿಂದ ಅಲೆದಾಡುತ್ತಿದ್ದ. ಇಂದು ಕಬ್ಬಿನ ಜ್ಯೂಸ್ ಅಂಗಡಿಗೆ ತೆರಳಿ ಜ್ಯೂಸ್ ಕುಡಿದು ಹಣ ಕೊಡದೆ ರಂಪಾಟ ಮಾಡಿದ್ದಾರೆ. ಬಳಿಕ...

ಶ್ರೀರಂಗಪಟ್ಟಣ ಗಾರ್ಮೆಂಟ್ಸ್ ನೌಕರರ ಪ್ರತಿಭಟನೆ: ಸಂಸದೆ ಸುಮಲತಾ ಭೇಟಿ..

ಶ್ರೀರಂಗಪಟ್ಟಣ ಗಾರ್ಮೆಂಟ್ಸ್ ನೌಕರರು ಪ್ರತಿಭಟನೆ ನಡೆಸುತ್ತಿದ್ದು, ಯೂರೋ ಕ್ಲಾಥಿಂಗ್ ಕಂಪನಿಯ ಗೋಕುಲ್ ದಾಸ್ ಗಾರ್ಮೆಂಟ್ಸ್‌ಗೆ ಸಂಸದೆ ಸುಮಲತಾ ಅಂಬರೀಶ್ ಭೇಟಿ ನೀಡಿದರು. ನೌಕರನ್ನು ಕೆಲಸದಿಂದ ತೆಗೆದು ಕಾರ್ಖಾನೆ ಮುಚ್ಚುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆ ಗಾರ್ಮೆಂಟ್ಸ್ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿದ ಸುಮಲತಾ ಅಂಬರೀಷ್, ಹೊರ ಹಾಕುವ ಆತಂಕದಲ್ಲಿರುವ ನೌಕರರಿಗೆ ಅನ್ಯಾಯವಾಗದಂತೆ...

ವಿದ್ಯುತ್ ಟಾನ್ಸ್ ಫಾರ್ಮ್ ದುರಸ್ತಿ ವೇಳೆ ವಿದ್ಯುತ್ ಅವಘಡ: ಲೈನ್ ಮ್ಯಾನ್ ಸಾವು..

ಮಂಡ್ಯ: ವಿದ್ಯುತ್ ಟಾನ್ಸ್ ಫಾರ್ಮ್ ದುರಸ್ತಿ ವೇಳೆ ವಿದ್ಯುತ್ ಅವಘಡ ಸಂಭವಿಸಿ, ಲೈನ್ ಮ್ಯಾನ್ ಸಾವನ್ನಪ್ಪಿದ್ದು, ಮತ್ತೊಬ್ಬ ಲೈನ್‌ ಮ್ಯಾನ್‌ ‌ಗೆ ಗಂಭೀರ ಗಾಯವಾಗಿದೆ. ಪಾಂಡವಪುರ ತಾಲೂಕಿನ ಹೊನಗಾನಹಳ್ಳಿ ಬಳಿ ಈ ಘಟನೆ ನಡೆದಿದ್ದು, ಲೈನ್ ಮ್ಯಾನ್ ಲೋಕೇಶ್(೪೦) ಮೃತ ದುರ್ದೈವಿ. ಮತ್ತೊಬ್ಬ ಲೈನ್ ಮ್ಯಾನ್‌‌ಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ...

ರಾಜ್ಯದಲ್ಲಿಂದು ಬರೋಬ್ಬರಿ 308 ಮಂದಿಗೆ ಕೊರೊನಾ ಪಾಸಿಟಿವ್: ಮೂವರು ಬಲಿ..!

ರಾಜ್ಯದಲ್ಲಿಂದು 308 ಮಂದಿಗೆ ಮಹಾಮಾರಿ ಕೊರೊನಾ ತಗುಲಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 5760ಕ್ಕೆ ಏರಿಕೆಯಾಗಿದೆ. ಇಂದು ಬೆಂಗಳೂರಿನಲ್ಲಿ ಕೊರೊನಾ ವೈರಸ್ ತಗುಲಿ ಮೂವರು ಮೃತಪಟ್ಟಿದ್ದು, ಇದರೊಂದಿಗೆ ರಾಜ್ಯದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 64ಕ್ಕೆ ಏರಿಕೆಯಾಗಿದೆ. ಇಂದು ಕಲಬುರಗಿಯಲ್ಲಿ 99 ಮಂದಿಗೆ ಕೊರೊನಾ ವೈರಸ್ ತಗುಲಿದ್ದು, ಯಾದಗಿರಿಯಲ್ಲಿ 66 ಕೊರೊನಾ ಪಾಸಿಟಿವ್ ಕೇಸ್ ಕಂಡುಬಂದಿದೆ. ಬೆಂಗಳೂರಿನಲ್ಲಿ...

