Spiritual News: ರಾಯಚೂರು: ಆಗಸ್ಟ್ 30ರಿಂದ ರಾಯರ 352ನೇಯ ಆರಾಧನಾ ಮಹೋತ್ಸವ ಶುರುವಾಗಿದೆ. ಮೊದಲ ದಿನ ರಾಯರ ಪೂರ್ವಾರಾಧನೆ, ಎರಡನೇಯ ದಿನ ಮಧ್ಯಾರಾಧನೆ, ಮೂರನೇಯ ದಿನ ಉತ್ತರಾರಾಧನೆ ನಡೆಯುತ್ತದೆ. ಈ ಮೂರು ದಿನವೂ ರಾಯರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ದೇಶದ ಹಲವು ಭಾಗಗಳಿಂದ ರಾಯರ ಭಕ್ತರು, ಮಂತ್ರಾಲಯಕ್ಕೆ ಬಂದು, ದರ್ಶನ ಮಾಡಿ, ಪ್ರಸಾದ ಸ್ವೀಕರಿಸುತ್ತಾರೆ. ಈ ವೇಳೆ ರಾಯರಿಗೆ ಶೇಷವಸ್ತ್ರ ಕೂಡ ಸಮರ್ಪಿಸಲಾಗುತ್ತದೆ. ಹಾಗಾದ್ರೆ ಈ ಶೇಷವಸ್ತ್ರ ಎಲ್ಲಿಂದ ಬರುತ್ತದೆ..? ಏನಿದರ ವಿಶೇಷತೆ..? ಯಾಕೆ ರಾಯರಿಗೆ ಈ ವಸ್ತ್ರವನ್ನು ಅರ್ಪಿಸಲಾಗುತ್ತದೆ ಅಂತಾ ತಿಳಿಯೋಣ ಬನ್ನಿ..
ಗುರು ರಾಯರಿಗೆ ಅರ್ಪಿಸಲಾಗುವ ಶೇಷವಸ್ತ್ರ ತಿರುಪತಿಯಿಂದ ಬರುತ್ತದೆ. ತಿರುಪತಿ ವೆಂಕಟೇಶ ದೇವರ ಈ ವಸ್ತ್ರವನ್ನು ಉತ್ತರಾರಾಧನೆಯಂದು, ರಾಯರಿಗೆ ಅರ್ಪಿಸಲಾಗುತ್ತದೆ. ಇದನ್ನು ಅರ್ಪಿಸುವ ಮುನ್ನ ಶ್ರೀಗಳು ಇದನ್ನು ಹಿಡಿದು, ರಾಯರ ಮಠದ ಆವರಣದಲ್ಲಿ ಮೆರವಣಿಗೆ ನಡೆಸಿ, ಬಳಿಕ ವಿಶೇಷ ಪೂಜೆ ಸಲ್ಲಿಸಿದ ಬಳಿಕ, ರಾಯರಿಗೆ ಈ ರೇಷ್ಮೆ ವಸ್ತ್ರವನ್ನು ಅರ್ಪಿಸುತ್ತಾರೆ.
ಇದು ಸಾಧಾರಣ ರೇಷ್ಮೆ ವಸ್ತ್ರವಲ್ಲ. ಬದಲಾಗಿ ಈ ವಸ್ತ್ರಕ್ಕೆ ಚಿನ್ನದ ಲೇಪನವನ್ನು ಮಾಡಲಾಗುತ್ತದೆ. ಈ ವಸ್ತ್ರ ಎಷ್ಟು ವಿಶೇಷ ಅಂದ್ರೆ, ಇದನ್ನು ಅರ್ಪಿಸದಿದ್ದಲ್ಲಿ, ರಾಯರ ಆರಾಧನಾ ಮಹೋತ್ಸವವೇ ಅಪೂರ್ಣ ಎನ್ನಲಾಗಿದೆ. ಹಾಗಾಗಿ ಪ್ರತೀವರ್ಷ ತಪ್ಪದೇ, ತಿರುಪತಿಯಿಂದ ವೆಂಕಟೇಶ್ವರನ ಶೇಷವಸ್ತ್ರ, ವೆಂಕಣ್ಣನವರಿಗೆ ಬರುತ್ತದೆ.
ಇಷ್ಟೇ ಅಲ್ಲದೇ, ಮಂಚಾಲಮ್ಮನಿಗೆ ರೇಷ್ಮೇ ಸೀರೆಯನ್ನ ಕೂಡ ಅರ್ಪಿಸಲಾಗುತ್ತದೆ. ಇದು ತಿರುಪತಿಯ ಲಕ್ಷ್ಮೀ ದೇವಿಯ ರೇಷ್ಮೆ ಸೀರೆಯಾಗಿದ್ದು, ಆರಾಧನೆಯ ವಿಶೇಷವಾಗಿ, ಮಂಚಾಲಮ್ಮನಿಗೆ ಈ ಸೀರೆಯನ್ನು ಅರ್ಪಿಸಲಾಗುತ್ತದೆ. ಮಂತ್ರಾಲಯಕ್ಕೆ ಮೊದಲು ಮಂಚಾಲೆ ಎಂಬ ಹೆಸರಿತ್ತು. ಇದು ಮಂಚಾಲಮ್ಮನವರಿಂದಲೇ ಬಂದ ಹೆಸರಾಗಿದೆ.
ದಾನ ಮಾಡುವಾಗ ಇಂಥ ತಪ್ಪು ಮಾಡಬೇಡಿ, ಇಂಥ ವಸ್ತುಗಳನ್ನು ದಾನ ಮಾಡಬೇಡಿ..
ಈ ನಾಲ್ಕು ಸ್ಥಳಗಳು ನಿಮ್ಮ ಜೀವಕ್ಕೆ ಅಪಾಯ ತರಬಹುದು ಎನ್ನುತ್ತಾರೆ ಚಾಣಕ್ಯರು..