Spiritual: ನಾವು ಜೀವಿಸುವ ಸ್ಥಳ ಅತ್ಯುತ್ತಮವಾಗಿದ್ದರೆ ಮಾತ್ರ, ಅಲ್ಲಿ ನಾವು ನೆಮ್ಮದಿಯಿಂದ ಇರಲು ಸಾಧ್ಯ. ನಾವು ಇರುವ ಸ್ಥಳದಲ್ಲಿ, ಸರಿಯಾದ ಪರಿಸರ, ಆಹಾರ, ನೀರು, ವಾತಾವರಣ ಎಲ್ಲವೂ ಇರಬೇಕು. ಆಗ ಮಾತ್ರ ನಾವು ಆ ಸ್ಥಳದಲ್ಲಿ ನೆಮ್ಮದಿಯಿಂದ ಇರಲು ಸಾಧ್ಯ. ಆದರೆ ಚಾಣಕ್ಯರ ಪ್ರಕಾರ, ಕೆಲ ಸ್ಥಳಗಳು ನಮ್ಮ ಜೀವಕ್ಕೆ ಅಪಾಯ ತರಬಹುದಂತೆ. ಹಾಗಾದ್ರೆ ಯಾವುದು ಆ ಸ್ಥಳಗಳು ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ಸ್ಥಳ ಬರಗಾಲವಿರುವ ಸ್ಥಳ. ಯಾವ ಸ್ಥಳದಲ್ಲಿ ಸರಿಯಾಗಿ ಮಳೆ ಬೆಳೆ ಇರುವುದಿಲ್ಲವೋ, ಅಲ್ಲಿ ನಿಮಗೆ ತಿನ್ನಲು ಸರಿಯಾಗಿ ಆಹಾರ ಸಿಗುವುದಿಲ್ಲ. ಸರಿಯಾದ ಆಹಾರ ಸಿಗದ ಸ್ಥಳದಲ್ಲಿದ್ದಾಗ, ನಿಮ್ಮ ಆರೋಗ್ಯ ಬೇಗ ಹದಗೆಡುತ್ತದೆ. ಅಂಥ ಅನಾರೋಗ್ಯಕರ ಜೀವನ ಜೀವಿಸುವ ಬದಲು, ಉತ್ತಮ ಮಳೆ ಬೆಳೆ ಇರುವ ಸ್ಥಳಕ್ಕೆ ಹೋಗುವುದು ಉತ್ತಮ..
ಎರಡನೇಯ ಸ್ಥಳ ದೇಶದ ಮೇಲೆ ದಾಳಿಯಾಗುವ ಸಂದರ್ಭ. ನೀವು ಉಕ್ರೇನ್ ಮತ್ತು ರಷ್ಯಾ ದೇಶದ ನಡುವೆ ಯುದ್ಧವಾದಾಗ, ಅಲ್ಲಿನವರ ಪರಿಸ್ಥಿತಿಯನ್ನು ನೀವು ನೋಡಿದ್ದೀರಿ. ಆದರೆ ಯುದ್ಧ ನಡೆಯುವ ಹಲವು ದಿನಗಳ ಮುಂಚೆ ಅವರಿಗೆ ಸೂಚನೆ ಸಿಕ್ಕಿತ್ತು. ಹಾಗಾಗಿ ಹಲವರು ದೇಶ ಬಿಟ್ಟು ಬೇರೆ ದೇಶಕ್ಕೆ ಹೊರಟು ಹೋಗಿ, ಪ್ರಾಣ ಉಳಿಸಿಕೊಂಡರು. ಇನ್ನು ಕೆಲವರು ಯುದ್ಧ ನಡೆಯುವುದಿಲ್ಲ ಎಂಬ ಭ್ರಮೆಯಲ್ಲಿ, ಅಲ್ಲೇ ಇದ್ದು ಹಿಂಸೆ ಅನುಭವಿಸಿದರು. ಪ್ರಾಣಾಪಾಯಕ್ಕೀಡಾದರು. ಜೀವ ಕಳೆದುಕೊಂಡರು. ಹಾಗಾಗಿ ದೇಶದ ಮೇಲೆ ದಾಳಿಯಾಗುವ ಸಂದರ್ಭದಲ್ಲಿ, ನೀವು ಆ ಸ್ಥಳ ಬಿಡುವುದು ಉತ್ತಮ.
