Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮತದಾನ ಮಾಡಿದ್ದು, ಪುತ್ರ, ಸೊಸೆ, ಮೊಮ್ಮಗಳೊಂದಿಗೆ ಆಗಮಿಸಿ, ಮತಗಟ್ಟೆ ಸಂಖ್ಯೆ 191ರಲ್ಲಿ ಮತದಾನ ಮಾಡಿದ್ದಾರೆ.
ಮತದಾನದ ಬಳಿಕ ಮಾತನಾಡಿದ ಹೊರಟ್ಟಿ, ಮತದಾನ ಚಲಾವಣೆ ಮಾಡಿದ್ದೇನೆ. ಬಹಳಷ್ಟು ಜನ ಮತದಾನ ಮಾಡುವದಿಲ್ಲ. ಕಡ್ಡಾಯ ಮತದಾನ ಮಾಡಬೇಕು. ಪ್ರಜಾಪ್ರಭುತ್ವ ಕಲಿತವರು, ತಿಳಿದವರು ಕಡ್ಡಾಯ ಮತದಾನ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಎಲ್ಲರಿಗೂ ಕಡ್ಡಾಯ ಮಾಡುವುದಕ್ಕೆ ಕೇಂದ್ರ ಸರ್ಕಾರ, ಚುನಾವಣಾ ಆಯೋಗ ಮುಂದಾಗಬೇಕು. ಈ ಚುನಾವಣೆ ಕೇವಲ ಟೀಕೆ ಮಾಡುವುದಕ್ಕೆ ಸೀಮಿತವಾಗಿತ್ತು.
ಜನರ ಸಮಸ್ಯೆಗಳ ಬಗ್ಗೆ ಗಮನಹರಿಸಲಿಲ್ಲ ಎಂದಿದ್ದಾರೆ.
ಇನ್ನೊಂದೆಡೆ ಲೋಕಸಭಾ ಚುನಾವಣೆ ಮತದಾನ ಹಿನ್ನೆಲೆ, ಸಚಿವ ಸಂತೋಷ್ ಲಾಡ್ ಪ್ರಜಾಪ್ರಭುತ್ವದ ಹಕ್ಕು ಚಲಾಯಿಸಿದ್ದಾರೆ. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮಡಕಿಹೊನ್ನಳಿ ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ. ಮೊದಲು ಮೊಬೈಲ್ ಜೊತೆ ಲಾಡ್ ಮತ ಚಲಾಯಿಸಲು ಬಂದಿದ್ದು, ಸಿಬ್ಬಂದಿ ಮೊಬೈಲ್ಗೆ ಅವಕಾಶವಿಲ್ಲ ಎಂದಾಗ, ಮೊಬೈಲ್ ಹೊರಗಿಟ್ಟು ಬಂದು ಮತದಾನ ಮಾಡಿದ್ದಾರೆ.
ಪಿಓಕೆ ತಂಟೆಗೆ ಹೋದರೆ ಭಾರತದ ಮೇಲೆ ಅಣುಬಾಂಬ್ ಬೀಳುತ್ತೆ: ಫಾರೂಕ್ ಅಬ್ದುಲ್ಲಾ
ಮೇಲ್ಜಾತಿಯವರು ಪೇಪರ್ ಸೆಲೆಕ್ಟ್ ಮಾಡುವ ಕಾರಣಕ್ಕೆ ದಲಿತರು ಫೇಲ್ ಆಗುತ್ತಿದ್ದಾರೆ: ರಾಹುಲ್ ಗಾಂಧಿ