78 ದಿನ ಲಾಕ್ ಆಗಿದ್ದ ದೇವಸ್ಥಾನ, ಚರ್ಚ್, ಮಸೀದಿ ಓಪೆನ್..

78 ದಿನಗಳಿಂದ ಬಂದ್ ಆಗಿದ್ದ ದೇವಸ್ಥಾನಗಳು, ಚರ್ಚ್, ಮಸೀದಿ ಇಂದು ತೆರೆದಿದ್ದು, ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಕದ್ರಿ ಮಂಜುನಾಥೇಶ್ವರ ದೇಗುಲ ತೆರೆದಿದ್ದು, ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ದೇವರ ದರ್ಶನ ಪಡೆದರು. ಧರ್ಮಸ್ಥಳ ಮಂಜುನಾಥ ದೇವಸ್ಥಾನ, ಕುದ್ರೋಳಿ ಗೋಕರ್ಣನಾಥೇಶ್ವರ ದೇಗುಲ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವೂ ತೆರೆಯಲಾಗಿದೆ. ಮಲ್ಲೆಶ್ವರಂನ ಕಾಡುಮಲ್ಲೇಶ್ವರನಿಗೆ ಪಂಚಾಮೃತಾಭಿಷೇಕ ನೆರವೇರಿಸಲಾಯಿತು....

ಪತ್ರಕರ್ತರ ನೆರವಿಗೆ ನಿಂತ ಲಾರಿ ಮಾಲೀಕರ ಸಂಘದ ಅಧ್ಯಕ್ಷರು..

ಮಂಡ್ಯ: ಲಾರಿ ಮಾಲೀಕರ ಸಂಘದ ಅಧ್ಯಕ್ಷರು ಪತ್ರಕರ್ತರ ನೆರವಿಗೆ ಬಂದಿದ್ದು, ಆಹಾರ ಕಿಟ್ ವಿತರಿಸಿದರು. ಪಾಂಡವಪುರದ ಜನ ಸೇವಕರು ಹಾಗೂ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಬಿ.ರೇವಣ್ಣ ಮಂಡ್ಯದ ಪತ್ರಕರ್ತರಿಗೆ ಆಹಾರ ಕಿಟ್ ವಿತರಿಸಿದರು. ಕೊರೊನಾ ಸಂಕಷ್ಟದ ನಡುವೆ ಪತ್ರಕರ್ತರು ನಿರಂತರವಾಗಿ ದುಡಿಯುತ್ತಿದ್ದು, ಸುಮಾರು 150 ಪತ್ರಕರ್ತರ ನೆರವಿಗೆ ನಿಂತ ಪಾಂಡವಪುರದ ಜನ ಸೇವಕರು...

ನಾಳೆಯಿಂದ ಸಿಗಲಿದೆ ದೇವರ ದರ್ಶನ: ಷರತ್ತುಗಳು ಅನ್ವಯ..!

ನಾಳೆಯಿಂದ ರಾಜ್ಯದ ಪ್ರಮುಖ ದೇವಾಲಯಗಳು ತೆರೆಯಲಿದ್ದು, ಹಲವು ಷರತ್ತುಗಳು ಅನ್ವಯವಾಗಲಿದೆ. ಮಂತ್ರಾಲಯದ ರಾಯರ ಮಠ, ಧರ್ಮಸ್ಥಳ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಕೂಡಲಸಂಗಮ, ಬಾದಾಮಿ ಬನಶಂಕರಿ ದೇವಸ್ಥಾನ ಸೇರಿ ರಾಜ್ಯದ ಪ್ರಮುಖ ದೇವಸ್ಥಾನಗಳು ನಾಳೆ ತೆರೆಯಲಿದೆ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ದೇವಾಲಯದ ಅನ್ನಪೂರ್ಣ ಭೋಜನಾಲಯದಲ್ಲಿ ಅನ್ನ ಸಂತರ್ಪಣೆ ಇರುತ್ತದೆ....

ಯಾಣದ ಹಿನ್ನೆಲೆ ಏನು..? ಈ ದೇವತಾಣಕ್ಕೆ ಯಾಣ ಎಂಬ ಹೆಸರು ಹೇಗೆ ಬಂತು..?

