Sunday, September 8, 2024

Latest Posts

‘ಅಪ್ಪು ಸರ್‌ಗೋಸ್ಕರ ನಾವು ರಾ ಏಜೆಂಟ್ ಸಿನಿಮಾ ಕಥೆ ರೆಡಿ ಮಾಡಿದ್ವಿ..’

- Advertisement -

ಪೈಲ್ವಾನ್ ಚಿತ್ರದ ನಿರ್ದೇಶನ ಮಾಡಿ ನಿರ್ದೇಶಕ ಕೃಷ್ಣ ಮತ್ತು ಸ್ವಪ್ನಾ ಉತ್ತಮ ಯಶಸ್ಸನ್ನ ಕಂಡಿದ್ರು. ಈ ಪಯಣವನ್ನ ಮುಂದುವರಿಸಬೇಕು ಅಂತಾ, ಪುನೀತ್ ಸರ್‌ಗಾಗಿ ಕಥೆ ಬರೆದಿದ್ದರು. ಆದ್ರೆ ದುರಾದೃಷ್ಟವಶಾತ್ ಅದು ಸಾಧ್ಯವಾಗಲಿಲ್ಲ. ಈ ಬಗ್ಗೆ ಸ್ವಪ್ನಾ ಕೃಷ್ಣ ಮಾತನಾಡಿದ್ದಾರೆ.

ಸ್ವಪ್ನಾ ಕೃಷ್ಣ ಮತ್ತು ನಿರ್ದೇಶಕ ಕೃಷ್ಣ ಪುನೀತ್ ರಾಜ್‌ಕುಮಾರ್‌ಗೋಸ್ಕರ ರಾ ಏಜೆಂಟ್ ಕಥೆ ರೆಡಿ ಮಾಡಿದ್ದರು.  ಕೊರೊನಾ ಸಮಯದಲ್ಲಿ ಎರಡು ವರ್ಷ ಆ ಕಥೆಗಾಗಿಯೇ ಮೀಸಲಿಟ್ಟಿದ್ದರು. ಎರಡು ವರ್ಷ ಮನೆಯಲ್ಲಿ ಕುರಿತು ಒಂದು ಉತ್ತಮ ಸಿನಿಮಾ ಕಥೆ ರೆಡಿ ಮಾಡಿದ್ದರು. ಈ ಕುರಿತು ಅವರು ಪುನೀತ್ ಜೊತೆಯೂ ಮಾತನಾಡಿದ್ದರು. ಈ ಸಿನಿಮಾಗೊಂದು ಹಾಡು ಮಾಡಬೇಕು ಅಂತಾ ಯೋಚಿಸುತ್ತಿದ್ದರು.

ಆಗ ಪುನೀತ್ ಅವರು, ಕಥೆ ತುಂಬಾ ಚೆನ್ನಾಗಿದೆ. ಈ ಸಿನಿಮಾಗೆ ಹಾಡಿನ ಅವಶ್ಯಕತೆ ಇಲ್ಲಾ ಅಂತಾ ಹೇಳಿದ್ರು. ಆಗ ಸ್ವಪ್ನಾ, ಇಲ್ಲಾ ಸರ್ ನಿಮ್ಮ ಫ್ಯಾನ್ಸ್ ನಿಮ್ಮ ಡಾನ್ಸ್ ನೋಡ್ಬೇಕು. ಅದಕ್ಕಾದ್ರೂ ನಾವು ಈ ಸಿನಿಮಾಗೆ ಒಂದು ಹಾಡು ಬರಿಯಲೇಬೇಕು ಅಂತಾ ಹೇಳಿದ್ರು. ಆದ್ರೆ ಪುನೀತ್, ಬೇಡಾ. ಕಥೆ ತುಂಬಾ ಚೆನ್ನಾಗಿದೆ. ಇದಕ್ಕೆ ಹಾಡು ಸೇರಿಸಿ, ಕಥೆಯನ್ನ ಹಾಳು ಮಾಡೋದು ಬೇಡಾ ಅಂತಾ ಹೇಳಿದ್ರಂತೆ. ಸರಿ ಅಂತಾ ಹೇಳಿದ್ದ ಸ್ವಪ್ನಾ ಕೃಷ್ಣ, ಡಿಸೆಂಬರ್‌ನಲ್ಲಿ ಸಿನಿಮಾ ಅನೌನ್ಸ್ ಮಾಡಿ, ಮೇನಲ್ಲಿ ಶೂಟಿಂಗ್ ಶುರು ಮಾಡಬೇಕು ಅಂತಿದ್ರು.

ಆದ್ರೆ ದುರಾದೃಷ್ಟವಶಾತ್ ಅವರು ಇಂದು ನಮ್ಮೊಂದಿಗಿಲ್ಲ ಅನ್ನೋದೇ ಬೇಸರ ಅಂತಾರೆ ಸ್ವಪ್ನ. ಅವರು ಕೃಷ್ಣಾ ಅವರಿಗೆ ತುಂಬಾ ಗೌರವ ನೀಡುತ್ತಿದ್ದರು. ಅಲ್ಲದೇ ಸಿನಿಮಾ ಮಾಡೋಕ್ಕೆ ನಮಗೆ ಧೈರ್ಯ ತುಂಬುತ್ತಿದ್ದರು. ದುಡ್ಡಿನ ಬಗ್ಗೆ ಆಮೇಲೆ ಯೋಚನೆ ಮಾಡೋಣ ಕೃಷ್ಣಾ, ಮೊದಲು ಸಿನಿಮಾ ಬಗ್ಗೆ ಯೋಚಿಸು ಅಂತಾ, ನಮಗೆ ಪುನೀತ್ ಸರ್ ಧೈರ್ಯ ತುಂಬುತ್ತಿದ್ದರು ಅಂತಾ ನೆನಪಿಸಿಕೊಳ್ತಾರೆ ನಿರ್ದೇಶಕಿ ಸ್ವಪ್ನಾ.

- Advertisement -

Latest Posts

Don't Miss