ಮೂರನೇಯ ಸ್ಥಳ ಹಿಂಸೆ ನಡೆಯುವ ಸ್ಥಳ. ನೀವು ಇರುವ ಸ್ಥಳದಲ್ಲಿ, ಕೆಲವರು ಬಂದು ನಿಮಗೆ ಸುಮ್ಮ ಸುಮ್ಮನೆ ಹಿಂಸೆ ನೀಡುತ್ತಿದ್ದಾರೆ. ಅಥವಾ ಅಲ್ಲಿ ಯುದ್ಧವಾಗುತ್ತಿದೆ. ನಿಮ್ಮ ಮಾನಕ್ಕೆ, ನಿಮ್ಮ ಜೀವಕ್ಕೆ ಅಪಾಯ ಬಂದೊದಗುತ್ತಿದೆ ಎಂದಾದಲ್ಲಿ, ಅಂಥ ಸ್ಥಳದಿಂದ ನೀವು ಓಡಿ ಹೋಗುವುದು ಸೂಕ್ತ. ಹಾಗೆ ಮಾಡಿದ್ದಲ್ಲಿ, ನಿಮ್ಮ ಮಾನ, ಪ್ರಾಣ ಎರಡೂ ಉಳಿಯುತ್ತದೆ. ಅದನ್ನು ಬಿಟ್ಟು ನನ್ನ ಮನೆ, ನನ್ನ ಆಸ್ತಿ ಎಂದು ಕುಳಿತರೆ, ಅದನ್ನು ಅನುಭವಿಸಲು ಸಾಧ್ಯವಾಗದೇ, ಪ್ರಾಣ ಕಳೆದುಕೊಳ್ಳುವ ಸ್ಥಿತಿ ಬರಬಹುದು.
ನಾಲ್ಕನೇಯ ಸ್ಥಳ ನಿಮ್ಮ ಮೇಲೆ ದ್ವೇಷ ಸಾಧಿಸುವವರು ಇರುವ ಜಾಗ. ಕೆಲ ಮನೆಗಳಲ್ಲಿ ಸಂಬಂಧಿಕರೇ ದ್ವೇಷ ಸಾಧಿಸುತ್ತಾರೆ. ಊಟದಲ್ಲಿ ವಿಷ ಬೆರೆಸುವುದು. ಮದ್ದು ಬೆರೆಸುವುದು. ಹೀಗೆ ಹಲವು ರೀತಿಯ ಹಾನಿ ಮಾಡುತ್ತಾರೆ. ಅಂಥ ಸ್ಥಳದಲ್ಲಿ ಎಂದಿಗೂ ಇರಬಾರದು. ಅಂಥವರ ಸಂಬಂಧವನ್ನು ಮುಂದುವರಿಸಬಾರದು. ಇಲ್ಲವಾದಲ್ಲಿ ಇದೇ ಸಂಬಂಧ, ಇದೇ ಸ್ಥಳ ನಿಮ್ಮ ಜೀವವನ್ನೇ ತೆಗೆಯಬಹುದು. ಎಷ್ಟೋ ಮನೆಗಳಲ್ಲಿ ಇಂದಿಗೂ, ಅಣ್ಣ- ತಮ್ಮಂದಿರು ದ್ವೇಷ ಸಾಧಿಸುತ್ತಾರೆ. ಊಟದಲ್ಲಿ ಮದ್ದು ಬೆರೆಸಿ ಕೊಡುವವರಿದ್ದಾರೆ.
ಈ ವಸ್ತುಗಳನ್ನು ಯಾರಿಗೂ ಕೊಡಬೇಡಿ.. ಹೀಗೆ ಮಾಡಿದ್ರೆ ನಿಮ್ಮ ಅದೃಷ್ಟ ಅವರ ಪಾಲಾಗುತ್ತದೆ..
ಪತಿ ಶ್ರೀಮಂತನಾಗಬೇಕು, ಉದ್ಧಾರವಾಗಬೇಕು ಅಂದ್ರೆ ಪತ್ನಿ ಈ ಕೆಲಸವನ್ನು ಮಾಡಬೇಕು..
ಮಂಗಳವಾರದ ದಿನ ಇಂಥ ಕೆಲಸಗಳನ್ನು ಮಾಡಬೇಡಿ.. ಇಲ್ಲದಿದ್ದಲ್ಲಿ ದರಿದ್ರತನ ಆವರಿಸುತ್ತದೆ..