ಯಾಣ. ಉತ್ತರ ಕನ್ನಡದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು. ಕುಮಟಾ ಜಿಲ್ಲೆಯ ಬಳಿಯ ಕಾಡಿನ ಮಧ್ಯ ಇರುವ ದೇವ ತಾಣವೇ ಯಾಣ. ಯಾಣವು ಮೊನಚಾಗಿರುವ ಬೆಟ್ಟದಂತಿರುವ ಶಿಲೆಗಳ 61 ಶಿಖರಗಳನ್ನ ಒಳಪಟ್ಟಿದೆ. ಇದರಲ್ಲಿ 61 ಶಿಖರಗಳಿದ್ದರೂ ಕೂಡ, ಭೈರವೇಶ್ವರ ಶಿಖರ, ಮೋಹಿನಿ ಶಿಖರ ಮತ್ತು ಬೆಟ್ಟದ ಭೈರವೇಶ್ವರ ದೇವಾಲಯ ಹೆಚ್ಚಿನ ಪ್ರಖ್ಯಾತಿ ಪಡೆದಿದೆ. ಇವುಗಳಿಂದ...

ಕೆಆರ್‌ಎಸ್ ಡ್ಯಾಂ ಬಗ್ಗೆ ನಿಮಗೆ ಗೊತ್ತಿಲ್ಲದ ಮಾಹಿತಿ..!

ನಾವಿಂದು ಕನ್ನಂಬಾಡಿ ಡ್ಯಾಂ. ಅಂದ್ರೆ ಕೆಆರ್ಎಸ್‌ ಡ್ಯಾಂನ್ನ ಹೇಗೆ ಕಟ್ಟಲಾಯಿತು..? ಡ್ಯಾಂ ಕಟ್ಟುವಾಗ ಯಾವೆಲ್ಲ ಅಡೆತಡೆಗಳು ಬಂದವು..? ಕೆಆರ್‌ಎಸ್‌ ಡ್ಯಾಮನ್ನ ಕನ್ನಂಬಾಡಿ ಕಟ್ಟೆ ಅಂತಾ ಯಾಕೆ ಕರೀತಾರೆ..? ಎನ್ನುವ ಬಗ್ಗೆ ಮಾಹಿತಿ ನೀಡಲಿದ್ದೇವೆ. ಸ್ವಾತಂತ್ರ್ಯ ಪೂರ್ವದಲ್ಲಿ ಈಗಿನ ಕರ್ನಾಟಕವನ್ನ ಮೈಸೂರು ಎಂದು ಹೇಳಲಾಗುತ್ತಿತ್ತು.1870ರಲ್ಲಿ ಬ್ರಿಟಿಷರ ಆಳ್ವಿಕೆಯಲ್ಲಿದ್ದ ಮೈಸೂರು ನಂತರದ ದಿನಗಳಲ್ಲಿ ಮೈಸೂರು ರಾಜರ ಆಡಳಿತಕ್ಕೆ...

ಕೊರೊನಾ ವೈರಸ್ ತೊಲಗಿ, ಜಗತ್ತಿಗೆ ಒಳಿತಾಗಲೆಂದು ಹೋಮ ಹವನ..!

ಮಂಡ್ಯ: ಈ ವರ್ಷ ಪ್ರಾರಂಭವಾಗಿದಾಗಿನಿಂದ ವಕ್ಕಿರಿಸಿದ ಕೊರೊನಾ ಇಲ್ಲಿವರೆಗೆ ಭೀತಿ ಮೂಡಿಸಿ, ಜನಜೀವನವೇ ಹಾಳಾಗುವಂತೆ ಮಾಡಿದೆ. ಈ ವರ್ಷದ ಅರ್ಧ ಭಾಗ ಕೊರೊನಾ ಭೀತಿಯಲ್ಲೇ ಜೀವನ ನಡೆಸುವಂತಾಯಿತು. ಇನ್ನಾದರೂ ಕೊರೊನಾ ತೊಲಗಿ ಜನ ನೆಮ್ಮದಿಯಿಂದಿರುವ ಹಾಗೆ ಆಗಲಿ ಎಂದು ಮಂಡ್ಯದಲ್ಲಿ ಹೋಮ ಹವನ ನಡೆಸಲಾಯಿತು. ಮಳವಳ್ಳಿ ಪಟ್ಟಣದ ಗಂಗಾಪರಮೇಶ್ವರಿ ದೇವಾಲಯದಲ್ಲಿ ಹೋಮ ಹವನ ನಡೆಸಲಾಗಿದ್ದು,...
- Advertisement -spot_img

Latest News

ನಿಮ್ಮ ನೇತೃತ್ವವನ್ನು ತೃಪ್ತಿಪಡಿಸಲು ಇಷ್ಟು ಕೀಳು ಮಟ್ಟಕ್ಕೆ ಇಳಿಯುತ್ತೀರಿ ಎಂದು ನಿರೀಕ್ಷಿರಲಿಲ್ಲ: ವಿಜಯೇಂದ್ರ

Political News: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆಯವರು, ಪ್ರಧಾನಿ ಮೋದಿ ಅವರನ್ನು ಭಯೋತ್ಪಾದಕ ಎಂದು ಕರೆದಿದ್ದು, ಈ ಬಗ್ಗೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಈ ಬಗ್ಗೆ...
- Advertisement -spot_img