Spiritual Story: ಜೀವನದಲ್ಲಿ ಯಶಸ್ವಿ ವ್ಯಕ್ತಿಯಾಗಬೇಕು ಅಂದ್ರೆ, ಕೆಲವು ಉತ್ತಮ ಗುಣಗಳನ್ನು ಮೈಗೂಡಿಸಿಕೊಂಡಿರಬೇಕು. ಆಗಲೇ ಆ ವ್ಯಕ್ತಿ ಯಶಸ್ವಿಯಾಗಲು ಸಾಧ್ಯ. ಆದರೆ ಈ 2 ಗುಣವಲಿರುವವರು ಎಂದಿಗೂ ಉದ್ದಾರವಾಗಲು ಸಾಧ್ಯವಿಲ್ಲ ಎನ್ನುತ್ತಾರೆ ಚಾಣಕ್ಯರು. ಹಾಗಾದ್ರೆ ಯಾವುದು ಆ ಗುಣ ಅಂತಾ ತಿಳಿಯೋಣ ಬನ್ನಿ..
ನಮ್ಮನ್ನು ಯಶಸ್ಸಿನ ದಾರಿಗೆ ಒಯ್ಯದ 2 ಗುಣಗಳು ಯಾವುದು ಅಂದ್ರೆ, ಒಂದು ಕೆಲಸ ಮಾಡಬೇಕು ಎಂದು ಬರೀ ಯೋಚಿಸತ್ತಲೇ ಇರುವುದು. ಇನ್ನೊಂದು ಯೋಚಿಸದೇ, ಕೆಲಸಕ್ಕೆ ಇಳಿಯುವುದು. ಈ ಎರಡು ಗುಣವಿರುವವರು, ಎಂದಿಗೂ ಯಶಸ್ವಿಯಾಗುವುದಿಲ್ಲ ಎಂದು ಹೇಳುತ್ತಾರೆ ಚಾಣಕ್ಯರು.
ಉದಾಹರಣೆಗೆ ನಾನೊಂದು ಹೊಟೇಲ್ ಇಡಬೇಕು ಎಂದು ಯೋಚಿಸುತ್ತಿದ್ದೇನೆ ಎಂದು ಒಬ್ಬನು ಹೇಳುತ್ತಾನೆ. ಆದರೆ ಅವನ ಬಳಿ ಹಣವಿರುವುದಿಲ್ಲ. ಆಗ ಅವನು ಇರುವ ಕೆಲಸದಲ್ಲೇ ದುಡ್ಡು ಮಾಡಿ, ಅದನ್ನು ಉಳಿತಾಯ ಮಾಡಿ, ಹೊಟೇಲ್ ಮಾಡಬೇಕು. ಆದರೆ ಅವನು ಹಾಗೆ ಮಾಡುವುದಿಲ್ಲ. ಬದಲಾಗಿ, ಹೊಟೇಲ್ ಮಾಡಬೇಕು ಎಂದು ಹೇಳುತ್ತಲೇ, ಸಮಯ ವ್ಯರ್ಥ ಮಾಡುತ್ತಾನೆ. ಈ ಮೂಲಕ ಅವನೆಂದು ಯಶಸ್ವಿ ಹೊಟೇಲ್ ಉದ್ಯಮಿಯಾಗಲು ಸಾಧ್ಯವಿಲ್ಲ.
ಇನ್ನು ಯೋಚಿಸದೇ ಕೆಲಸಕ್ಕೆ ಇಳಿಯುವವರು ಎಂದರೆ, ಕೈತುಂಬ ಹಣವಿರುತ್ತದೆ. ಅದನ್ನು ಯಾವ ರೀತಿ ಇನ್ವೆಸ್ಟ್ ಮಾಡಬೇಕು. ಆ ದುಡ್ಡನ್ನು ಸರಿಯಾದ ರೀತಿಯಲ್ಲಿ ಬಳಸಿ, ಮತ್ತಷ್ಟು ಶ್ರೀಮಂತನಾಗುವುದು ಹೇಗೆ ಎಂದು ಅವರಿಗೆ ಅರಿವಿರುವುದಿಲ್ಲ. ತಾನು ಬ್ಯುಸಿನೆಸ್ ಮಾಡುತ್ತೇನೆಂದು ಹೇಳಿ, ಯೋಚಿಸದೇ, ಹಣವನ್ನೆಲ್ಲ ಅದಕ್ಕೆ ಹಾಕಿ, ಕೊನೆಗೆ ಲಾಭ ಕಾಣದೇ, ಕೆಲಸ ಕೈ ಚೆಲ್ಲಿ ಕೂರುತ್ತಾರೆ.
ಹಾಗಾಗಿ ಚಾಣಕ್ಯರು ಹೇಳುವುದೇನೆಂದರೆ, ನೀವು ಬರೀ ಯೋಚಿಸುತ್ತ ಕೂರಬಾರದು. ಅಥವಾ ಯೋಚಿಸದೇ ಯಾವುದೇ ಕೆಲಸಕ್ಕೆ ಕೈ ಹಾಕಬಾರದು. ಚೆನ್ನಾಗಿ ಯೋಚಿಸಿ, ಅದಕ್ಕಾಗಿ ಪ್ರಯತ್ನಿಸಿ, ಆ ಕೆಲಸಕ್ಕೆ ಬೇಕಾದ ಪರಿಣಿತಿಯನ್ನು ಪಡೆದು, ಬಳಿಕ ಆ ಕೆಲಸಕ್ಕೆ ಕೈ ಹಾಕಬೇಕು. ಆ ಕೆಲಸದಲ್ಲಿ ನಿಮಗೆ ಅನುಭವವಿದ್ದಾಗ, ನೀವು ಆ ಕೆಲಸದಲ್ಲಿ ಯಶಸ್ಸು ಪಡೆಯುತ್ತೀರಿ ಅಂತಾರೆ ಚಾಣಕ್ಯರು.